Get Updates
Get notified of breaking news, exclusive insights, and must-see stories!

ದಿನಕರ್‌ ಪುಸ್ತಕ ನಿಷೇಧಿಸಿದರೆ ಪ್ರತಿಭಟನೆ- ಕಾನೂನು ಸಮರ

ಬೆಂಗಳೂರು : ರಾಜ್‌ ಅಪಹರಣ ಪ್ರಕರಣ ಕುರಿತಂತೆ ಪುಸ್ತಕ ಬರೆಯುತ್ತಿರುವ ರಾಜ್ಯದ ಮಾಜಿ ಪೊಲೀಸ್‌ ನಿರ್ದೇಶಕ ಸಿ.ದಿನಕರ್‌ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ್‌, ದಿನಕರ್‌ ಅವರ ಪುಸ್ತಕದ ವಿರುದ್ಧ ಕ್ರಮ ಕೈಗೊಂಡರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಿರಾತಂಕವಾಗಿ, ಯಾವುದೇ ರಾಜಿಗೆ- ಬೆದರಿಕೆಗೆ ಒಳಗಾಗದೆ ಪುಸ್ತಕ ರಚಿಸುವಂತೆ ದಿನಕರ್‌ ಅವರಲ್ಲಿ ಮನವಿ ಮಾಡಿಕೊಂಡ ವಾಟಾಳ್‌, ಪುಸ್ತಕದ ಕುರಿತು ಆಕ್ಷೇಪ ಎತ್ತಲು ಸರ್ಕಾರ ಯಾರು ಎಂದು ಪ್ರಶ್ನಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದ ಅವರು, ಜನತೆಗೆ ಸತ್ಯ ಸಂಗತಿಯನ್ನು ತಿಳಿಸಲಿಕ್ಕಾಗಿ ಪುಸ್ತಕ ಬರೆಯುತ್ತಿರುವ ದಿನಕರ್‌ ಅವರನ್ನು ಅಭಿನಂದಿಸಿದರು.

ಪುಸ್ತಕದ ಮೂಲ ಪ್ರತಿಯನ್ನು ಸರ್ಕಾರಕ್ಕೆ ಯಾಕೆ ನೀಡಬೇಕು. ಇದು ಪ್ರಜಾಪ್ರಭುತ್ವ ಕ್ರಮವಲ್ಲ . ಈ ಕುರಿತು ಸಾಹಿತಿಗಳು, ಲೇಖಕರು ಸೊಲ್ಲೆತ್ತದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ವಾಟಾಳ್‌, ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಪ್ರಶ್ನಿಸದಿರುವ ವಿರೋಧ ಪಕ್ಷಗಳು ಸತ್ತಿವೆ ಎಂದು ವ್ಯಂಗ್ಯವಾಡಿದರು.

ದಿನಕರ್‌ ಅವರ ಪುಸ್ತಕದಿಂದ ರಾಜ್‌ ಬಿಡುಗಡೆ ಕುರಿತ ಸತ್ಯಸಂಗತಿ ಜನತೆಗೆ ತಿಳಿಯುತ್ತದೆ. ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಯತ್ನಿಸಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾತ್ರವಲ್ಲದೆ ಕಾನೂನು ಸಮರ ನಡೆಸುವುದಾಗಿ ವಾಟಾಳ್‌ ನಾಗರಾಜ್‌ ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+