ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು
ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು
ಶಿರಹಟ್ಟಿಯ ಕೆರೆಗೆ ನೆರೆ ದೇಶಗಳಿಂದ ಸಾವಿರಾರು ಪಕ್ಷಿಗಳು
ಟಿಬೆಟ್, ಲಡಾಕ್, ಬಾಂಗ್ಲಾ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತಿತರ ಪ್ರದೇಶಗಳಿಂದ ಪಕ್ಷಿಗಳು ಶಿರಹಟ್ಟಿಗೆ ವಲಸೆ ಬಂದಿದ್ದು , ಪಕ್ಷಿಪ್ರಿಯರನ್ನು ಸೆಳೆದಿವೆ. ಲಕ್ಷ್ಮೇಶ್ವರದಿಂದ 11 ಕಿಮೀ, ಗದಗದಿಂದ 23 ಕಿಮೀ ಇರುವ ಶಿರಹಟ್ಟಿ ಬಳಿಯ 120 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಈ ಪಕ್ಷಿಗಳ ಬಿಡಾರ. ಸುಮಾರು 30 ಪ್ರಬೇಧದ ಪಕ್ಷಿಗಳು ಇಲ್ಲಿಗೆ ಬಂದಿವೆ ಎನ್ನುತ್ತಾರೆ ಡಿಎಫ್ಒ ವಿಜಯ್ ಮೋಹನ್ ರಾಜ್.
ಪಕ್ಷಿಗಳು ಬೀಡು ಬಿಟ್ಟಿರುವ ಈ ಕೆರೆ ಕೂಡ ಪರಿಸರ ಮಾಲಿನ್ಯದ ಕಬಂಧ ಹಸ್ತಕ್ಕೆ ಸಿಲುಕುತ್ತಿದ್ದು , ಸಮೀಪದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿಷ ಕೆರೆಯನ್ನು ಸೇರುತ್ತಿದೆ. ಹಳ್ಳಿಯ ಜನರು ಬಟ್ಟೆ ಒಗೆಯಲು, ಜಾನುವಾರುಗಳ ಮೈ ತೊಳೆಯುವುದು ಕೂಡ ಇಲ್ಲಿಯೇ.
ಸ್ವಲ್ಪ ದಿನಗಳ ಹಿಂದೆ ಕೆಲವು ಪಕ್ಷಿಗಳು ಕೆರೆಯ ಸಮೀಪ ಸತ್ತು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಗೆಗೆ ಬಾಯಿ ಬಿಡಲು ಸಿದ್ಧರಿಲ್ಲ .
ಪ್ರಸ್ತುತ ಪಕ್ಷಿಗಳ ಸಂರಕ್ಷಣೆಯ ಕಟ್ಟೆಚ್ಚರದ ಕೆಲಸವನ್ನು ಸ್ಥಳೀಯರ ಸಂಘಟನೆಯಾದ ಗ್ರಾಮ ಅರಣ್ಯ ಸಮಿತಿ ವಹಿಸಿಕೊಂಡಿದೆ. ಕೆರೆಯ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪಕ್ಷಿಗಳ ವಲಸೆಗೆ ಅನುಕೂಲಕರ ಪರಿಸರ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಕೆರೆಯನ್ನು ಪಕ್ಷಿಧಾಮವಾಗಿ ಪರಿವರ್ತಿಸುವ ಪ್ರಸ್ತಾಲವನೆಯನ್ನು ಸ್ಥಳೀಯ ಆಡಳಿತ ಸರ್ಕಾರದ ಮುಂದಿಟ್ಟಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications