ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ಕಾಟ:ಧಾರವಾಡದ ಐವರಿಗೆ 3 ವರ್ಷ ಜೈಲು

By Staff
|
Google Oneindia Kannada News

ಬೆಂಗಳೂರು : ವರದಕ್ಷಿಣೆ ಕಾಟ ಕೊಟ್ಟು ಹೆಂಡತಿಯ ಸಾವಿಗೆ ಕಾರಣನಾದ ಗಂಡ ಹಾಗೂ ಆತನ ಅಪ್ಪ , ಅಮ್ಮ ಸೇರಿದಂತೆ ಐದು ಮಂದಿಗೆ ಹೈಕೋರ್ಟ್‌ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.

ಸರಕಾರದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಪದ್ಮರಾಜ್‌ ಹಾಗೂ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರ ವಿಭಾಗೀಯ ಪೀಠ ಧಾರವಾಡದ ಭಾಸ್ಕರ ರಾಮಪ್ಪ ಮದಾರ್‌, ರಾಮಪ್ಪ ಯಲ್ಲುಪ್ಪ ಮದಾರ್‌, ಗಂಗವ್ವ ರಾಮಪ್ಪ ಮದಾರ್‌, ಗೀತಾ ಮತ್ತು ನಿರ್ಮಲಾ ಅವರಿಗೆ ಜೈಲು ಶಿಕ್ಷೆಯ ತೀರ್ಪು ನೀಡಿದೆ.

ಆರೋಪಿಗಳನ್ನು ಧಾರವಾಡ ಮೂರನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಖುಲಾಸೆ ಪಡಿಸಿತ್ತು. ಸರಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಭಾಗಶಃ ವಿಚಾರಣೆಗೆ ಅಂಗೀಕರಿಸಿದ ವಿಭಾಗೀಯ ಪೀಠ ದಂಡ ಸಂಹಿತೆ 306 ಅಡಿಯಲ್ಲಿ ಆರೋಪಿಗಳಿಗೆ ಎರಡುವರ್ಷ ಸಜೆ ಮತ್ತು 100 ರೂಪಾಯಿ ದಂಡ ಶಿಕ್ಷೆಯನ್ನೂ, ದಂಡಸಂಹಿತೆ 498 ಎ ಅಡಿಯಲ್ಲಿ ಇನ್ನೊಂದು ವರ್ಷ ಕಠಿಣ ಶಿಕ್ಷೆಯನ್ನೂ ವಿಧಿಸಿದೆ.

(ಇನ್ಫೋ ವಾರ್ತೆ)

What do you think about this ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X