ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣ ನಂ. ಒನ್ನೂ.. ಪ್ರತಿಪಕ್ಷಗಳ ಪ್ರತಿಕ್ರಿಯೆಯೂ..

By Staff
|
Google Oneindia Kannada News

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮತ್ತೊಮ್ಮೆ ರಾಷ್ಟ್ರದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತ ಕನಕಪುರ ಉಪಚುನಾವಣೆ ಹಣಾಹಣಿ ನಡೆಯುತ್ತಿರುವಾಗ ಕೃಷ್ಣರ ಮಕುಟಕ್ಕೆ ಅನಾಯಾಸವಾಗಿ ಬಂದ ಈ ಗರಿ ಪ್ರತಿಪಕ್ಷಗಳಿಗೆ ಹಾಗೂ ಕೃಷ್ಣ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ.

ಎರಡು ಬಾರಿ ಕೃಷ್ಣ ನಂಬರ್‌ 1 ಎನಿಸಿಕೊಂಡಿರುವ ಬಗ್ಗೆ ಕೇಳಿ ಬಂದಿದ್ದ ಮತ್ತು ಕೇಳಿಬರುತ್ತಿರುವ ಪ್ರತಿಕ್ರಿಯೆಗಳು ಹೀಗಿವೆ:

  • ಕೃಷ್ಣಾ ನಂ.ಒನ್ನಾ? ಇಂಡ್ಯಾ ಟುಡೆ ಕೊಟ್ರೇನು ಪ್ರಯೋಜ್ನ. ಮಂಡ್ಯ ಟುಡೆ ಕೊಡಬೇಕು -ಕಾಂಗ್ರೆಸ್‌ ಬಂಡಾಯ ಸದಸ್ಯ
  • ದಿಲ್ಲಿ ಸರ್ಟಿಫಿಕೇಟ್‌ ಪಡದ್ರೆ ಸಾಲ್ದು, ಹಳ್ಳಿ ಸರ್ಟಿಫಿಕೇಟ್‌ ಪಡೀಬೇಕು - ಜಗದೀಶ ಶೆಟ್ಟರ್‌
  • ನವಕರ್ನಾಟಕ ಶಿಲ್ಪಿ ಕೆಂಗಲ್‌ ಹನುಮಂತಯ್ಯ, ದೇವರಾಜ ಅರಸು, ನಿಜಲಿಂಗಪ್ಪ ಅವರಿಗಿಂತ ಕೃಷ್ಣ ದೊಡ್ಡೋರಾ? - ಪ್ರತಿಪಕ್ಷ ಮುಖಂಡರು.
  • ಸರಕಾರಿ ನೌಕರರಿಗೆ ಸಂಬಳ ಕೊಡಲೂ ಸರಕಾರದ ಖಜಾನೆಯಲ್ಲಿ ಹಣವಿಲ್ಲ. ಆದರೂ ಕೃಷ್ಣ ನಂ.1. ಯಾರು ಯಾರನ್ನು ಎಲ್ಲಿ ಸಮೀಕ್ಷೆ ಮಾಡಿದರೋ ಗೊತ್ತಿಲ್ಲ. ಇದು ಚುನಾವಣೆ ಲಾಭಕ್ಕಾಗಿ ಹಣ ಕೊಟ್ಟು ಬರಸಿಕೊಳ್ಳಲಾದ ಸಮೀಕ್ಷೆ - ಸಿದ್ಧರಾಮಯ್ಯ, ಜಾತ್ಯತೀತ ದಳ ವಸಿಷ್ಠ.
  • ರಾಜ್ಯದಲ್ಲೊಂದು ಸರಕಾರ ಇದೆ. ಅದಕ್ಕೊಬ್ಬರು ಮುಖ್ಯಮಂತ್ರಿ ಇದ್ದಾರೆ ಅಂತ ಸಾಬೀತು ಮಾಡಿದ್ದೇ ಎಸ್‌.ಎಂ. ಕೃಷ್ಣ ಅವರಲ್ಲದೆ ಮತ್ಯಾರು ನಂ.1 ಆಗಲು ಸಾಧ್ಯ - ಕಾಂಗ್ರೆಸ್‌ ವರಿಷ್ಠರು.
    ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಹೇಳಿಕೆ-
  • ಕೃಷ್ಣ ನಂ.1 ಅನ್ನೋದನ್ನು ಅವರ ಆಡಳಿತ ನೋಡಿ ಅಳೆಯಬೇಕೇ ಹೊರತು, ವೇಷ ಭೂಷಣ, ಸರಳ ಸಜ್ಜನಿಕೆ ನೋಡಿ ಅಲ್ಲ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಒಂದನ್ನು ಬಿಟ್ಟು ಕೃಷ್ಣ , ಮತ್ತಾವ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿಲ್ಲ .
  • ಕೃಷ್ಣರ ಕಾಲದಲ್ಲಿ ನಡೆದಿರುವಷ್ಟು ರೈತರ ಆತ್ಮಹತ್ಯೆ ಮತ್ತಾವ ಮುಖ್ಯಮಂತ್ರಿ ಕಾಲದಲ್ಲೂ ನಡೆದಿಲ್ಲ ಆದರೂ ಅವರು ನಂ.1. ಹ್ಹ.ಹ್ಹ.. ಹ್ಹಹಹ
  • ಸಚಿವ ಸಂಪುಟ ಸಹೋದ್ಯೋಗಿಗಳ ಮೇಲೆ ಆರೋಪ ಇದ್ದರೂ, ಅವರನ್ನು ರಕ್ಷಿಸುವ, ಹೈಕಮಾಂಡ್‌ ಒತ್ತಡಕ್ಕೆ ಮಣಿದು, ನಕಲಿ ಛಾಪಾ ಕಾಗದ ಹಗರಣದಲ್ಲಿ ದೃಢ ನಿರ್ಧಾರ ತಳೆಯದ ಕೃಷ್ಣರಿಗೆ ಹೇಗೆ ನಂ.1 ಪಟ್ಟ ಬಂತೆಂಬುದೇ ಯಕ್ಷಪ್ರಶ್ನೆ.
ಕೃಷ್ಣ ನಂ.1 : ನಿಮ್ಮ ಅಭಿಪ್ರಾಯ ಏನು?
ಜನಪ್ರಿಯತೆಯ ತುತ್ತತುದಿಯಲ್ಲಿರುವ ಎಸ್‌.ಎಂ. ಕೃಷ್ಣ ನಂ.1 ಮುಖ್ಯಮಂತ್ರಿ

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X