ತಣ್ಣೀರುಬಾವಿ ಕಡಲ ಸದ್ದಿನ ಬಳಿ ಅಂತರರಾಷ್ಟ್ರೀಯ ಸ್ಟೇಡಿಯಂ ?
ಮಂಗಳೂರು : ತಣ್ಣೀರು ಬಾವಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕುರಿತ ಪ್ರಸ್ತಾವವನ್ನು ರಾಜ್ಯಕ್ರಿಕೆಟ್ ಅಸೋಸಿಯೇಷನ್ ಸರಕಾರಕ್ಕೆ ಸಲ್ಲಿಸಿದೆ.
ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಕಾರ್ಯದರ್ಶಿ ಹಾಗೂ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಬ್ರಿಜೇಶ್ ಪಟೇಲ್ ಬುಧವಾರ ನಗರಕ್ಕೆ ಆಗಮಿಸಿದ್ದು, ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಅಗತ್ಯವಿರುವ ಸ್ಥಳವನ್ನು ವೀಕ್ಷಿಸಿದರು. ಕೋಣಾಜೆ, ಪಿಲಿಕುಳ ಮತ್ತು ಶಕ್ತಿನಗರದ ಪ್ರದೇಶಗಳನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಶಿಫಾರಸು ಮಾಡಲಾಗಿತ್ತು.
ಸ್ಥಳ ವೀಕ್ಷಣೆಯ ನಂತರ ಬ್ರಿಜೇಶ್ ಪಟೇಲ್ ತಣ್ಣೀರುಬಾವಿಯ 18 ಎಕರೆಯಷ್ಟು ವಿಶಾಲ ಪ್ರದೇಶವನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ತಣ್ಣೀರು ಬಾವಿ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾದರೆ ವಿಶ್ವದಲ್ಲೇ ಅದೊಂದು ವಿಶಿಷ್ಟ ಸ್ಟೇಡಿಯಂ ಎನಿಸಿಕೊಳ್ಳಲಿದೆ. ಒಂದು ಕಡೆ ಸಮುದ್ರ ಮತ್ತೊಂದು ಕಡೆ ನದಿ ಇರುವ ಈ ಪ್ರದೇಶ ಸ್ಟೇಡಿಯಂ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಬ್ರಿಜೇಶ್ ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...