ರಾಜೂ ಗೌಡರನ್ನು ಸರಕಾರ ಕಾಡಿಗೆ ಕಳಿಸೊಲ್ಲ
ಬೆಂಗಳೂರು: ಕೃಷಿ ಸಂಸ್ಕರಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ರಾಜೂ ಗೌಡ ಅವರನ್ನು ಸಂಧಾನಕ್ಕಾಗಿ ಕಾಡಿ ಕಳುಹಿಸಿಕೊಡಬೇಕು ಎನ್ನುವ ವೀರಪ್ಪನ್ ಬೇಡಿಕೆಯನ್ನು ರಾಜ್ಯ ಸಚಿವ ಸಂಪುಟ ಸೋಮವಾರ ಕಡ್ಡಿ ತುಂಡು ಮಾಡಿದಂತೆ ತಳ್ಳಿ ಹಾಕಿದೆ.
ಮಾಜಿ ಸಚಿವ ನಾಗಪ್ಪ ಅವರನ್ನು ಅಪಹರಿಸಿ ಒತ್ತೆಯಿರಿಸಿಕೊಂಡಿರುವ ನರ ಹಂತಕ ವೀರಪ್ಪನ್, ಸಂಧಾನಕ್ಕಾಗಿ ಕೊಳತ್ತೂರು ಮಣಿ ಅಥವಾ ಸಚಿವ ರಾಜೂ ಗೌಡ ಅವರನ್ನು ಸಂಧಾನಕ್ಕಾಗಿ ಕಾಡಿಗೆ ಕಳುಹಿಸಬೇಕು ಎಂದು ತಾನು ಕಳುಹಿಸಿರುವ ನಾಲ್ಕನೇ ಕ್ಯಾಸೆಟ್ನಲ್ಲಿ ತಿಳಿಸಿದ್ದಾನೆ. ಆದರೆ ರಾಜೂ ಗೌಡರನ್ನು ಸಂಧಾನಕ್ಕಾಗಿ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಹಿತಿ ಸಚಿವ ಕಾಗೋಡು ತಿಮ್ಮಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಳತ್ತೂರು ಮಣಿಯನ್ನು ಸಂಧಾನಕ್ಕಾಗಿ ಕಳುಹಿಸುವುದಕ್ಕೆ ಸರಕಾರದ ಅಭ್ಯಂತರವೇನೂ ಇಲ್ಲ . ಆದರೆ ಜೈಲಿನಲ್ಲಿರುವ ಮಣಿ ಜಾಮೀನಿನ ಮೇಲೆ ಬಿಡುಗಡೆಗೊಳ್ಳಬೇಕು. ಕರ್ನಾಟಕ ಹೈಕೋರ್ಟ್ನಲ್ಲಿ ಎರಡು ಕೇಸುಗಳು ಸೇರಿದಂತೆ ಕೊಳತ್ತೂರು ಮಣಿ ಒಟ್ಟು ಐದು ಕೇಸುಗಳನ್ನು ಎದುರಿಸುತ್ತಿದ್ದಾರೆ.
ನನ್ನ
ಗಂಡನ
ಬಿಡಿಸಿಕೊಡಿ
ನರಹಂತಕ
ವೀರಪ್ಪನ್
ಸೆರೆಯಿಂದ
ತಮ್ಮ
ಪತಿಯನ್ನು
ತ್ವರಿತವಾಗಿ
ಬಿಡಿಸಿಕೊಡುವಂತೆ
ಮಾಜಿ
ಸಚಿವ
ನಾಗಪ್ಪ
ಅವರ
ಪತ್ನಿ
ಪರಿಮಳಾ
ನಾಗಪ್ಪ
ಅವರು
ಮುಖ್ಯಮಂತ್ರಿ
ಎಸ್ಸೆಂ.ಕೃಷ್ಣ
ಅವರಿಗೆ
ಮನವಿ
ಮಾಡಿದ್ದಾರೆ.
ಕೃಷ್ಣ ಅವರನ್ನು ಸೋಮವಾರ (ನ.04) ಭೇಟಿ ಮಾಡಿದ ಪರಿಮಳಾ ಅವರು, ತಮ್ಮ ಪತಿಯ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಮಳಾ, ತಮ್ಮ ಪತಿಯ ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕೃಷ್ಣ ತಮಗೆ ಆಶ್ವಾಸನೆ ನೀಡಿರುವುದಾಗಿ ತಿಳಿಸಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ