ಬರಲಿದೆ ಸಲಿಂಗ- ಉಭಯ ರತಿಗಳಿಗಾಗಿಯೇ ಟಿವಿ ಚಾನೆಲ್ಲು !
ಒಟ್ಟಾವ (ಕೆನಡಾ): ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಫ್ಯಾಷನ್ ಟೀವಿ ಈಗಲೂ ಕಿರುತೆರೆ ಮೇಲೆ ಬರುತ್ತಿದೆ. ಸುಷ್ಮಾ ಸ್ವರಾಜ್ ಕತ್ತರಿ ಈ ಚಾನೆಲ್ಲಲ್ಲಿ ಬರುವ ಮಾಡೆಲ್ಗಳಿಗೆ ಬಟ್ಟೆ ಹೊಲಿಸುವ ಕೆಲಸವನ್ನೇನೂ ಮಾಡಲಿಲ್ಲ ಅನ್ನೋದು ಸುಸ್ಪಷ್ಟ. ಈಗ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು , ಸಲಿಂಗ ಹಾಗೂ ಉಭಯಲಿಂಗ ಕಾಮಿಗಳನ್ನು ಟಾರ್ಗೆಟ್ ವೀಕ್ಷಕರಾಗಿ ಇಟ್ಟುಕೊಂಡು ಹೊಸ ಟಿವಿ ಚಾನೆಲ್ಲೊಂದು ಪ್ರಾರಂಭವಾಗಲಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ಪ್ರಕಟಿಸಿದೆ.
ಪ್ರೆೃಡ್ ವಿಶನ್ ಟಿವಿ ಸೆಪ್ಟೆಂಬರ್ 7ರಂದು ಈ ಹೊಸ ಚಾನೆಲ್ಲಿಗೆ ಕೆನಡಾದಲ್ಲಿ ಚಾಲನೆ ನೀಡಲಿದೆ. ದಿನದ ಇಪ್ಪತ್ತನಾಲ್ಕೂ ಗಂಟೆ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ಪುರುಷ ಸಲಿಂಗಿ ಹಾಗೂ ಬೆತ್ತಲೆ ದೊರೆಗಳಿಗೆ ಹೇಳಿ ಮಾಡಿಸಿದ ಪ್ರಕಾರಗಳು ಇದರಲ್ಲಿ ಸೇರಿವೆ. ಸುದ್ದಿ, ಪ್ರವಾಸ, ವಿತ್ತ ವಿಷಯ, ಸಂಗೀತ ಹಾಗೂ ಅಡುಗೆ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಿ ಇತರೆ ಪ್ರೇಕ್ಷಕರನ್ನೂ ಕಂಡುಕೊಳ್ಳಲು ಚಾನೆಲ್ ನಿರ್ಧರಿಸಿದೆ.
ಅಂದಹಾಗೆ, ಸಲಿಂಗ ಕಾಮಿಗಳ ಈ ಚಾನೆಲ್ಲು ಬರೇ ಮುಫತ್ ಮನರಂಜನೆಯನ್ನಷ್ಟೇ ಕೊಡುವುದಿಲ್ಲ. ಅವರ ಸಮಸ್ಯೆಗಳನ್ನು ಧಾರಾವಾಹಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಪುಂಖಾನುಪುಂಖ ತೋರಿಸುತ್ತದೆ ಎಂಬುದನ್ನು ಪ್ರೆೃಡ್ ವಿಶನ್ ಪ್ರೆೃಡಾಗಿ ಹೇಳಿಕೊಂಡಿದೆ.
ಭಾರತಕ್ಕೆ ಈ ಚಾನೆಲ್ ಎಂದು ಪ್ರವೇಶಿಸುತ್ತದೆ ಅನ್ನೋದು ಇನ್ನೂ ಗೊತ್ತಿಲ್ಲ. ಕೇಂದ್ರ ವಾರ್ತಾ ಸಚಿವೆ ಸುಷ್ಮಾ ಸ್ವರಾಜ್ ಈ ಸುದ್ದಿ ಕೇಳಿ ತಮ್ಮ ಸಚಿವಾಲಯದ ಸಿಬ್ಬಂದಿಗೆ ಕತ್ತರಿ ಕೊಟ್ಟು, ಮತ್ತೆ ಟಿವಿ ನೋಡಲು ಕೂರಿಸುವರೇ?
(ಇನ್ಫೋ ವಾರ್ತೆ)
What do you say on this Article?
ಮುಖಪುಟ / ಇವತ್ತು... ಈ ಹೊತ್ತು...
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications