ಇನ್ನು ಸ್ವಲ್ಪ ಹೊತ್ತು ಕರೆಂಟು ಬರದಿದ್ದರೆ 21 ಕೂಸುಗಳು ಬದುಕುತ್ತಿರಲಿಲ್ಲ
ಬೆಂಗಳೂರು : ಮೇ 14, ಮಂಗಳವಾರ. ನಗರದ ಪ್ರತಿಷ್ಠಿತ ಆಸ್ಪತ್ರೆಯಾಂದರಲ್ಲಿ ಕರೆಂಟು ಖೋತಾ. ಜನರೇಟರ್ರೂ ಕೈಕೊಟ್ಟಿತು. ಆಸ್ಪತ್ರೆಯ ಎಲ್ಲಾ ದೀಪಗಳೂ ನಂದಿ ಹೋದವು. ಕರೆಂಟನ್ನೇ ನೆಚ್ಚಿಕೊಂಡಿದ್ದ ವೈದ್ಯಕೀಯ ಉಪಕರಣಗಳು ಕಣ್ಣು ಮುಚ್ಚಿದವು. ಎಲ್ಲಕ್ಕೂ ಮಿಗಿಲಾಗಿ, ಇನ್ಕ್ಯುಬೇಟರ್ನಲ್ಲಿ ಮಲಗಿದ್ದ 21 ಕಂದಮ್ಮಗಳು ಜೀವನ್ಮರಣ ಹೋರಾಟ ನಡೆಸಿದವು!
ಗ್ರಿಡ್ ವೈಫಲ್ಯದ ಪರಿಣಾಮ ಎಗ್ಗು ಸಿಗ್ಗಿಲ್ಲದೆ ಖೋತಾ ಆಗುತ್ತಿರುವ ವಿದ್ಯುತ್ತಿನ ದೆಸೆಯಿಂದ ಸಾಮಾಜಿಕ ವ್ಯವಸ್ಥೆ ಏನೆಲ್ಲಾ ಸ್ವರೂಪದ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ ಎಂಬುದಕ್ಕೆ ಇದು ಇನ್ನೊಂದು ನಮೂನೆ. ಪುಣ್ಯಕ್ಕೆ ಅರ್ಧ ತಾಸು ಕಳೆದಿತ್ತು ಅಷ್ಟೆ. ಅಷ್ಟರಲ್ಲಿ ಕರೆಂಟು ಬಂತು. ನಲುಗಿಹೋಗುತ್ತಿದ್ದ ಇನ್ಕ್ಯುಬೇಟರಿನ ಮಕ್ಕಳಿಗೆ ದೊರೆತದ್ದು ಅಕ್ಷರಶಃ ಮರುಜೀವ.
ಅಂದಹಾಗೆ, ಈ ಆಸ್ಪತ್ರೆ ಯಾವತ್ತೂ ಇಂಥಾ ತೊಂದರೆ ಅನುಭವಿಸಿರಲಿಲ್ಲವಂತೆ. ಖಾಸಗಿ ಆಸ್ಪತ್ರೆಗಳ ಸ್ಥಿತಿಯೇ ಹೀಗಾದರೆ ಸರ್ಕಾರಿ ಆಸ್ಪತ್ರೆಗಳ ಗತಿ? ದೇವರೇ ಗತಿ. ಯಾಕೆಂದರೆ, ಜನರೇಟರಿನ ಮುಖ ಕೂಡ ಕಾಣದ ಸರ್ಕಾರಿ ಆಸ್ಪತ್ರೆಗಳು ಅಸಂಖ್ಯ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...