‘ರಾಜ್ಯದ 33 ದಶಲಕ್ಷ ಕಿಲೋ ವರ್ಜಿನಿಯಾ ತಂಬಾಕು ಬಿಕರಿಯಾಗಿಲ್ಲ’
ಬೆಂಗಳೂರು : ಬೆಂಬಲ ಬೆಲೆ ಕುಸಿತ ಮತ್ತು ಕುಂದಿದ ಬೇಡಿಕೆಯಿಂದ ರಾಜ್ಯದಲ್ಲಿ ಬೆಳೆದಿರುವ 3 ಕೋಟಿ 30 ಲಕ್ಷ ಕಿಲೋನಷ್ಟು ವರ್ಜಿನಿಯಾ ತಂಬಾಕು (ಎಫ್ಸಿವಿ) ಮಾರಾಟವಾಗದೆ ಹಾಗೇ ಉಳಿದಿದೆ. ಇದರಿಂದ ತಂಬಾಕು ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ತಂಬಾಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ಅನಂತರಾಮು ಹೇಳಿದ್ದಾರೆ.
ತಂಬಾಕು ಬೆಳೆಗಾರರ ದುಸ್ಥಿತಿಯನ್ನು ಶನಿವಾರ ಸುದ್ದಿಗಾರರೊಡನೆ ಅನಂತರಾಮು ಹೇಳಿಕೊಂಡರು. 5 ಕೋಟಿ 30 ಲಕ್ಷ ಕೆ.ಜಿ.ಯಷ್ಟು ವರ್ಜಿನಿಯಾ ತಂಬಾಕನ್ನು ನಮ್ಮ ರಾಜ್ಯದ ರೈತರು ಬೆಳೆದಿದ್ದಾರೆ. ಆದರೆ ಮಾರಾಟವಾಗಿರುವುದು ಕೇವಲ 2 ಕೋಟಿ ಕಿಲೋ. ದೇಶದಲ್ಲೇ ವರ್ಜಿನಿಯಾ ತಂಬಾಕು ಬೆಳೆಯನ್ನು ಹೆಚ್ಚು ಬೆಳೆಯುವ ದ್ವಿತೀಯ ರಾಜ್ಯ ನಮ್ಮದು ಎಂದರು.
ಕಳೆದ ವರ್ಷ ಪ್ರತಿ ಕಿಲೋ ತಂಬಾಕಿಗೆ 55 ರುಪಾಯಿ ಬೆಂಬಲ ಬೆಲೆ ಸಿಗುತ್ತಿತ್ತು. ಈ ವರ್ಷ 35 ರುಪಾಯಿ ಸಿಗುತ್ತಿದೆ. ಪ್ರತಿ ಕಿಲೋ ತಂಬಾಕು ಬೆಳೆಯಲು ರೈತರಿಗೆ 40ರಿಂದ 45 ರುಪಾಯಿ ಖರ್ಚಾಗಿರುತ್ತದೆ. ಅಂದರೆ, ಕಿಲೋಗೆ 5ರಿಂದ 10 ರುಪಾಯಿ ಲುಕಸಾನು. ಈ ವರ್ಜಿನಿಯಾ ತಂಬಾಕಿನ ವಿದೇಶೀ ವಿನಿಮಯದಿಂದ 1000 ಕೋಟಿ ರುಪಾಯಿಗೂ ಹೆಚ್ಚು ಹಣ ದೇಶದ ಬೊಕ್ಕಸ ತುಂಬುತ್ತಿದೆ. ಹೀಗಿದ್ದೂ ವರ್ಜಿನಿಯಾ ತಂಬಾಕು ಬಿಕರಿಯಾಗದೆ ಗೋದಾಮಿನಲ್ಲಿ ಕೊಳೆಯುತ್ತಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊದಲೇ ತಂಬಾಕು ಮಾರಾಟ ಡಲ್ಲಾಗಿತ್ತು
ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳನ್ನು ಉಗ್ರರು ಕೆಡವಿದ ನಂತರವಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಆಫ್ಘನ್ ಯುದ್ಧ ಕೂಡ ತಂಬಾಕು ಕೊಳ್ಳುವವರನ್ನು ಹಿಮ್ಮೆಟ್ಟಿಸಿದೆ. ಇದರಿಂದ ವಿದೇಶೀ ಮಾರುಕಟ್ಟೆ ಸಾಕಷ್ಟು ಸೊರಗಿದೆ. ಸಾಲದ್ದಕ್ಕೆ ಸ್ಥಳೀಯ ನಕಲಿ ಸಿಗರೇಟು ಉತ್ಪಾದಕರ ಹಾವಳಿ. ಜೊತೆಗೆ ಸಿಗರೇಟಿನ ಮೇಲೆ 15 ಪ್ರತಿಶತ ತೆರಿಗೆ. ಇವೆಲ್ಲಾ ತಂಬಾಕು ಬೆಳೆಗಾರರ ಜೀವನಕ್ಕೇ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಹೇಳಿದರು.
ವಿದೇಶೀ ಸಿಗರೇಟುಗಳ ಮೇಲೆ 150 ಪ್ರತಿಶತ ಸುಂಕ ವಿಧಿಸಬಹುದು. ವಿಶ್ವ ವ್ಯಾಪಾರ ಒಪ್ಪಂದದ ನಿಯಮಾವಳಿಗಳ ರೀತ್ಯ ಇದಕ್ಕೆ ಅವಕಾಶವಿದೆ. ಆದರೆ ವಿಧಿಸಿರುವುದು ಶೇ.35 ರಷ್ಟು ಸುಂಕ ಮಾತ್ರ. ನಕಲಿ ಸಿಗರೇಟು ಉತ್ಪಾದಕರ ಜಾಲ ಬಯಲಿಗೆಳೆಯುವ ಪ್ರಯತ್ನಗಳೇ ಆಗುತ್ತಿಲ್ಲ. ಮುಂದಿನ ವಾರ ನಮ್ಮ ಒಕ್ಕೂಟ ದೆಹಲಿಗೆ ತೆರಳಿ, ಸಂಬಂಧಪಟ್ಟ ಸಚಿವರಿಗೆ ತಂಬಾಕು ಬೆಳೆಗಾರರ ಸಮಸ್ಯೆ ಮನವರಿಕೆ ಮಾಡಿಸಲಿದೆ ಎಂದು ಅನಂತರಾಮು ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications