ರಕ್ತಕಣಿವೆಯಲ್ಲಿ ಮಲಗಿದ ಬಂದೂಕು, ಗಾಳಿಗೂ ಬಂತು ಉಸಿರು!
ರಕ್ತಕಣಿವೆಯಲ್ಲಿ ಮಲಗಿದ ಬಂದೂಕು, ಗಾಳಿಗೂ ಬಂತು ಉಸಿರು!
ಹದಿನಾಲ್ಕು ವರ್ಷಗಳ ನಂತರ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಶಾಂತಿಃ ಶಾಂತಿಃ ಶಾಂತಿಃ
ಭಾರತ ಹಾಗೂ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಘೋಷಿಸಿದ ಮೊದಲ ದಿನದ ಚಿತ್ರಣ ಕಳೆದ 14 ವರ್ಷಗಳಲ್ಲಿ ಕಂಡೇ ಇರದಷ್ಟು ಶಾಂತಿಯುತವಾದದ್ದು ಎಂದು ಹರ್ಷಿಸುತ್ತಾರೆ ಸಹಾಯ್. ರಂಜಾನ್ ಹಬ್ಬಕ್ಕೆ ಧನ್ಯವಾದ.
ಮಂಗಳವಾರ (ನ. 25) ಬೆಳಗ್ಗೆ 7.30 ಗಂಟೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಪಡೆಗಳು ಪರಸ್ಪರ ಗುಂಡು ಹಾರಿಸಿದ್ದು, ಬಿಟ್ಟರೆ ಆ ನಂತರ ಗಾಳಿಗೆ ಹೊಸ ಜೀವ ಬಂದಿದೆ. ಉಭಯ ದೇಶಗಳ ಕದನ ವಿರಾಮದ ಈ ತೀರ್ಮಾನ ಜಮ್ಮು ಮತ್ತು ಕಾಶ್ಮೀರದ ಮಕ್ಕಳಿಗೆ ಹೊಸ ನೀಲಾಕಾಶ ಕಾಣಿಸುವಂತೆ ಮಾಡಿದೆ.
ಈ ಹಿಂದೆ ಕದನ ವಿರಾಮ ಘೋಷಿಸಿದರೂ, ಹಬ್ಬ ಮತ್ತಿತರ ಸಂಭ್ರಮಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಪರಿಪಾಠವಿತ್ತು. ಆದರೆ ಈ ಸಲದ ರಂಜಾನ್ ಸಂಭ್ರಮವನ್ನು ಮಿಲಿಟರಿ ಪಡೆಗಳು ಕೂಡ ಹಾಡು- ಪಾಡಿನ ಮೂಲಕ ತಣ್ಣಗೆ ಆಚರಿಸಲು ನಿರ್ಧರಿಸಿದ್ದಾರೆ.
ಈ ಗುಂಡಿನಾಟದ ಆವುಟ ನಿಲ್ಲಲಿ. ಕದನ ವಿರಾಮ ಹಾಗೆಯೇ ಚಿರಂತನವಾಗಲಿ ಅನ್ನೋದು ನನ್ನ ಬಯಕೆ. ಬಹುಶಃ ಈ ಸಲದ ರಂಜಾನಿನಲ್ಲಿ ಅಲ್ಲಾಹನ ಆಶೀರ್ವಾದ ದೊಡ್ಡದಿದೆ. ಭಾರತ ಮತ್ತು ಪಾಕಿಸ್ತಾನದ ಹಸನು ಬಾಂಧವ್ಯಕ್ಕೆ ಇದು ಮುನ್ನುಡಿ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಶೌಕತ್ ಸುಲ್ತಾನ್ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಪಾಕಿಸ್ತಾನದದಿಂದ ಅತಿಕ್ರಮಣಕಾರರ ನುಸುಳುವಿಕೆ ಎಲ್ಲಿಯವರೆಗೆ ಇರುವುದಿಲ್ಲವೋ ಕದನ ವಿರಾಮ ಕೂಡ ಅಲ್ಲಿಯವರೆಗೆ ಇರುತ್ತದೆ. ನುಸುಳಿವಿಕೆ ಮುಂದುವರೆದಲ್ಲಿ ಮತ್ತೆ ಗುಂಡೇಟು ಕೊಡಲು ನಾವು ಮುನ್ನುಗ್ಗಲೇಬೇಕಾಗುತ್ತದೆ ಎಂಬುದು ಭಾರತದ ಹೇಳಿಕೆ. ಮುಜಾಹಿದ್ದೀನ್ ಚಟುವಟಿಕೆಗಳು ಕದನ ವಿರಾಮದಂಥಾ ಭಾವನಾತ್ಮಕ ಆಮಿಷಕ್ಕೆ ಯಾವತ್ತಿಗೂ ಬಲಿಯಾಗುವುದಿಲ್ಲ. ನಾವು ನಮ್ಮ ಸಾಧನೆಯನ್ನು ಮಾಡಿಯೇ ತೀರುತ್ತೇವೆ ಎಂಬುದು ಹಿಜ್ಬ್- ಉಲ್- ಮುಜಾಹಿದ್ದೀನ್ ಸಂಘಟನೆಯ ವಕ್ತಾರ ಸಲೀಂ ಹಷ್ಮಿ ಬಿಗಿ ಪಟ್ಟು. ನೀಲಾಕಾಶ ನೋಡುತ್ತಾ ಕೂತಿರುವ ಕಾಶ್ಮೀರಿ ಕಂದಮ್ಮ ಸಲೀಂ ಹಷ್ಮಿ ಮಾತು ಕೇಳಿ ಮತ್ತೆ ಬೆಚ್ಚಿದೆ. ಇಷ್ಟಕ್ಕೂ ಕದನ ವಿರಾಮ ಎಲ್ಲಿಯವರೆಗೆ ಇರುತ್ತದೋ?
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications