ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಬಂದರೆ ಮಾತ್ರ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ

By Staff
|
Google Oneindia Kannada News

ಮಳೆ ಬಂದರೆ ಮಾತ್ರ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ
’ಬರ ಪರಿಸ್ಥಿತಿಯ ನಡುವೆ ಹೊಸ ಸಮ್ಮೇಳನದ ಯೋಚನೆಯಿಲ್ಲ’

ನರಸಿಂಹರಾಜಪುರ: ಈ ವರ್ಷವೂ ರಾಜ್ಯದಲ್ಲಿ ಬರದ ಪರಿಸ್ಥಿತಿ ಮುಂದುವರೆದರೆ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೇ ಎಂಬ ಬಗ್ಗೆ ಚರ್ಚೆ ಎದ್ದಿದ್ದು , ಈ ವರ್ಷ ಮಳೆ ಚೆನ್ನಾಗಿ ಬಂದರೆ ಮಾತ್ರ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಸ್ಪಷ್ಟಪಡಿಸಿದರು.

ವಿಶ್ವಕನ್ನಡ ಸಮ್ಮೇಳನ ನಡೆಯದಿದ್ದರೂ- ಮೂಡಬಿದ್ರೆಯಲ್ಲಿ ನಿಗದಿಯಾಗಿರುವ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ. ಅಖಿಲ ಭಾರತ ಸಮ್ಮೇಳನ ನಡೆಸುವುದಕ್ಕೆ ಬರ ಪರಿಸ್ಥಿತಿಯಿಂದ ಅಷ್ಟೇನೂ ತೊಂದರೆ ಉಂಟಾಗಲಿಕ್ಕಿಲ್ಲ ಎಂದು ಪುನರೂರು ಅಭಿಪ್ರಾಯಪಟ್ಟರು.

ಹೊಸದಾಗಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಯೋಚನೆಯನ್ನು ಮಾತ್ರ ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದ ಪುನರೂರು- ಸಾಹಿತ್ಯ ಪರಿಷತ್ತಿನ ಹೋರಾಟ-ಸಾಧನೆ- ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಕಳೆದ 12 ವರ್ಷಗಳಿಂದ ಆಕಾಶವಾಣಿ ದೊಡ್ಡ ಬಳ್ಳಾಪುರ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮ ಪ್ರಸಾರವಾಗುತ್ತಿರಲಿಲ್ಲ . ಈ ಕುರಿತು ಆಕಾಶವಾಣಿ ಕೇಂದ್ರವನ್ನು ಪರಿಷತ್ತು ತರಾಟೆಗೆ ತೆಗೆದುಕೊಂಡ ನಂತರ ಈಗ ಕನ್ನಡ ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ. ದತ್ತಿ ಸಂಗ್ರಹವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಪುನರೂರು ಹೇಳಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X