ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ಪಾಲಿಗಿದು ಅತ್ಯುತ್ತಮವಾದ ದಿನ. ಆದರೆ, ಕೆಲಸದ ಒತ್ತಡದ ಕಾರಣದಿಂದಾಗಿ ದಿನ ನಿಧಾನವಾಗಿ ಸಾಗುತ್ತಿದೆ ಅನ್ನಿಸಬಹುದು. ಮಧ್ಯಾಹ್ನದ ನಂತರ ಶ್ರಮದಾಯಕ ಕೆಲಸಗಳಲ್ಲಿ ತೊಡಗುವುದು ಬೇಡ.ವೃಷಭ :ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸಿದ್ದು , ಹವೆ ಕೂಡ ನಿಮ್ಮ ಚಟುವಟಿಕೆಗಳಿಗೆ ಸಹಕರಿಸಲಿದೆ. ಸಂಜೆ ಮಕ್ಕಳನ್ನು ಹೊರಗೆ (ಬಹುಶಃ ಪಿಜ್ಜಾ ಕಾರ್ನರ್) ಕರೆದೊಯ್ಯುವುದು ಅನಿವಾರ್ಯವಾದೀತು.
ಮಿಥುನ : ಎಲ್ಲಾ ಟ್ಯಾಕ್ಸಿಗಳನ್ನು ಏಕಕಾಲದಲ್ಲಿ ಚಲಾಯಿಸುವುದು ಸಾಧ್ಯವಿಲ್ಲ . ನೀವು ಮನುಷ್ಯರಾದ್ದರಿಂದ ಅನಾರೋಗ್ಯ ಸಹಜ. ಇಷ್ಟಕ್ಕೆಲ್ಲ ಧೃತಿಗೆಡುವ ಸ್ವಭಾವ ನಿಮಗೆ ಒಗ್ಗುವಂಥದ್ದಲ್ಲ.
ಕಟಕ : ಸದ್ಯಕ್ಕೆ ನಿಮ್ಮ ಪಾಲಿಗೆ ಯಶಸ್ಸಿನ ಹವಾ ಅಷ್ಟು ಚೆನ್ನಾಗಿಲ್ಲವಾದ್ದರಿಂದ ನೀವು ಪ್ಲಾನಿಂಗ್ನಲ್ಲಿ ತೊಡಗುವುದು ಒಳ್ಳೆಯದು. ಇದರಿಂದಾಗಿ ನಾಳೆಯ ಕೆಲಸಗಳು ಸುಲಭವಾಗಲಿವೆ.
ಸಿಂಹ : ಹೆಚ್ಚಿನ ನಿರೀಕ್ಷೆಯ ಬಾಲ ಹಿಡಿದಿರುವುದರಿಂದ ನೀವೀಗ ಬೀಗುತ್ತಿದ್ದೀರಿ. ಆದರೆ ರೇಸಿನಲ್ಲಿ ಎಡವಿ ಬೀಳುವ ಸಾಧ್ಯತೆಯೂ ಇರುವುದರಿಂದ ಜೋಪಾನವಾಗಿರಿ. ಯಾವುದಕ್ಕೂ ಜೀವ ವಿಮೆ ಪಡೆಯುವುದು ಜಾಣತನ.
ಕನ್ಯಾ : ವೃತ್ತಿ ಸಂಬಂಧವಾಗಿ ಕಠಿಣ ವಿಮರ್ಶೆಯನ್ನು ಎದುರಿಸುತ್ತೀರಿ. ಈವರೆಗೂ ಪ್ರಶಂಸಿದವರೇ ಟೀಕಿಸಲು ಪ್ರಾರಂಭಿಸಿದರೆ ಅಚ್ಚರಿಯೇನಿಲ್ಲ . ಇದರಿಂದಾಗಿ ನಿಮ್ಮ ವೃತ್ತಿಪರತೆ ಹೆಚ್ಚುತ್ತದೆ ಎನ್ನುವುದೇ ವಿಶೇಷ.
ತುಲಾ : ನಿಮ್ಮ ವ್ಯಕ್ತಿತ್ವ ತೆರೆದ ಪುಸ್ತಕದಂತಾದರೂ, ಯುವಕರೊಂದಿಗೆ ಹೆಚ್ಚಿನ ಮನಸ್ತಾಪ ಕಟ್ಟಿಕೊಳ್ಳುತ್ತಿದ್ದೀರಿ. ಅವರ ದೃಷ್ಟಿಕೋನ ನಿಮಗೆ ಇಷ್ಟವಾಗದಿರುವುದೇ ವೈಮನಸ್ಯಕ್ಕೆ ಕಾರಣ. ಅವನ್ನು ನಿರ್ಲಕ್ಷಿಸುವುದೇ ಸರಿ.
ವೃಶ್ಚಿಕ : ಬಂಧುಗಳು ಅನಾರೋಗ್ಯದಿಂದ ನರಳುತ್ತಿರುವುದರಿಂದ ಖಿನ್ನರಾಗಿದ್ದೀರಿ. ಶುಭ ಸಮಾಚಾರ ಹತ್ತಿರದಲ್ಲೇ ಇದೆ. ಸೃಜನಶೀಲ ಚಟುವಟಿಕೆಗಳಲ್ಲಿ ವ್ಯಸ್ತರಾಗುವುದು ಬೇಜಾರಿಗೆ ಒಳ್ಳೆಯ ಮದ್ದು.
ಧನಸ್ಸು : ಇಷ್ಟ ಪಾತ್ರರ ಪ್ರೀತಿ ಪೂರದಲ್ಲಿ ಮುಳುಗಿ ಧನ್ಯತೆ ಅನುಭವಿಸಲಿದ್ದೀರಿ. ಬದಲಿಗೆ ನೀವೇನು ಕೊಡುತ್ತೀರಿ ಅನ್ನುವುದರ ಆತ್ಮಾವಲೋಕನ ಅವಶ್ಯ. ತುಸು ತಲೆಭಾರದ ದಿನ.
ಮಕರ : ದಣಿದಿದ್ದೀರಿ. ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಮುಖ್ಯವಾಗಿ ಮಾನಸ ಸರೋವರದಲ್ಲಿ ಅಶಾಂತಿಯ ಅಲೆಗಳು ಏಳದಂತೆ ಎಚ್ಚರಿಕೆ ವಹಿಸಿ. ಅದು ನಿಮ್ಮ ಕೈಯ್ಯಲ್ಲೇ ಇದೆ.
ಕುಂಭ : ಗೆಳೆಯನೊಬ್ಬನ ಅನಿರೀಕ್ಷಿತ ಹಾಜರಿ ಕುಟುಂಬದಲ್ಲಿ ಅಶಾಂತಿಯ ಅಲೆಗಳನ್ನು ಎಬ್ಬಿಸಲಿದೆ. ತಪ್ಪು ತಿಳಿವಳಿಕೆಗಳಿಗೆ ಆಸ್ಪದವಿರುವುದರಿಂದ ಮುಕ್ತ ಚರ್ಚೆಯಾಂದೆ ಪರಿಸ್ಥಿತಿ ತಿಳಿಗೊಳ್ಳಲು ಪರಿಹಾರ.
ಮೀನ : ಹಲೋ ಹೇಳುವ ಮೂಲಕ ಅಪರಿಚಿತನನ್ನು ಗೆಲ್ಲಲು ಪ್ರಯತ್ನಿಸಿ. ಮಾತುಗಾರಿಕೆಯಲ್ಲಿ ನೀವು ಜಾಣರು. ಅಂದಹಾಗೆ ರಜೆಯ ದಿನ ದೈಹಿಕ ಶ್ರಮದೊಂದಿಗೆ ದುಡ್ಡೂ ಕೈ ಬಿಡುತ್ತದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications