ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಮಾರು ಸ್ವಾಮೀಜಿಗಳ ಪರ್ಯಾಯ ಪೂರ್ವ ಸಂಚಾರ ಆರಂಭ

By Staff
|
Google Oneindia Kannada News

ಅದಮಾರು ಸ್ವಾಮೀಜಿಗಳ ಪರ್ಯಾಯ ಪೂರ್ವ ಸಂಚಾರ ಆರಂಭ
2004, ಜನವರಿ 4ರಂದು ಪುರ ಪ್ರವೇಶ

ಉಡುಪಿ : ಮುಂದಿನ ವರ್ಷ ರಜತ ಪೀಠವನ್ನೇರಲಿರುವ ಅದಮಾರು ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಬುಧವಾರ ಪರ್ಯಾಯ ಪೂರ್ವ ಸಂಚಾರ ಆರಂಭಿಸಿದರು.

ಸಂಚಾರ ಹೊರಟ ವಿಶ್ವ ಪ್ರಸನ್ನ ತೀರ್ಥರಿಗೆ ಪರ್ಯಾಯ ಸ್ವಾಮೀಜಿಯಾಗಿರುವ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಗಳು ಫಲ ಪುಷ್ಪ ಗಂಧ ಕಾಣಿಕೆ ದ್ರವ್ಯಗಳನ್ನು ಅರ್ಪಿಸಿದರು. ಬೀಳ್ಕೊಡುಗೆ ಸಂದರ್ಭದಲ್ಲಿ ಈ ಪರ್ಯಾಯ ಪೂರ್ವ ಸಂಚಾರ ರಾಜಸೂಯ ಯಾಗವಿದ್ದಂತೆ. ಅದರಲ್ಲಿ ದಿಗ್ವಿಜಯಿಯಾಗಿ ಬನ್ನಿ. ಇದು ದ್ರವ್ಯ ಸಂಪಾದನೆ ಯಾನವಲ್ಲ. ಕೃಷ್ಣ ಮಠಕ್ಕೆ ಇನ್ನಷ್ಟು ಭಕ್ತರನ್ನು ಕರೆತರಲು ಇದೊಂದು ಸುಯೋಗ ಎಂದು ವಿದ್ಯಾಧೀಶ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರನ್ನು ಅಭಿನಂದಿಸಿದರು.

ಬೆಂಗಳೂರಿನ ಜಯನಗರದಲ್ಲಿರುವ ರಾಘವೇಂದ್ರ ಮಠದಲ್ಲಿ ಚಾತುರ್ಮಾಸ್ಯ ವ್ರತವನ್ನು ನೆರವೇರಿಸಲಿರುವ ಶ್ರೀ ವಿಶ್ವ ಪ್ರಸನ್ನರು ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಚಾರ ಕೈಗೊಂಡು ಜನವರಿ 4ರಂದು ಪುರಪ್ರವೇಶ ಮಾಡಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X