ದೂರದರ್ಶನ ಕೇಂದ್ರದ ಎದುರು ರಾಜಕಮಲ್ ಸರ್ಕಸ್ ಟೆಂಟ್
ಬೆಂಗಳೂರು : ಕರಡಿಯ ಥಕಥಕ ಕುಣಿಸುತ ಬಂದನು.... ಎಂಬ 3ನೇ ಕ್ಲಾಸಿನ ಪದ್ಯ ನಿಮಗೆ ನೆನಪಿರಬೇಕಲ್ಲ. ಗಾರುಡಿಯವ ಕರಡಿಯ ಕುಣಿಸುತ್ತಾ ನಮ್ಮೂರಿಗೆ ಬಂದರೆ, ಬಾಲಕರ ಹಿಂಡೇ ಅವನ ಹಿಂದೆ ಸುತ್ತುತ್ತಿತ್ತು. ಆಗ ಈಗಿನಂತೆ ಟಿ.ವಿ. ಇರಲಿಲ್ಲ. ಊರುಗಳಿಗೆ ಸರ್ಕಸ್ ಬರುತ್ತಿದ್ದುದೂ ಅಪರೂಪ. ಕರಡಿ ಕುಣಿತವೇ ಆಗ ಅತಿದೊಡ್ಡ ಮನರಂಜನೆ.
ನೋಡುಗರಿಗೇನೋ ಮನರಂಜನೆ. ಆದರೆ, ಕರಡಿ ಪಡುವ ಪಾಡು ಆ ಶ್ರೀರಾಮನಿಗೇ ಪ್ರೀತಿ. ಸರ್ಕಸ್ಗಳೂ ಇದಕ್ಕೆ ಹೊರತಲ್ಲ. ಸರ್ಕಸ್ಸಿನಲ್ಲಿ ಮೈಬಗ್ಗಿಸಿ ದುಡಿವ ಕರಡಿ, ಕೋತಿ, ಆನೆ, ಹುಲಿ, ಕರಡಿ ಇತ್ಯಾದಿ ಪ್ರಾಣಿಗಳು ಕಾಡಿನಲ್ಲಿ ತಾವನುಭವಿಸುತ್ತಿದ್ದ ಸ್ವಾತಂತ್ರ್ಯವನ್ನು ಮಾಲಿಕನಿಗೆ ಮೂಟೆಕಟ್ಟಿಕೊಟ್ಟು. ರಿಂಗ್ಮಾಸ್ಟರ್ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯ. ಇಷ್ಟೆಲ್ಲಾ ಮಾಡಿದರೂ ಅವಕ್ಕೆ ಅರೆಹೊಟ್ಟೆಯೇ.
ಈಗೇಕೆ ಪ್ರಾಣಿಗಳ ಪ್ರಸ್ತಾಪ ಎನ್ನುವಿರಾ? ಮೊನ್ನೆಯಷ್ಟೇ ಬೆಂಗಳೂರಿನ ಹೊಸಕೆರೆ ಹಳ್ಳಿಗೆ 17 ಕಾಡಾನೆಗಳು ಭೇಟಿಕೊಟ್ಟು ಹೋದ ತರುವಾಯ ಈಗ ಸರ್ಕಸ್ ಆನೆಗಳು ಬಂದಿದೆ. ಆನೆಗಳ ಜೊತೆ 70ಕ್ಕೂ ಹೆಚ್ಚು ಪ್ರಾಣಿಗಳೂ ಇವೆ.
ಬೆಂಗಳೂರು ಅರಮನೆ ಆವರಣದಲ್ಲಿ ದೂರದರ್ಶನ ಕೇಂದ್ರದ ಎದುರು ರಾಜಕಮಲ್ ಸರ್ಕಸ್ ಟೆಂಟ್ ಹಾಕಿದೆ. 8 ವರ್ಷಗಳ ಬಳಿಕ ಬೆಂಗಳೂರಿಗೆ ಬಂದಿರುವ ರಾಜಕಮಲ್ ಈಗಾಗಲೇ ರಾಜ್ಯದ ಮೈಸೂರು, ಹಾಸನ, ತುಮಕೂರುಗಳನ್ನು ಸುತ್ತಿ ಬಂದಿದೆ. ಬೆಂಗಳೂರಿನ ಪುಟಾಣಿಗಳ ಮನಕ್ಕೆ ಮುದ ನೀಡುವುದು ಸರ್ಕಸ್ ಉದ್ದೇಶವಂತೆ.
24ರಿಂದ ಪ್ರದರ್ಶನ ಆರಂಭಿಸಿರುವ ಸರ್ಕಸ್ನಲ್ಲಿ 200ಕ್ಕೂ ಹೆಚ್ಚು ಕಲಾವಿದರು, ಆನೆ, ಹುಲಿ, ಕರಡಿ, ಚಿರತೆ, ಕೋತಿ ಸೇರಿದಂತೆ 70 ಪ್ರಾಣಿಗಳಿವೆ. ಪ್ರತಿದಿನ ಮಧ್ಯಾಹ್ನ 1, ಮಧ್ಯಾಹ್ನ 4 ಮತ್ತು ಸಂಜೆ 7ಗಂಟೆಗೆ ಎರಡೂವರೆ ತಾಸಿನ ಪ್ರದರ್ಶನ ನಡೆಯುತ್ತಿದೆ. ಅಮೆರಿಕದ ಮೆಕಾವ್ ಎಂಬ ಹಕ್ಕಿಕೂಡ ಬೆಂಗಳೂರಿಗರ ರಂಜಿಸಲು ಬಂದಿದೆ.
ಹಿಂಸೆ ರಹಿತ ತರಬೇತಿ : ಎಲೆಕ್ಟ್ರಿಕ್ ಶಾಕ್ ನೀಡಿ, ಸರ್ಕಸ್ ಪ್ರಾಣಿಗಳಿಂದ ದೇಹ ದಂಡನೆ ಮಾಡಿಸಲಾಗುತ್ತದೆ ಎನ್ನುವುದು ಬಹು ಹಳೆಯ ಆರೋಪ. ಆದರೆ, ರಾಜಕಮಲ್ನ ವ್ಯವಸ್ಥಾಪಕ ಪ್ರಮೋದ್ ಕುಮಾರ್ ಈ ಆರೋಪ ನಿರಾಕರಿಸುತ್ತಾರೆ. ನಮ್ಮದೇ ಆದ ತಂತ್ರಜ್ಞಾನದಿಂದ, ಪ್ರಾಣಿಗಳಿಗೆ ಉತ್ತಮ ಆಹಾರ ನೀಡಿ, ಅವುಗಳಿಂದ ಸರ್ಕಸ್ ಮಾಡಿಸುತ್ತೇವೆ ಎಂಬ ಸಮಜಾಯಿಷಿ ನೀಡುತ್ತಾರೆ.
ನ್ಯಾಯಾಲಯ ನೀಡಿರುವ ಆದೇಶದ ರೀತ್ಯ ಕೆಲವು ಕ್ರೂರ ಮೃಗಗಳನ್ನು ಬೋನಿನಲ್ಲಿಯೇ ಇಟ್ಟು ಪ್ರದರ್ಶಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ತಮ್ಮ ಸರ್ಕಸ್ನಲ್ಲಿ ಸುಕೋಮಲೆಯರ ಸೈಕಲ್ ವರಸೆ, ನೃತ್ಯ, ಕಸರತ್ತುಗಳಿವೆ. ಅಮೆರಿಕ, ರಷ್ಯದಲ್ಲಿ ತರಬೇತಾದ ನುರಿತ ಕಲಾವಿದರಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications