‘ಇ- ಪಾರ್ಲಿಮೆಂಟ್’: ಸಿಲಿಕಾನ್ ವ್ಯಾಲಿಯಲ್ಲಿ ಜಾಗತಿಕ ಸಂಸತ್ತು
ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ನಮ್ಮ ನಿಮ್ಮ ಬೆಂಗಳೂರು ಮತ್ತೊಂದು ಅಗ್ಗಳಿಕೆಯತ್ತ ಮುಂದಡಿಯಿಡುತ್ತಿದೆ. ವಿಶ್ವದ ಎಲ್ಲ ನಾಗರಿಕರು ಹಾಗೂ ಸಂಸದರು ಏಕ ಛತ್ರಿಯಡಿ ಸೇರಲು ಅನುಕೂಲವಾಗುವ ‘ನೈಜ ಸಂಸತ್ತು ’ ಅಥವಾ ‘ಇ-ಪಾರ್ಲಿಮೆಂಟ್’ ಸಿಲಿಕಾನ್ ವ್ಯಾಲಿಯಲ್ಲಿ ರೂಪುಗೊಳ್ಳುತ್ತಿದೆ.
ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಇ- ಪಾರ್ಲಿಮೆಂಟ್ ಅನುಕೂಲಕರವೆಂದು ಭಾವಿಸಲಾಗಿದೆ. ಇಂಥ ಅಪರೂಪದ ಸಂಸತ್ತಿನ ಹಿಂದಿನ ರೂವಾರಿಗಳು ಮೂವರು. ಆ ತ್ರಿಮೂರ್ತಿಗಳೆಂದರೆ- ಬ್ರಿಟನ್ ಮೂಲದ ‘ಅರ್ಥ್ ಆಕ್ಷನ್’ ಸ್ವಯಂ ಸೇವಾಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ನಿಕೊಲಸ್ ಡನ್ಲಪ್, ಬ್ರಿಟನ್ನ ಸಂಸದ ಬರ್ಟ್ ಕೊಯಿಂಡರ್ಸ್ ಹಾಗೂ ಕಾಂಗ್ರೆಸ್ ಸಂಸದ ಮಣಿಶಂಕರ್ ಅಯ್ಯರ್.
ಇ- ಪಾರ್ಲಿಮೆಂಟ್ನ ಕನಸು ಕಾಣುತ್ತಿರುವ ತ್ರಿಮೂರ್ತಿಗಳು ಜುಲೈ 16 ರಂದು , ತಮ್ಮ ಮಹತ್ತರ ಯೋಜನೆಯ ಕುರಿತು ಸಿಲಿಕಾನ್ ಕಣಿವೆಯ ರೂವಾರಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಐಟಿ ಹಾಗೂ ಬಿಟಿ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಅವರು ಈ ಪ್ರಯತ್ನಗಳ ಸಂಯೋಜಕರಾಗುವ ಸಾಧ್ಯತೆಗಳಿವೆ.
ಇ-ಪಾರ್ಲಿಮೆಂಟ್
ಕೇಂದ್ರವನ್ನಾಗಿ
ಬೆಂಗಳೂರನ್ನೇ
ಆರಿಸಿಕೊಂಡಿರುವುದೇಕೆ?
ಈ
ಗೌರವಕ್ಕೆ
ಇಲ್ಲಿನ
ಅಪರೂಪದ
ಸಾಫ್ಟ್ವೇರ್
ಪ್ರತಿಭೆ
ಹಾಗೂ
ಸಂಪನ್ಮೂಲಗಳೇ
ಕಾರಣ
ಎನ್ನುತ್ತಾರೆ
ನಿಕೊಲಸ್
ಡನ್ಲಪ್.
ಉದ್ದೇಶಿತ
ಇ-ಪಾರ್ಲಿಮೆಂಟ್
130
ರಾಷ್ಟ್ರಗಳ
25
ಸಾವಿರ
ಚುನಾಯಿತ
ಸಂಸದರನ್ನು
ಒಳಗೊಳ್ಳುವ
ನಿರೀಕ್ಷೆಯಿದೆ.
ಪ್ರಮುಖ
ಕೈಗಾರಿಕೋದ್ಯಮಿಗಳು
ಹಾಗೂ
ಸಂಸದರ
ತಂಡದ
ಮೂಲಕ
ಇ-ಪಾರ್ಲಿಮೆಂಟ್ಗೆ
ಬೇಕಾಗುವ
ನಿಧಿಯನ್ನು
ಒಟ್ಟು
ಮಾಡುವ
ವಿಶ್ವಾಸವನ್ನು
ಅದರ
ಸಂಘಟಕರು
ವ್ಯಕ್ತಪಡಿಸುತ್ತಾರೆ.
ಇ- ಪಾರ್ಲಿಮೆಂಟ್ ಮೂರು ಹಂತಗಳಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತದೆ-
- ವಿಶ್ವದ ಎಲ್ಲ ಸಂಸದರ ಅಭಿಪ್ರಾಯವನ್ನು ಪಡೆಯುವ ಮೂಲಕ ಇ- ಪಾರ್ಲಿಮೆಂಟ್ನ ಗುರಿಯನ್ನು ಗೊತ್ತು ಪಡಿಸಲಾಗುವುದು.
- ಗೊತ್ತು ಪಡಿಸಿದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಪ್ರಸ್ತಾವನೆಗಳನ್ನು ತಜ್ಞರ ಗುಂಪು ಅಭಿವೃದ್ಧಿಪಡಿಸುವುದು. ಈ ಸಂಬಂಧ ಪ್ರಮುಖ ನಾಗರಿಕರು, ಸ್ವಯಂ ಸೇವಾ ಸಂಘಟನೆಗಳು, ಶಾಸಕರು ಹಾಗೂ ಅಂತರರಾಷ್ಟ್ರೀಯ ಅಧಿಕಾರಿಗಳ ನಡುವೆ ಚರ್ಚೆ ಏರ್ಪಡಿಸಲಾಗುವುದು ಹಾಗೂ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸಂವಹನ ಸಾಧಿಸಲಾಗುವುದು.
- ಇ-ಪಾರ್ಲಿಮೆಂಟ್ನ ಒಪ್ಪಿಗೆ ಪಡೆಯುವ ಮಸೂದೆಗಳನ್ನು ರಾಷ್ಟ್ರಗಳಿಗೆ ಪರಿಚಯಿಸಲಾಗುವುದು.