ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಳುನಾಡ ಅಬ್ಬಕ್ಕ ಉತ್ಸವಕ್ಕೂ ಬರೆ.. ಅಯ್ಯೋ ಬರವೇ..
ಮಂಗಳೂರು : ರಾಜ್ಯದ ಹಲವು ಪ್ರದೇಶದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿಯ ತುಳುನಾಡ ವೀರರಾಣಿ ಅಬ್ಬಕ್ಕ ಉತ್ಸವವನ್ನು ರದ್ದು ಪಡಿಸಲಾಗಿದೆ.
ಈ ವಿಷಯವನ್ನು ಉಳ್ಳಾಲದ ಅಬ್ಬಕ್ಕ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ವೀರರಾಣಿ ಅಬ್ಬಕ್ಕ ಉತ್ಸವ ನಡೆಯುತ್ತ ಬಂದಿದೆ. ಆದರೆ ಅದಕ್ಕೆ ಸರಕಾರದ ಕಡೆಯಿಂದ ಅಂತಹ ಪ್ರೋತ್ಸಾಹವೇನೂ ಸಿಕ್ಕಿಲ್ಲ. ನಾಡಿನಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಇತರ ಕಡೆಗಳಲ್ಲಿ ನಡೆಯಬೇಕಿದ್ದ ಉತ್ಸವಗಳನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಬ್ಬಕ್ಕ ಉತ್ಸವವನ್ನೂ ಕೈಬಿಡಲು ನಿರ್ಧರಿಸಲಾಗಿದೆ ಎಂದು ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ. ಇದಿನಬ್ಬ ಹೇಳಿದ್ದಾರೆ.
ಐದನೇ ವರ್ಷದ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಬೇಕೆಂದು ಸಮಿತಿ ನಿರ್ಧರಿಸಿತ್ತು, ಅಬ್ಬಕ್ಕ ಪ್ರಶಸ್ತಿ ಆಯ್ಕೆಗೆ ಮತ್ತು ಸ್ಮರಣ ಸಂಚಿಕೆಗಳಿಗೆ ಸಾಹಿತಿ ಬಿ.ಎ. ವಿವೇಕ ರೈ ಮತ್ತು ಡಾ. ಅಮೃತ ಸೋಮೇಶ್ವರ ಅವರ ನೇತ್ತುತ್ವದಲ್ಲಿ ತಯಾರಿ ನಡೆದಿತ್ತು.
(ಇನ್ಫೋ ವಾರ್ತೆ)
Comments
Story first published: Thursday, November 1, 2001, 5:30 [IST]