ಆಂಧ್ರದಲ್ಲಿ ಚಂಡಮಾರುತ : ಸತ್ತವರು-41,ಕಾಣೆಯಾದವರು-200
ಹೈದರಾಬಾದ್ : ಮಂಗಳವಾರ ನೆಲ್ಲೂರಿನಲ್ಲಿ ಎದ್ದಿರುವ ಭಾರೀ ಚಂಡಮಾರುತ 41 ಜನರನ್ನು ನುಂಗಿಕೊಂಡಿದ್ದು, 200 ಜನರು ನಾಪತ್ತೆಯಾಗಿದ್ದಾರೆ ಎಂದು ಉನ್ನತ ಮೂಲಗಳು ಬುಧವಾರ ದೃಢಪಡಿಸಿವೆ.
ಕರ್ನೂಲು ಜಿಲ್ಲೆಯ ಸುದ್ದಮಿತ್ತ ಗ್ರಾಮದ ದೇವಸ್ಥಾನವೊಂದರಲ್ಲಿ ತಂಗಿದ್ದ 15 ಜನ ಎಗ್ಗಿಲ್ಲದೆ ನುಗ್ಗಿದ ನೀರು ಪಾಲಾಗಿದ್ದಾರೆ. ಕಡಪ ಪಟ್ಟಣದ ಅರ್ಧ ಭಾಗ ಜಲಾವೃತವಾಗಿದ್ದು, ಇಲ್ಲಿನ 18 ಜನ ಮೃತಪಟ್ಟಿದ್ದು, 150 ಮಂದಿ ಕಾಣೆಯಾಗಿದ್ದಾರೆ. ನೆಲ್ಲೂರಿನಲ್ಲಿ ಐದು ವಿದ್ಯಾರ್ಥಿಗಳೂ ಸೇರಿದಂತೆ 6 ಮಂದಿ ಹಾಗೂ ಚಿತ್ತೂರಿನಲ್ಲಿ ಇಬ್ಬರು ಸತ್ತಿದ್ದಾರೆ.
ಬುಗ್ಗವಂಕ ಅಣೆಕಟ್ಟೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಕಡಪ ಪಟ್ಟಣಕ್ಕೆ ದೊಡ್ಡ ಹೊಡೆತ ಬೀಳುವ ಆತಂಕವಿದೆ. ಜಲಾವೃತ ಪ್ರದೇಶದಲ್ಲಿನ ಜನರಿಗೆ ಬುಧವಾರ ಸಂಜೆ ಹೊತ್ತಿಗೆ ಆಹಾರದ ಪೊಟ್ಟಣಗಳನ್ನು ಪೂರೈಸುವುದಾಗಿ ಸರ್ಕಾರ ಹೇಳಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಂಡಮಾರುತದ ಹೊಡೆತ ತಿಂದ ಪ್ರದೇಶಗಳನ್ನು ವಿಮಾನ ಯಾನದ ಮೂಲಕ ವೀಕ್ಷಿಸಿದ್ದಾರೆ.
ಆಂಧ್ರಪ್ರದೇಶದ ಸಾಕಷ್ಟು ಕಡೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 5ರಲ್ಲೂ ಸಂಚಾರ ಅಸ್ತವ್ಯಸ್ತವಾಗಿದೆ. ನೆಲ್ಲೂರು ವಲಯದಲ್ಲಿ ರೈಲು ಸಂಚಾರಕ್ಕೂ ತೊಂದರೆಯಾಗುತ್ತಿದೆ. ವಿಜಯವಾಡ- ಚೆನ್ನೈ ಇಂಟರ್ ಸಿಟಿ ಪಿನಕಿಣಿ ಎಕ್ಸ್ಪ್ರೆಸ್ ಹಾಗೂ ಸಿಕಂದರಾಬಾದ್- ತಿರುಪತಿ ಕೃಷ್ಣಾ ಎಕ್ಸ್ಪ್ರೆಸ್ ಗುಂಟೂರಿನಲ್ಲೇ ನಿಂತು ಹೋಗಿವೆ. ಗುವಾಹಟಿ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಗುದೂರಿನಲ್ಲಿ ನಿಲ್ಲಿಸಲಾಗಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications