ಕ್ಯಾಚ್ ವೀರಪ್ಪನ್: ಅಡಗುತಾಣಕ್ಕೆ 1500 ಪೊಲೀಸರ ಮುತ್ತಿಗೆ
ರಾಮಾಪುರ : ಇಲ್ಲಿಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ನರ ಹಂತಕ ವೀರಪ್ಪನ್ ಅಡಗಿಕೊಂಡಿದ್ದಾನೆನ್ನುವ ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಎಸ್ಟಿಎಫ್ ಪೊಲೀಸರು ಸೌಮಿ ಗುಡ್ಡದ ಬಳಿಯ ವೀರಪ್ಪನ್ ಅಡಗುತಾಣಕ್ಕೆ ಮುತ್ತಿಗೆ ಹಾಕಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮುಂದಾಳತ್ವದಲ್ಲಿ 40 ಕ್ಕೂ ಹೆಚ್ಚು ತುಕಡಿಗಳ 1500 ಕ್ಕೂ ಹೆಚ್ಚು ಎಸ್ಟಿಎಫ್ ಯೋಧರು ನಿರ್ಣಾಯಕ ಸಮರದಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ (ಸೆ.06) ಮಧ್ಯರಾತ್ರಿಯಿಂದಲೂ ಕಾರ್ಯಾಚರಣೆ ನಡೆಯುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಮೂರು ಆ್ಯಂಬುಲೆನ್ಸ್ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಕಾರ್ಯಾಚರಣೆಗೆ
ವಿರೋಧ
ವೀರಪ್ಪನ್
ವಿರುದ್ಧ
ಏಕಾಏಕಿ
ನಡೆದಿರುವ
ತೀವ್ರ
ಕಾರ್ಯಾಚರಣೆಯನ್ನು
ವಿರೋಧಿಸಿ
ಅಪಹೃತ
ಎಚ್.ನಾಗಪ್ಪನವರ
ಅಭಿಮಾನಿಗಳು
ಧರಣಿ
ಆರಂಭಿಸಿದ್ದಾರೆ.
ರಾಮಾಪುರ
ಪೊಲೀಸ್
ಠಾಣೆಯ
ಮುಂಭಾಗದಲ್ಲಿ
ಶುಕ್ರವಾರ
ಮಧ್ಯರಾತ್ರಿಯಿಂದ
ಧರಣಿ
ಆರಂಭಿಸಿರುವ
ಮಾಜಿ
ಸಚಿವ
ನಾಗಪ್ಪ
ಅವರ
ಅಭಿಮಾನಿಗಳು,
ಕಾರ್ಯಾಚರಣೆಯಿಂದ
ನಾಗಪ್ಪನವರ
ಜೀವಕ್ಕೆ
ಅಪಾಯವಾಗಬಹುದೆಂದು
ಆತಂಕ
ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ