ಗಂಗೂಬಾಯಿಗೆ ಅನಾರೋಗ್ಯ ; ಸರ್ಕಾರದಿಂದ 5 ಲಕ್ಷ ರು.ನೆರವು
ಗಂಗೂಬಾಯಿಗೆ ಅನಾರೋಗ್ಯ ; ಸರ್ಕಾರದಿಂದ 5 ಲಕ್ಷ ರು.ನೆರವು
ಬಿಸ್ಮಿಲ್ಲಾ ಖಾನ್ ಪಟ್ಟ ತೊಂದರೆ ಇವರಿಗೆ ಪಾಠವಾಗಿದೆಯಾದರೆ ಸಂತೋಷ
ಗಂಗೂಬಾಯಿ ಅವರ ದೇಹಸ್ಥಿತಿಯ ಬಗ್ಗೆ ತಿಳಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೆರವು ನೀಡುವಂತೆ ಆದೇಶ ಕೊಟ್ಟ ಬೆನ್ನಿಗೇ ಇಲಾಖೆಯ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಚುರುಕಾಗಿದ್ದಾರೆ. ಖುದ್ದು ಮುದ್ದುಕೃಷ್ಣ ಗಂಗೂಬಾಯಿ ಹಾನಗಲ್ ಅವರ ಮನೆಗೆ ಹೋಗಿ, ಆಕೆಯ ಆರೋಗ್ಯ ವಿಚಾರಿಸಿಕೊಂಡು, ಆಕೆಯ ಕೈಗೇ ಚೆಕ್ಕನ್ನು ಕೊಟ್ಟು ಬಂದಿದ್ದಾರೆ.
ಕೊನೆಗಾಲದಲ್ಲಿ ಅನಾರೋಗ್ಯದ ನಿಮಿತ್ತ ಕಲಾವಿದರು ಪರದಾಟ ಪಡದಿರಲಿ ಎಂಬ ಕಾರಣಕ್ಕೆ ಆರೋಗ್ಯ ವಿಮೆ ಮಾಡಿಸುವ ಯೋಚನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರದ್ದು. ಅದು ಬೇಗ ಜಾರಿಗೆ ಬರಲಿ. ಕಲಾವಿದರ ಅಳಲು ಇನ್ನು ಮುಂದಾದರೂ ಜೋರಾಗದಿರಲಿ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications