ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇದು ಋತು ಪರಿವರ್ತನೆಯ ಕಾಲ. ನಿಮ್ಮ ಬದುಕಲ್ಲೂ ಪರಿವರ್ತನೆ ಕಾದಿದೆ. ಇಂದು ಕೈಗೊಳ್ಳುವ ನಿರ್ಧಾರದಿಂದ ಮುಂದೆ ದೊಡ್ಡ ಲಾಭ ಇದೆ.

ವೃಷಭ : ಪ್ರೇಮ, ಪ್ರೀತಿಗೆ ಇದು ಕಾಲವೂ ಅಲ್ಲ. ಸೂಕ್ತ ವೇದಿಕೆಯೂ ಅಲ್ಲ. ಹತ್ತಾರು ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ. ಎಚ್ಚರ ತಪ್ಪಿದರೆ, ಕೆಟ್ಟ ಹೆಸರು ಶಾಶ್ವತ.

ಮಿಥುನ : ನಿಮ್ಮ ಲೆಕ್ಕಾಚಾರಗಳು ಯಾವುದೇ ರೀತಿಯಲ್ಲಿಯೂ ಸರಿಯಾಗಿರುವುದಿಲ್ಲ ಅಂತ ಬೇಸರ ಬೇಡ. ಆರೋಗ್ಯದತ್ತ ಗಮನವಿರಲಿ. ಏರಿಳಿತಗಳು ಎಲ್ಲ ಕಡೆಯೂ ಸಹಜ ತಾನೇ. ತಾಳ್ಮೆಯೇ ನಿಮ್ಮನ್ನು ಕಾಪಾಡುವುದು.

ಕಟಕ : ಕಾಫಿಗೆ ಕರೆಯುವ ಸ್ನೇಹಿತರ ನೋವುಗಳನ್ನು ಕೇಳಿ ಬೆರಗಾಗುತ್ತೀರಿ. ಮನೆಯಲ್ಲಿ ಪುತ್ರನಿಂದ ಶುಭಕಾರ್ಯವಾಗಬಹುದು. ನಿಮ್ಮ ಏಕಾಗ್ರತೆಯಿಂದಾಗಿ ಹಿಡಿದಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸುತ್ತೀರಿ.

ಸಿಂಹ : ಸಂಗಾತಿಯ ಸಿಟ್ಟನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದರೆ ಮೌನವಾಗಿರಬೇಕು. ಇವತ್ತು ಸಂಜೆ ನಿಮಗೊಂದು ಆಶ್ಚರ್ಯದ ಸುದ್ದಿ ಕಾದಿದೆ. ಖುಷಿಯ ದಿನ. ಎಂಜಾಯ್‌.

ಕನ್ಯಾ : ನಿಮ್ಮ ಲೆಕ್ಕಾಚಾರ ಸರಿಯಾದುದಕ್ಕೆ ಸಮಾಧಾನದ ನಿಟ್ಟುಸಿರು ಬಿಡುತ್ತೀರಿ. ಕೃಷಿ ಕ್ಷೇತ್ರದಲ್ಲಿ ಲಾಭ ಬರಬಹುದು. ಇಷ್ಟು ದಿನ ದುಡಿದಿರುವುದಕ್ಕೆ ನಷ್ಟ ಕಾಣಲಿಲ್ಲವಲ್ಲ ಅಂತ ಖುಷಿ ಪಡಲಿದ್ದೀರಿ.

ತುಲಾ : ಮನೆಯಲ್ಲಿ ಪತ್ನಿ ಕಾಡುವುದು ನಿಮ್ಮ ಮತ್ತು ಮನೆಯವರ ಒಳ್ಳೆಯದಕ್ಕೇ ಅಲ್ವಾ ? ಆರ್ಥಿಕ ಮುಗ್ಗಟ್ಟಿದೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ಸದ್ಯದಲ್ಲಿಯೇ ಹೊಸ ಯೋಜನೆ ನಿಮ್ಮ ಕೈತುಂಬಾ ಹಣ ತರಲಿದೆ.

ವೃಶ್ಚಿಕ : ಸ್ನೇಹಿತರೊಂದಿಗಿನ ಬೇಸರವೊಂದು ಬಿಟ್ಟರೆ ನೀವು ನಿರಾಳವಾಗಿರುತ್ತೀರಿ. ಸುತ್ತಾಡಬೇಕು ಎಂಬ ಆಸೆ ಮತ್ತೆ ಚಿಗುರುತ್ತದೆ. ಹಾಗಂತ ಪ್ರಯಾಣ ಭಾಗ್ಯ ಸದ್ಯಕ್ಕಿಲ್ಲ.

ಧನಸ್ಸು : ಶತ್ರುಗಳ ಬಗ್ಗೆ ಭಯ ಯಾಕೆ. ನಿಮ್ಮ ಕೆಲಸಗಳು ಸರಿಯಾಗಿರುತ್ತವೆ ಆದ್ದರಿಂದ ಅನಗತ್ಯ ಗೊಂದಲಗಳ ಅಗತ್ಯವಿಲ್ಲ.

ಮಕರ : ಕಳೆದು ಹೋದ ಆಸಕ್ತಿಯನ್ನು ಮತ್ತೆ ಚಿಗುರಿಸುವುದು ನಿಮ್ಮ ಮುಂದಿರುವ ಏಕಮೇವ ಕೆಲಸ. ಇಲ್ಲವಾದಲ್ಲಿ ನಿಮ್ಮ ಬಂಧುಗಳಿಗೆ ಮತ್ತೊಮ್ಮೆ ನಿರಾಸೆ ತರುತ್ತೀರಿ.

ಕುಂಭ : ಪ್ರಯಾಣ ಅನಿವಾರ್ಯ. ಮನೆಯಲ್ಲಿ ಕೊಂಚ ಕಿರಿಕಿರಿ. ಹಣ ಕಾಸಿನ ವ್ಯವಹಾರ ಈ ದಿನದ ಮಟ್ಟಿಗೆ ಬೇಡ. ದೇವರ ಪೂಜೆಯಿಂದ ಕಷ್ಟ ಪರಿಹಾರ.

ಮೀನ : ನೌಕರಿಯಲ್ಲಿ ಪ್ರಗತಿ ಕಾಣುತ್ತೀರಿ. ಹೊಸದನ್ನು ಕಲಿಯಬೇಕು ಎಂಬ ಉತ್ಸಾಹ ನಿಮ್ಮನ್ನು ಉನ್ನತ ಹುದ್ದೆಗೆ ಏರಿಸುತ್ತದೆ. ದೈಹಿಕ ಸುಸ್ತಿನತ್ತ ಸ್ವಲ್ಪ ಗಮನವಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X