Get Updates
Get notified of breaking news, exclusive insights, and must-see stories!

ಶಿವಸುಬ್ರಮಣ್ಯಂ ಬಂಧನ ಒಂದು ಕಪಟ ನಾಟಕ-ಗೋಪಾಲ್‌

ಬೆಂಗಳೂರು : ಶಿವಸುಬ್ರಮಣ್ಯಂನನ್ನು ಸೇಲಂನ ತನ್ನ ಗೃಹದಿಂದ ಹೊತ್ತೊಯ್ಯಲಾಗಿದೆ. ಅದರ ಬಗ್ಗೆ ನನ್ನ ಬಳಿ ಪ್ರತ್ಯಕ್ಷದರ್ಶಿಗಳ ಸಾಕ್ಷ ್ಯ ಇದೆ. ಈ ಬಗ್ಗೆ ಎಫ್‌ಐಆರ್‌ ಕೂಡ ನೋಂದಾವಣೆಯಾಗಿದೆ. ಹೀಗಿದ್ದೂ ಕೊಳ್ಳೇಗಾಲದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಎಸ್‌ಟಿಎಫ್‌ ಪೊಲೀಸರು ಬೊಬ್ಬೆ ಹೊಡೆಯುತ್ತಿದ್ದಾರೆ. ಶಿವಸುಬ್ರಮಣ್ಯಂ ವಿರುದ್ಧ ಎಸ್‌ಟಿಎಫ್‌ ಎಫ್‌ಐಆರ್‌ ಫೈಲ್‌ ಮಾಡಿರುವುದನ್ನು ನಾನು ನೋಡಿಲ್ಲ- ನಕ್ಕೀರನ್‌ ಸಂಪಾದಕ ಆರ್‌.ಆರ್‌.ಗೋಪಾಲ್‌.

ಕರ್ನಾಟಕ ಎಸ್‌ಟಿಎಫ್‌ ಪಡೆ ವಶಕ್ಕೆ ತೆಗೆದುಕೊಂಡಿರುವ ತನ್ನ ಪತ್ರಿಕೆಯ ವರದಿಗಾರ ಹಾಗೂ ವೀರಪ್ಪನ್‌ನನ್ನು ಮೊದಲು ಸಂದರ್ಶಿಸಿದವನು ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಶಿವಸುಬ್ರಮಣ್ಯಂನನ್ನು ನ್ಯಾಯಾಲದಲ್ಲಿ ಹಾಜರು ಪಡಿಸಬೇಕೆಂದು ಗೋಪಾಲ್‌ ಮದ್ರಾಸ್‌ ಹೈಕೋರ್ಟಿಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ. ನನ್ನ ಗಂಡ ಮನೆಗೆ ಮರಳಿಲ್ಲ, ಅವರ ಅಪಹರಣವಾಗಿರುವ ಸಾಧ್ಯತೆಯೂ ಇದೆ ಎಂದು ವರದಿಗಾರನ ಪತ್ನಿ ಸೇಲಂ ಠಾಣೆಯಲ್ಲಿ ದೂರನ್ನೂ ಕೊಟ್ಟಿದ್ದಾರೆ.

ಗೋಪಾಲ್‌ ಪ್ರಕಾರ ಶಿವಸುಬ್ರಮಣ್ಯಂ ಬಂಧನ ಒಂದು ಕಪಟ ನಾಟಕ. ಅದರ ಸೂತ್ರಧಾರ ಯಾರೆಂಬುದನ್ನು ತಿಳಿಯಲು ಅವರೀಗ ಹಗಲು ರಾತ್ರಿ ಒದ್ದಾಡುತ್ತಿದ್ದಾರೆ. ವೀರಪ್ಪನ್‌ನ ಅನೇಕ ನೆಂಟ-ಬಂಟರ ಬಂಧನ ಮತ್ತು ಈ ವರದಿಗಾರನ ಬಂಧನದಿಂದ ಮಂಕು ಕವಿದಂತಾಗಿದ್ದ ವೀರಪ್ಪನ್‌ ಶಿಕಾರಿಗೆ ಮತ್ತೆ ಒಂದು ವೇಗ ಸಿಕ್ಕಿರುವುದಂತೂ ನಿಜ.(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+