ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.19ರಿಂದ ನಡೆಯುವ ರಾಷ್ಟ್ರೀಯ ಸ್ಪೀಕರ್ಸ್‌ ಮೇಳಕ್ಕೆ ಬೆಂಗಳೂರು ಆತಿಥ್ಯ

By Staff
|
Google Oneindia Kannada News

ಬೆಂಗಳೂರು: ಜೂನ್‌ 19ರಿಂದ 22ರವರೆಗೆ ನಗರದಲ್ಲಿ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಇಪ್ಪತ್ತು ವರ್ಷಗಳ ನಂತರ ಮೊತ್ತ ಮೊದಲಬಾರಿಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಮಟ್ಟದ ಸ್ಪೀಕರ್‌ ಸಮ್ಮೇಳನ ನಡೆಯಲಿದೆ ಎಂದು ವಿಧಾನಸಭೆಯ ನೂತನ ಕಾರ್ಯದರ್ಶಿ ಟಿ. ರಾಜಣ್ಣ ಬುಧವಾರ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಲೋಕಸಭಾ ಸ್ಪೀಕರ್‌ ಜಿ.ಎಂ. ಸಿ. ಬಾಲಯೋಗಿ ನೇತೃತ್ವದಲ್ಲಿನಡೆಯಬೇಕಿದ್ದ ಈ ಸಮ್ಮೇಳನ, ಬಾಲಯೋಗಿಯವರ ಅಕಾಲ ಮರಣದಿಂದ ಮುಂದೂಡಲ್ಪಟ್ಟಿತ್ತು.

ಐದು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಲೋಕಸಭೆ, ರಾಜ್ಯಸಭೆ ಮತ್ತು ದೇಶದ ಎಲ್ಲ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನ ಸ್ಪೀಕರ್‌ಗಳು ಭಾಗವಹಿಸುವರು. ಮುಖ್ಯಸಚೇತಕರು , ಕಾರ್ಯದರ್ಶಿಗಳು ಹಾಗೂ ಪ್ರತಿಪಕ್ಷಗಳ ನಾಯಕರು ಸೇರಿದಂತೆ ಒಟ್ಟು 400 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X