ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮೊಡನೆ ಕೆಲಸ ಮಾಡುವ ನಿಮ್ಮ ಸ್ನೇಹಿತರು ಸುಸ್ತಾಗುವಂತೆ ಮಾಡಬೇಡಿ. ಖುಷಿಗಾಗಿ ಅವರನ್ನು ಛೇಡಿಸುವಾಗಲೂ ಸ್ವಲ್ಪ ಜಾಗರೂಕರಾಗಿರಿ.

ವೃಷಭ : ಬಚ್ಚಿಟ್ಟುಕೊಂಡ ಸತ್ಯ ತುಂಬಾ ದಿನಗಳ ಕಾಲ ಜೇಬಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಗಾಂಭೀರ್ಯವನ್ನು ಕಾಯ್ದುಕೊಳ್ಳಲಾದರೂ ಈಗ ಎಲ್ಲವನ್ನೂ ತಿಳಿಸಿಬಿಡಿ.

ಮಿಥುನ : ಎಲ್ಲವನ್ನೂ ಮರೆತು ಹಾಯಾಗಿರುವ ಕಾಲವನ್ನು ನೆನೆಸಿಕೊಂಡು ಈಗ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ಕಟಕ : ಧರಣಿಯಾಳುವಾತನಿಗೆ ಸಲ್ಲುವ ಮರ್ಯಾದೆ ನಿಮ್ಮ ಕಾಲಬುಡಕ್ಕೆ ಬರಲಿದೆ. ಆದ್ದರಿಂದ ಸ್ನೇಹಿತರು ತುಂಬಾ ಮಂದಿ ಹತ್ತಿರ ಬರುತ್ತಾರೆ. ಅಂದಮೇಲೆ ಜಾಗ್ರತೆ ಇರಬೇಕು ಎಂದಾಯಿತು.

ಸಿಂಹ : ಹೆಗಲ ಮೇಲಿನ ಜವಾಬ್ದಾರಿಯನ್ನು ಇಳಿಸಲು ಹೆಣಗಾಡುತ್ತೀರಿ. ಆದಾಯದಲ್ಲಿ ಪ್ರಗತಿ ಇರುವುದರಿಂದ ಬಡ್ತಿಯ ಅವಶ್ಯಕತೆಯೇ ನಿಮಗಿಲ್ಲ.

ಕನ್ಯಾ : ತುಂಬಾ ಹಣ ಇಟ್ಟುಕೊಂಡು ಭಂಡ ಧೈರ್ಯದಿಂದ ಸುತ್ತಾಡಬೇಡಿ. ಕಳ್ಳತನದ ಭಯವಿದೆ. ನಿಮ್ಮ ಮಕ್ಕಳ ಸಂಭ್ರಮ ನೋಡಿ ಖುಷಿಯಾಗುತ್ತೀರಿ.

ತುಲಾ : ನಿಮ್ಮ ಯೋಚನೆಗಳು ಪುರಾಣಗಳನ್ನು ಸಣ್ಣವರ ಮೇಲೆ ಹೇರುವುದರಿಂದ ತುಂಬಾ ನಷ್ಟವಾಗಬಹುದು. ಏನಿದ್ದರೂ ಎಲ್ಲವೂ ನಿಮ್ಮ ನೇತೃತ್ವದಲ್ಲಿ ನಡೆಯುವುದರಿಂದ ಕೊನೆಗೆ ನೀವೇ ಜವಾಬ್ದಾರರಾಗುತ್ತೀರಿ.

ವೃಶ್ಚಿಕ : ಮತ್ತೆ ಯಥಾ ಪ್ರಕಾರ ನಿಮ್ಮವೇ ದಿನಗಳು. ಸ್ನೇಹಿತರು, ಬಂಧುಗಳು ನಿಮ್ಮ ಬಳಿ.ಹುಸಿ ಜಗಳಗಳೆಲ್ಲಾ ಇನ್ನೂ ಬಹು ದೂರ ಇದೆ ಅಲ್ಲವೇ?

ಧನಸ್ಸು : ಇವತ್ತು ಬರೀ ವ್ಯವಹಾರದಲ್ಲಿ ವ್ಯಸ್ತರಾಗಿರುತ್ತೀರಿ. ಅವುಗಳ ನಡುವೆಯೂ ಮನೆಯವರಿಗಾಗಿ ಸ್ವಲ್ಪ ಸಮಯ ವ್ಯಯಿಸಿದರೆ ಸಿಟ್ಟು ಪಟ್ಟುಗಳೆಲ್ಲಾ ಮುಗಿದು ಹೋಗುತ್ತವೆ. ಆಲ್‌ ದ ಬೆಸ್ಟ್‌.

ಮಕರ : ಬಡವರು - ಶ್ರೀಮಂತರು ಎನ್ನುವ ಬೇಧ ಯಾವ ಕ್ಷೇತ್ರದಲ್ಲಾದರೂ ಸರಿ ಅಗತ್ಯವಿಲ್ಲ. ಮೂಗಿನ ನೇರಕ್ಕೆ ಮಾತನಾಡಿ ಇಮೇಜು ಕೆಡಿಸಿಕೊಳ್ಳಬೇಡಿ.

ಕುಂಭ : ಇವತ್ತು ಧನಲಾಭದ ಸುದ್ದಿ ನಿಮ್ಮ ಕಿವಿ ತಲುಪಲಿದೆ. ಮತ್ತೆ ಖರ್ಚುಗಳ ಲೆಕ್ಕ ಹಾಕುತ್ತೀರಿ. ಮನೆಯವರೊಂದಿಗೆ ಸಂಭ್ರಮ ಆಚರಿಸಲು ತೊಂದರೆ ಇಲ್ಲ.

ಮೀನ : ನೀವು ಹಾಕುವ ಲೆಕ್ಕಾಚಾರಗಳು ತಿರುವು ಮುರುವು ಆಗುವ ಸಾಧ್ಯತೆ ಇದೆ. ಆದ್ದರಿಂದ ಮತ್ತೆ ಜಗಳಗಳಿಗಾಗಿ ಸಮಯ ಕಾಯಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X