ಸಂಭ್ರಮ, ಸಡಗರದ ಮಧ್ಯೆ ಹಂಪಿ ವಿರೂಪಾಕ್ಷನ ರಥೋತ್ಸವ
ಬಳ್ಳಾರಿ : ಕಲ್ಲಿನ ರಥ ಕದಲದೆ ನಿಂತಿತ್ತು . ಕಲ್ಲಾದ್ದರಿಂದ, ಬಿರು ಧಗೆಯಲ್ಲೂ ಬೆವರದೆ ನಿಂತಿತ್ತು . ಬೆವರಿ ತೊಪ್ಪೆಯಾದದ್ದು ನೆರೆದಿದ್ದ ಸಹಸ್ರ ಸಂಖ್ಯೆಯ ಭಕ್ತ ಜನ. ಪಂಪಾನದಿಯ ಪರಿಸರದ ತುಂಬಾ ಭಾವಾವೇಶ, ಭಕ್ತಿಯ ಹೊಳೆ. ವಿರೂಪಾಕ್ಷೇಶ್ವರ, ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಸಾಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಭಾನುವಾರ, ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ವಿಜೃಂಭಣೆಯಿಂದ ಜರುಗಿದ ರಥೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಂಭ್ರಮ, ಸಡಗರದಿಂದ ಪಾಲ್ಗೊಂಡಿದ್ದರು. ವಿಜಯನಗರ ಸಂಸ್ಥಾನವನ್ನಾಳಿದ ಕನ್ನಡ ನಾಡಿನ ಹೆಮ್ಮೆಯ ದೊರೆ ಕರ್ನಾಟಕ ರಮಾ ರಮಣ ಶ್ರೀಕೃಷ್ಣದೇವರಾಯ, ಸ್ವಾಮಿಗೆ ನೀಡಿರುವ ನವರತ್ನ ಖಚಿತ ಕಿರೀೕಟವನ್ನು ತೊಡಿಸಿ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿತ್ತು. ರಾಜಮುಡಿಯ ಈ ಅಲಂಕಾರದಲ್ಲಿ ಸ್ವಾಮಿಯನ್ನು ಕಾಣಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ನೆರೆದಿದ್ದರು.
ವಿದ್ಯಾರಣ್ಯ ಪೀಠಾಧಿಪತಿಗಳು, ಹೈದರಾಬಾದ್ ನಿಜಾಮರು ಕೊಡುಗೆಯಾಗಿ ನೀಡಿದ್ದಾರೆಂಬ ಇತಿಹಾಸವುಳ್ಳ ಬೆಳ್ಳಿ ಕಿರೀಟವನ್ನು ಧರಿಸಿ, ಆನೆಗೊಂದಿ ಸಂಸ್ಥಾನದ ಕಡೆಯ ಮಹಾರಾಣಿ ಲಾಲ್ಕುಮಾರಿ ಮಠಕ್ಕೆ ಅರ್ಪಿಸಿರುವ ಬೆಳ್ಳಿಯ ಸಿಂಹಾಸನಾರೂಢರಾಗಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪಂಪಾನದಿಯಲ್ಲಿ ಮಿಂದು ಬಂದ ಭಕ್ತರು ಹರಹರ ಮಹಾದೇವ, ಜೈ ವಿರೂಪಾಕ್ಷೇಶ್ವರ, ಜೈ ಚಂದ್ರಮೌಳೇಶ್ವರ ಎಂದು ಜಯಘೋಷ ಹಾಕುತ್ತಾ ರಥಗಳನ್ನು ಎಳೆದರು. ವೈಭವೋಪೇತವಾಗಿ ನಡೆದ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ . ಪೊಲೀಸ್ ಪಹರೆ ಬಿಗಿಯಾಗಿತ್ತು .
ಮಹಾನವಮಿ ದಿಬ್ಬ, ಕಮಲ್ ಮಹಲ್, ಉಗ್ರ ನರಸಿಂಹನ ಸನ್ನಿಧಿ, ವಿರೂಪಾಕ್ಷೇಶ್ವರ ದೇವಾಲಯ, ಕಡಲೇಕಾಳು ಗಣಪತಿ, ಸಾಸಿವೆ ಗಣಪತಿ, ಚಂದ್ರಮೌಳೇಶ್ವರ ಸ್ವಾಮಿ ಸನ್ನಿಧಿಯೂ ಸೇರಿದಂತೆ ಹಂಪೆಯೆಲ್ಲೆಡೆ ಭಕ್ತರು- ಪ್ರವಾಸಿಗಳು, ರಸ್ತೆಗಳ ಇಕ್ಕೆಲಗಳಲ್ಲೂ ವ್ಯಾಪಾರಿಗಳು. ಹಂಪೆಯ ಗತವೈಭವ ಕೆಲ ಕಾಲ ಮರಳಿದಂತೆ ಭಾಸವಾಯಿತು. ಬೆಟ್ಟದ ಮೇಲೇರಿ ಸೂರ್ಯಾಸ್ತಮಾನ ನೋಡಲು ಬಂದವರಿಗೆ ಸೂರ್ಯಾಸ್ತದ ಬಳಿಕ ಹುಣ್ಣಿಮೆಯ ಹಾಲು ಬೆಳದಿಂಗಳಿನ ಔತಣ .
(ಬಳ್ಳಾರಿ ಪ್ರತಿನಿಧಿಯಿಂದ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications