Get Updates
Get notified of breaking news, exclusive insights, and must-see stories!

ಸಂಶೋಧನೆಗಳ ಬಗ್ಗೆ ವಿಶ್ವ ವಿದ್ಯಾಲಯಗಳ ಅಲಕ್ಷ್ಯ- ವೀರೇಂದ್ರ ಹೆಗ್ಗಡೆ

ಮಂಗಳೂರು : ಸಂಶೋಧನಾ ಕೇಂದ್ರಗಳಾಗಿ ಬೆಳೆಯಬೇಕಾದ ವಿಶ್ವ ವಿದ್ಯಾಲಯಗಳು ಪದವಿ ಪ್ರದಾನ ಕೇಂದ್ರಗಳಾಗಿ ಬೆಳೆಯುತ್ತಿರುವ ಬಗೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ, ಡಾ. ವಾಮನ ನಂದಾವರ ಅವರ ಕೋಟಿ ಚೆನ್ನಯ್ಯ ಜಾನಪದೀಯ ಅಧ್ಯಯನ ಗ್ರಂಥವನ್ನು ಬಿಡುಗಡೆಗೊಳಿಸಿ ವೀರೇಂದ್ರ ಹೆಗ್ಗಡೆ ಮಾತನಾಡುತ್ತಿದ್ದರು. ಇಂದಿನ ದಿನಗಳಲ್ಲಿ ಅಧ್ಯಯನಶೀಲತೆ ಕಡಿಮೆಯಾಗುತ್ತಿದೆ. ಸಂಶೋಧನೆಯ ಹಿಂದಿನ ಶ್ರಮವನ್ನು ನಾವು ಮರೆಯುತ್ತಿದ್ದೇವೆ. ಡಿಗ್ರಿ ಪ್ರದಾನ ಮಾಡುವ ಕೇಂದ್ರಗಳಾಗಿರುವ ವಿಶ್ವವಿದ್ಯಾಲಯಗಳು ಸಂಶೋಧನೆಗಳನ್ನು ಮರೆಯುತ್ತಿವೆ ಎಂದು ಅವರು ವಿಷಾದಿಸಿದರು.

ವಾಮನ ನಂದಾವರ ಕೃತಿಯನ್ನು ಸಂಗ್ರಹ ಯೋಗ್ಯ ಅದ್ಭುತ ಗ್ರಂಥ ಎಂದು ಬಣ್ಣಿಸಿದ ಅವರು, ಗ್ರಾಮೀಣ ಪ್ರದೇಶದ ನಂಬಿಕೆಗಳು, ಭೂತಾರಾದನೆ, ಸಾಂದರ್ಭಿಕ ಸತ್ಯ, ಕೋಟಿ ಚೆನ್ನಯ್ಯರ ನಡೆನುಡಿ ಅವರ ಸ್ವಭಾವಗಳು ಕೃತಿಯಲ್ಲಿ ಸೊಗಸಾಗಿ ಮೂಡಿಬಂದಿವೆ ಎಂದರು. ಪ್ರಾಪಂಚಿಕ ವ್ಯವಹಾರಗಳಿಗೆ ದೈವಗಳು ಅಗತ್ಯ ಎನ್ನುವುದನ್ನು ವೀರೇಂದ್ರ ಹೆಗ್ಗಡೆ ಒತ್ತಿ ಹೇಳಿದರು.

ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಎ. ವಿವೇಕ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿ ಸಮೀಕ್ಷೆಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ಸಿ. ಎನ್‌. ರಾಮಚಂದ್ರನ್‌ ನಡೆಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಹಾಗೂ ಅಕಾಡೆಮಿ ಸದಸ್ಯ ದಾಮೋದರ ನಿಸರ್ಗ, ಕೃತಿಕಾರ ವಾಮನ ನಂದಾವರ, ತುಳು ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಎಚ್‌.ಶಿವರುದ್ರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆದ ಕೋಟಿ ಚೆನ್ನಯ್ಯ ಒಂದು ಸಂವಾದ ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಉದ್ಘಾಟಿಸಿದರು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+