ಜನವರಿ 14ರಿಂದ ಎಸ್.ಟಿ.ಡಿ. ದರ ಶೇಕಡಾ 60ರಷ್ಟು ಇಳಿಕೆ
ನವದೆಹಲಿ : ಖಾಸಗಿ ದೂರವಾಣಿ (ಮೊಬೈಲ್) ಕಂಪನಿಗಳೊಂದಿಗೆ ದರ ಸಮರಕ್ಕೆ ನಿಂತಿರುವ ಕೇಂದ್ರ ಸರಕಾರ, ದೂರವಾಣಿ ಗ್ರಾಹಕರಿಗೆ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ವಿಶೇಷ ಕೊಡುಗೆ ನೀಡಿದೆ. ಎಸ್.ಟಿ.ಡಿ. ಕರೆಗಳ ದರವನ್ನು ಶೇ.60ರಷ್ಟು ಇಳಿಸಿದೆ.
ಇದರಿಂದಾಗಿ ಸರಕಾರಿ ಒಡೆತನದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ಗೆ ಮುಂದಿನ 6 ತಿಂಗಳ ಅವಧಿಯಲ್ಲಿ ಸುಮಾರು 3,000 ಕೋಟಿ ರುಪಾಯಿ ನಷ್ಟ ಸಂಭವಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ದರ ಕಡಿತದ ಪರಿಣಾಮವಾಗಿ ಕರೆಗಳ ಸಂಖ್ಯೆ ವೃದ್ಧಿ ಆಗುವುದರಿಂದ ಈ ನಷ್ಟ ಭರಿಸಬಹುದು ಎಂಬುದು ಸರಕಾರದ ಅನಿಸಿಕೆ.
ಈ ವಿಷಯವನ್ನು ಶುಕ್ರವಾರ ಕೇಂದ್ರ ದೂರ ಸಂಪರ್ಕ ಸಚಿವ ಪ್ರಮೋದ್ ಮಹಾಜನ್ ಪ್ರಕಟಿಸಿದ್ದಾರೆ. ಈ ಮುನ್ನ ಖಾಸಗಿ ಮೊಬೈಲ್ ಕಂಪನಿಗಳು ಶೇ.50ರಷ್ಟು ದರ ಇಳಿಸಿ ಪೈಪೋಟಿಗೆ ನಾಂದಿ ಹಾಡಿದ್ದವು. ಇದಕ್ಕೆ ಸವಾಲೊಡ್ಡಿದ ಕೇಂದ್ರ ಸರಕಾರ ಶೇ.60ರಷ್ಟು ದರ ಇಳಿಸಿ, ಖಾಸಗಿ ಕಂಪನಿಗಳನ್ನು ಬೆಚ್ಚಿ ಬೀಳಿಸಿದೆ.
ಒಟ್ಟಿನಲ್ಲಿ ಈ ಇಬ್ಬರ ಜಗಳದಲ್ಲಿ ಭಾರತೀಯ ದೂರವಾಣಿ ಗ್ರಾಹಕರಿಗೆ ಲಾಭ ಆಗುತ್ತಿದೆ. ಜನವರಿ 14ರಿಂದ ಜಾರಿಗೆ ಬರುವ ಈ ಹೊಸದರವನ್ನು ಎರಡು ಸ್ತರಗಳಲ್ಲಿ ವಿಂಗಡಿಸಲಾಗಿದೆ. ಬೆಳಗ್ಗೆ 9ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕರೆದಟ್ಟಣೆಯ ಅವಧಿ ಈ ಅವಧಿಯಲ್ಲಿ ದರ ದುಬಾರಿ.
ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ 9 ಗಂಟೆ ವರೆಗೆ ಕರದಟ್ಟಣೆ ಇಲ್ಲದ ಅವಧಿ. ಈ ಅವಧಿಯಲ್ಲಿ ಕಡಿಮೆ ದರ. ಇದರೊಂದಿಗೆ 50ರಿಂದ 200 ಕಿ.ಮೀ, 200ರಿಂದ 500 ಕಿ.ಮೀಟರ್ ಮತ್ತು 500 ಕಿ.ಮೀಟರ್ಗಿಂತ ಹೆಚ್ಚು ದೂರದ ಕರೆಗಳು ಎಂದು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.
50ರಿಂದ 200 ಕಿ.ಮೀಟರ್ವರೆಗಿನ ಕರೆಗಳ ದರ (ಕರದಟ್ಟಣೆ ಅವಧಿಯಲ್ಲಿ) ನಿಮಿಷಕ್ಕೆ 4.80ರಿಂದ 2.40ಕ್ಕೂ, 200 ಕಿ.ಮೀಟರ್ನಿಂದ 500 ಕಿ.ಮೀಟರ್ವರೆಗಿನ ದರ ನಿಮಿಷಕ್ಕೆ 11.60ರಿಂದ 4.80ಕ್ಕೂ ಇಳಿಯಲಿದೆ. 500 ಕಿ.ಮೀಟರ್ಗಿಂತ ಮಿಗಿಲಾದ ದೂರದ ಕರೆಗಳ ದರ ಭಾರಿ ಪ್ರಮಾಣದ ಇಳಿಕೆ ಕಂಡಿದೆ.
ಕರೆ ದಟ್ಟಣೆ ಇಲ್ಲದ ಅವಧಿಯಲ್ಲಿ 50ರಿಂದ 200 ಕಿ.ಮೀಟರ್ವರೆಗಿನ ದೂರದ ಎಸ್ಟಿಡಿ ಕರೆಗೆ ನಿಮಿಷಕ್ಕೆ 1.20 ಆಗಿದೆ. 200ರಿಂದ 500 ಕಿ.ಮೀಟರ್ವರೆಗಿನ ಕರೆಗಳ ದರವನ್ನು ನಿಮಿಷಕ್ಕೆ 3 ರುಪಾಯಿಯಿಂದ 2.40ಕ್ಕೆ ಇಳಿಸಲಾಗಿದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications