ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ಕೇರಳ ಶಾಲಾ ಶಿಕ್ಷಣ ಕಾಯಕಲ್ಪ

By Staff
|
Google Oneindia Kannada News

ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ಕೇರಳ ಶಾಲಾ ಶಿಕ್ಷಣ ಕಾಯಕಲ್ಪ
ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ, ಕೇರಳದಲ್ಲಿ ಶಿಕ್ಷಣದ ಸ್ವರೂಪದ ಮರುಚಿಂತನೆ

ಬೆಂಗಳೂರು : ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಕಾಯಕಲ್ಪ ನೀಡಲು ಕೇರಳ ಸರ್ಕಾರ ಉದ್ದೇಶಿಸಿದ್ದು - ಜ್ಞಾನಪೀಠ ಪುರಸ್ಕೃತ ಸಾಹಿತಿ, ಕನ್ನಡಿಗ ಡಾ. ಯು.ಆರ್‌.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಆಯೋಗವೊಂದನ್ನು ರಚಿಸಿದೆ.

ಅನಂತಮೂರ್ತಿ ನೇತೃತ್ವದ ಐವರು ತಜ್ಞರ ಆಯೋಗ ಶಾಲಾ ಶಿಕ್ಷಣ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಕೇರಳದ ಶಾಲೆಗಳ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆಯೋಗಕ್ಕೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.

ಡಾ. ಎ.ಸುಕುಮಾರನ್‌ ನಾಯರ್‌, ಡಾ. ಡಿ.ಬಾಬು ಪೌಲ್‌, ಪ್ರೊ. ಎನ್‌. ಪುರುಷೋತ್ತಮ್‌, ಪ್ರೊ.ಕೆ.ಎಂ. ಬಹುವುದ್ದೀನ್‌ ಅವರು ಅನಂತಮೂರ್ತಿ ಅಧ್ಯಕ್ಷತೆಯಲ್ಲಿನ ಆಯೋಗದ ಸದಸ್ಯರು.

ಸಂತಸ : ಕೇರಳ ಶಾಲಾ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುರಿತು ಅನಂತಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X