‘ಇ- ಪಾರ್ಲಿಮೆಂಟ್’: ಸಿಲಿಕಾನ್ ವ್ಯಾಲಿಯಲ್ಲಿ ಜಾಗತಿಕ ಸಂಸತ್ತು
ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ನಮ್ಮ ನಿಮ್ಮ ಬೆಂಗಳೂರು ಮತ್ತೊಂದು ಅಗ್ಗಳಿಕೆಯತ್ತ ಮುಂದಡಿಯಿಡುತ್ತಿದೆ. ವಿಶ್ವದ ಎಲ್ಲ ನಾಗರಿಕರು ಹಾಗೂ ಸಂಸದರು ಏಕ ಛತ್ರಿಯಡಿ ಸೇರಲು ಅನುಕೂಲವಾಗುವ ‘ನೈಜ ಸಂಸತ್ತು ’ ಅಥವಾ ‘ಇ-ಪಾರ್ಲಿಮೆಂಟ್’ ಸಿಲಿಕಾನ್ ವ್ಯಾಲಿಯಲ್ಲಿ ರೂಪುಗೊಳ್ಳುತ್ತಿದೆ.
ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಇ- ಪಾರ್ಲಿಮೆಂಟ್ ಅನುಕೂಲಕರವೆಂದು ಭಾವಿಸಲಾಗಿದೆ. ಇಂಥ ಅಪರೂಪದ ಸಂಸತ್ತಿನ ಹಿಂದಿನ ರೂವಾರಿಗಳು ಮೂವರು. ಆ ತ್ರಿಮೂರ್ತಿಗಳೆಂದರೆ- ಬ್ರಿಟನ್ ಮೂಲದ ‘ಅರ್ಥ್ ಆಕ್ಷನ್’ ಸ್ವಯಂ ಸೇವಾಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ನಿಕೊಲಸ್ ಡನ್ಲಪ್, ಬ್ರಿಟನ್ನ ಸಂಸದ ಬರ್ಟ್ ಕೊಯಿಂಡರ್ಸ್ ಹಾಗೂ ಕಾಂಗ್ರೆಸ್ ಸಂಸದ ಮಣಿಶಂಕರ್ ಅಯ್ಯರ್.
ಇ- ಪಾರ್ಲಿಮೆಂಟ್ನ ಕನಸು ಕಾಣುತ್ತಿರುವ ತ್ರಿಮೂರ್ತಿಗಳು ಜುಲೈ 16 ರಂದು , ತಮ್ಮ ಮಹತ್ತರ ಯೋಜನೆಯ ಕುರಿತು ಸಿಲಿಕಾನ್ ಕಣಿವೆಯ ರೂವಾರಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಐಟಿ ಹಾಗೂ ಬಿಟಿ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಅವರು ಈ ಪ್ರಯತ್ನಗಳ ಸಂಯೋಜಕರಾಗುವ ಸಾಧ್ಯತೆಗಳಿವೆ.
ಇ-ಪಾರ್ಲಿಮೆಂಟ್ ಕೇಂದ್ರವನ್ನಾಗಿ ಬೆಂಗಳೂರನ್ನೇ ಆರಿಸಿಕೊಂಡಿರುವುದೇಕೆ?
ಈ ಗೌರವಕ್ಕೆ ಇಲ್ಲಿನ ಅಪರೂಪದ ಸಾಫ್ಟ್ವೇರ್ ಪ್ರತಿಭೆ ಹಾಗೂ ಸಂಪನ್ಮೂಲಗಳೇ ಕಾರಣ ಎನ್ನುತ್ತಾರೆ ನಿಕೊಲಸ್ ಡನ್ಲಪ್. ಉದ್ದೇಶಿತ ಇ-ಪಾರ್ಲಿಮೆಂಟ್ 130 ರಾಷ್ಟ್ರಗಳ 25 ಸಾವಿರ ಚುನಾಯಿತ ಸಂಸದರನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಪ್ರಮುಖ ಕೈಗಾರಿಕೋದ್ಯಮಿಗಳು ಹಾಗೂ ಸಂಸದರ ತಂಡದ ಮೂಲಕ ಇ-ಪಾರ್ಲಿಮೆಂಟ್ಗೆ ಬೇಕಾಗುವ ನಿಧಿಯನ್ನು ಒಟ್ಟು ಮಾಡುವ ವಿಶ್ವಾಸವನ್ನು ಅದರ ಸಂಘಟಕರು ವ್ಯಕ್ತಪಡಿಸುತ್ತಾರೆ.
ಇ- ಪಾರ್ಲಿಮೆಂಟ್ ಮೂರು ಹಂತಗಳಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತದೆ-
- ವಿಶ್ವದ ಎಲ್ಲ ಸಂಸದರ ಅಭಿಪ್ರಾಯವನ್ನು ಪಡೆಯುವ ಮೂಲಕ ಇ- ಪಾರ್ಲಿಮೆಂಟ್ನ ಗುರಿಯನ್ನು ಗೊತ್ತು ಪಡಿಸಲಾಗುವುದು.
- ಗೊತ್ತು ಪಡಿಸಿದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಪ್ರಸ್ತಾವನೆಗಳನ್ನು ತಜ್ಞರ ಗುಂಪು ಅಭಿವೃದ್ಧಿಪಡಿಸುವುದು. ಈ ಸಂಬಂಧ ಪ್ರಮುಖ ನಾಗರಿಕರು, ಸ್ವಯಂ ಸೇವಾ ಸಂಘಟನೆಗಳು, ಶಾಸಕರು ಹಾಗೂ ಅಂತರರಾಷ್ಟ್ರೀಯ ಅಧಿಕಾರಿಗಳ ನಡುವೆ ಚರ್ಚೆ ಏರ್ಪಡಿಸಲಾಗುವುದು ಹಾಗೂ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸಂವಹನ ಸಾಧಿಸಲಾಗುವುದು.
- ಇ-ಪಾರ್ಲಿಮೆಂಟ್ನ ಒಪ್ಪಿಗೆ ಪಡೆಯುವ ಮಸೂದೆಗಳನ್ನು ರಾಷ್ಟ್ರಗಳಿಗೆ ಪರಿಚಯಿಸಲಾಗುವುದು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications