ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭುವಿ ಬೆಳೆಗಳ ಕಾಯುವಾತನಿಗೆ ದೀರ್ಘ ನಮನ

By ರಾಜು ಮಹತಿ
|
Google Oneindia Kannada News

ತುಳುನಾಡಿನ ಹೊಲ, ತೋಟ, ಕಾಡುಗಳಲ್ಲಿ ನಾಗನ ಕಲ್ಲುಗಳು ಸಾಮಾನ್ಯ. ಇಲ್ಲಿನ ಭುವಿ ಬೆಳೆಗಳ ಕಾಯುವ ನಾಗದೇವತೆಗೆ ಎಲ್ಲ ಮನೆಗಳಲ್ಲಿಯೂ ಪವಿತ್ರ ಸ್ಥಾನ. ಕುಟುಂಬ ಕಲಹ, ಭೂಮಿ ಕಾಣಿಗೆ ಸಂಬಂಧಿಸಿದ ಸೋಲು ಗೆಲುವು... ಎಲ್ಲವನ್ನೂ ನಾಗದೇವ ನಿರ್ಧರಿಸುತ್ತಾನೆ.

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಗಾರಾಧನೆಗೆ ಜಾತಿ ಬೇಧವಿಲ್ಲ. ಯಾವುದಾದರೂ ಮನೆಯನ್ನು ಕೊಂಡು ಕೊಳ್ಳಬೇಕಿದ್ದರೆ, ಮುಸ್ಲಿಮರಾಗಲೀ, ಕ್ರಿಶ್ಚಿಯನ್ನರಾಗಲೀ ಆ ಮನೆಗೆ ನಾಗದೋ-ಷ ಇಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳುವುದುಂಟು. ನಂತರದಲ್ಲಿ ನಾಗದೋ-ಷ ಕಾಣಿಸಿಕೊಂಡರೆ ಆಶ್ಲೇಷ ಬಲಿ, ತಂಬಿಲಗಳನ್ನು ಮಾಡಿ ನಾಗದೇವರನ್ನು ತೃಪ್ತಿ ಪಡಿಸುತ್ತಾರೆ.

ನಾಗಮಂಡಲ ಸೇವೆಯೆಂದರೆ...

ನಾಗ ಪೂಜೆಯಲ್ಲಿ, ಪ್ರಸಿದ್ಧ ಮತ್ತು ಜನಪ್ರಿಯ ಆರಾಧನಾ ವಿಧಾನ ನಾಗಮಂಡಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಗಮಂಡಲ ಸೇವೆ ವೈಭವದಿಂದ ನಡಯುತ್ತವೆ. ನಾಗಮಂಡಲದಲ್ಲಿ ಬಣ್ಣದ ಹುಡಿಗಳಿಂದ ವರ್ತುಲಾಕಾರದಲ್ಲಿ ನಾಗಬಂಧದ ಚಿತ್ರಗಳನ್ನು ಬಿಡಿಸುತ್ತಾರೆ. ಈ ನಾಗಬಂಧ ವರ್ತುಲದ ತಲೆಭಾಗದಲ್ಲಿ ಕಿರೀಟ ಧರಿಸಿದ ಮುಖವನ್ನು ಚಿತ್ರಿಸಲಾಗುತ್ತದೆ. ಈ ತಲೆಗೆ ಯಕ್ಷಬ್ರಹ್ಮ ಎನ್ನುತ್ತಾರೆ. ಈ ಬ್ರಹ್ಮ ಮತ್ತು ನಾಗ ಒಟ್ಟು ಸೇರಿದರೆ ನಾಗಬ್ರಹ್ಮರಾಗುತ್ತಾರೆ. ಈ ನಾಗಬ್ರಹ್ಮ ಅಥವಾ ಸ್ಥಳೀಯವಾಗಿ ಕರೆಯಲ್ಪಡುವ ಬಿರ್ಮೆರ್‌ ಪ್ರಾಚೀನ ಕಾಲದಿಂದಲೂ ತುಳುನಾಡಿನ ಆರಾಧ್ಯ ದೈವ.

ತುಳುನಾಡಿನ ಹಿರಿಯರು ತುಳುನಾಡಿನ ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಸಾಹಿತ್ಯಗಳಲ್ಲಿ ರಾಜ ರಾಣಿಯರು ಮತ್ತೆ ಮತ್ತೆ ನಾಗಬ್ರಹ್ಮನ ಮೊರೆ ಹೋಗುವುದು ಕಂಡು ಬರುತ್ತದೆ. ನಾವು ಸುಸ್ತಾದಾಗಲೆಲ್ಲಾ ಶಿವನೇ... ಹರನೇ... ಎನ್ನುವ ಹಾಗೆ ತುಳುನಾಡಿನ ಹಿರಿಯರು ನಾಗದೇವನೇ ಕಾಪಾಡಪ್ಪಾ... ಎಂದೇ ಹೇಳುವುದು. ಹಿಂದೂ ಪುರಾಣಗಳ ಪ್ರಕಾರ ಭೂಮಿಯನ್ನು ಆದಿಶೇಷ ಹೊತ್ತು ಕೊಂಡಿದ್ದಾನೆ. ಪ್ರಕೃತಿ ವಿಕೋಪವಾಗಿದೆ ಎಂದರೆ ಆತನಿಗೆ ಸಿಟ್ಟು ಬಂದಿದೆ ಎಂದೋ ಅಥವಾ ಆತನ ಮನಸ್ಸಿಗೆ ನೋವಾಗಿದೆ ಎಂದೋ ಅರ್ಥ. ಆದಿಶೇಷನನ್ನು ಸುಪ್ರೀತಿಗೊಳಿಸುವುದಕ್ಕೆ ನಾಗಮಂಡಲ ಆರಾ-ಧನೆಯನ್ನು ನಡೆಸುತ್ತಾರೆ. ನಾಗಮಂಡಲವನ್ನು ಯಾವ ಮನೆಯವರೇ ಮಾಡಲಿ ಸುತ್ತ ಮುತ್ತಲಿನವರು ಹೊರೆ ಕಾಣಿಕೆ ಅಂತ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ನಾಗನಿಗೆ ಹಿಂಗಾರ ಹೂವೆಂದರೆ ಪ್ರೀತಿ ಆದ್ದರಿಂದ ಯಾರ ಮನೆಯ ಕಂಗಿನ ತೋಟವಿದೆಯೋ ಅವರೆಲ್ಲರೂ ನಾಗಮಂಡಲ ಪೂಜೆಗೆ ಸ್ವ ಇಚ್ಛೆಯಿಂದ ಹಿಂಗಾರ ಹೂವು ಅರ್ಪಿಸುತ್ತಾರೆ.

ಶಾಸನಗಳತ್ತ ಹೊರಳಿದರೆ ...
ನಾಗ ಮಂಡಲ ಖಚಿತವಾಗಿ ಎಂದಿನಿಂದ ಆರಂಭವಾಯಿತು ಎಂದು ಹೇಳಲಾಗದು. ಕ್ರಿ.ಶ. 1458ರ ಬಾರಕೂರಿನ ಶಾಸನದಲ್ಲಿ ಢಕ್ಕೆ ಬಲಿಯ ಪ್ರಸ್ತಾಪವಿದೆ. 13ನೇ ಶತಮಾನಕ್ಕೆ ಸಂಬಂಧಿಸಿದ ನಾಗಮಂಡಲದ ಶಿಲ್ಪ ಕಾರ್ಕಳದ ಂದಳಿಕೆಯಲ್ಲಿ ದೊರೆತಿದೆ.

ನಾಗಮಂಡಲ ಮನೆಯಿಂದ ತುಸು ದೂರದ ವಿಸ್ತಾರ ಪ್ರದೇಶದಲ್ಲಿ ನಡೆಯುತ್ತದೆ. ತುಂಬಾ ಕಡಿಮೆಯೆಂದರೂ ಹತ್ತು ಸಾವಿರ ಮಂದಿ ನಾಗಮಂಡಲಕ್ಕೆ ಬಂದೇ ಬರುತ್ತಾರೆ. ಕೇಳಿ ತಿಳಿದ ಸುದ್ದಿಯೇ ಅವರಿಗೆ ಆಹ್ವಾನ ಪತ್ರಿಕೆ. ಅವರಿಗೆಲ್ಲರಿಗೂ ಊಟ, ಉಪಚಾರ, ದಾನ ಧರ್ಮ ಅಂತ ಲಕ್ಷಗಟ್ಟಲೆ ಹಣ ಹರಿಯುತ್ತದೆ. ಆದರೆ ನಂಬಿಕೆ ನೀಡುವ ತೃಪ್ತಿಗೆ ಸಮನುಂಟೇ ? ನಾಗಮಂಡಲದಲ್ಲಿ ನಾಗಯಕ್ಷಿಯನ್ನು ಆವಾಹಿಸಿಕೊಳ್ಳುವ ಪಾತ್ರಿ ಹಿಂಗಾರದ ಹೂವುಗಳನ್ನು ಮುಖಕ್ಕೆ ಆಗಾಗ ತುರುಬಿಕೊಳ್ಳುತ್ತಾರೆ. ನಾಗಮಂಡಲ ಚಿತ್ತಾರದ ಹೊರಸುತ್ತಿನಲ್ಲಿ ನಡೆಯುವ ಕುಣಿತ ಅತ್ಯಂತ ಸುಂದರವೂ, ತರಂಗಬದ್ಧವೂ ಆಗಿರುತ್ತದೆ.

ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ನಾಗಮಂಡಲದಲ್ಲಿ ರಾಜಕೀಯ ವ್ಯಕ್ತಿಗಳೂ ಸೇರಿದಂತೆ ಅಂದಾಜು 30 ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು. ಬೇಸಿಗೆ ಬಂದಂತೆ, ನಾಗಮಂಡಲ ಉತ್ಸವಗಳ ಹರಕೆ ಹೊತ್ತವರು ಚಪ್ಪರಗಳನ್ನು ಹಾಕುವುದರಲ್ಲಿಯೋ, ಗದ್ದೆಗಳನ್ನು ಸಮತಟ್ಟು ಮಾಡುವುದರಲ್ಲೋ ವ್ಯಸ್ತರಾಗಿರುತ್ತಾರೆ. ಎಲ್ಲ ಆಧುನಿಕತೆಗಳನ್ನು ಮೀರಿ ತುಳು ನಾಡಿನವರ ಏಳು ಬೀಳುಗಳ ಭಾವನೆಗಳ ಹಿಂದೆ ನಾಗದೇವನಿದ್ದಾನೆ.

English summary
Nagamandala to please Nagadeva, this ritual popular in D.K. and Udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X