ದುರುಗಮ್ಮನ ಜಾತ್ರೆಗೆ ಬಲಿಪಶುಗಳೊಂದಿಗೆ ಭಕ್ತಾದಿಗಳ ದಂಡು
ಕೊಪ್ಪಳ : ಬಲಿ ಜಾತ್ರೆ ಎಂದೇ ಖ್ಯಾತವಾದ ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ ದುರುಗಮ್ಮನ ಜಾತ್ರೆ ಇಂದಿನಿಂದ. ಫೆ. 23ರಿಂದ 26ರವರೆಗೆ ನಡೆವ ಈ ಜಾತ್ರೆಯಲ್ಲಿ ಪ್ರಾಣಿ ಬಲಿಯೇ ವಿಶೇಷ. ಮೂರು ವರ್ಷಕ್ಕೊಮ್ಮೆ ನಡೆವ ಜಾತ್ರೆಯಲ್ಲಿ ಭಕ್ತಾದಿಗಳು ಕೋಳಿ, ಕುರಿ, ಟಗರು ಹಾಗೂ ಕೆಲವೊಮ್ಮೆ ಕೋಣನ ಬಲಿ ನೀಡುವುದೂ ಉಂಟು.
ದೇವರ ಹರಕೆ ತೀರಿಸಲು ಕೋಳಿ, ಕುರಿ, ಟಗರುಗಳೊಂದಿಗೆ ತಂಡೋಪ ತಂಡವಾಗಿ ಭಕ್ತಾದಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡಬೇಡಿ ಎಂಬ ತಿಳಿವಳಿಕೆ ಮೂಡಿಸುವ ವಿಚಾರವಾದಿಗಳ ತಂಡವೂ ಗ್ರಾಮಕ್ಕೆ ಬಂದಿದೆ. ಪೊಲೀಸ್ ಬಿಗಿಬಂದೋಬಸ್ತ್ ಸಹ ಮಾಡಲಾಗಿದೆ. ಈ ನಡುವೆಯೂ ಕೋಳಿ, ಕುರಿಗಳ ಬಲಿ ಅವ್ಯಾಹತವಾಗಿ ಸಾಗಿದೆ ಎಂಬುದು ವರದಿ.
ಜಾತ್ರೆಗೆ ವಾರಗಳ ಮುಂಚೆಯೇ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿ, ಪ್ರಾಣಿ ಬಲಿ ಮೂಢ ನಂಬಿಕೆ, ಬಲಿ ನೀಡುವ ಪದ್ಧತಿ ಕೈಬಿಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದರು.
ಮನವಿಯನ್ನು ಧಿಕ್ಕರಿಸಿ ಕಾನೂನು ಬಾಹಿರವಾಗಿ ಪ್ರಾಣಿ ಬಲಿ ನೀಡಿದರೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶವನ್ನೂ ಹೊರಡಿಸಲಾಗಿದೆ. ಗ್ರಾಮದ ಎಲ್ಲೆಡೆ ದಯಯೇ ಧರ್ಮದ ಮೂಲವಯ್ಯ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ, ಪ್ರಾಣಿ ಬಲಿ ಅಮಾನವೀಯ ಎಂಬ ಬರಹಗಳುಳ್ಳ ಬ್ಯಾನರ್, ಪೋಸ್ಟರ್ ಅಂಟಿಸಲಾಗಿದೆ.
ಆದರೆ, ಬೇರೆ ಊರುಗಳಿಂದ ಬರುವ ಭಕ್ತರು ತಮ್ಮ ಹರಕೆ ತೀರಿಸಲು ಪೊಲೀಸರ ಕಣ್ಣು ತಪ್ಪಿಸಿ ಬಲಿ ನೀಡುತ್ತಲೇ ಇದ್ದಾರೆ. ದಿನವೂ ಕಸಾಯಿ ಅಂಗಡಿಯಲ್ಲಿ ನೂರಾರು ಪ್ರಾಣಿಗಳನ್ನು ಕಡಿದು ತೂಗು ಹಾಕುತ್ತಾರೆ. ರಾಜಾರೋಷವಾಗಿ ಮಾಂಸ ಮಾರುತ್ತಾರೆ. ಅದು ತಪ್ಪಲ್ಲ, ನಾವು ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡಿದರೆ ತಪ್ಪೆ ಎಂದು ಕೆಲವು ಭಕ್ತಾದಿಗಳು ಪೊಲೀಸರೊಂದಿಗೆ ಜಗಳಕ್ಕೂ ನಿಂತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಪ್ರಾಣಿ ಬಲಿ ನೀಡದಂತೆ ಗ್ರಾಮಸ್ಥರ ಮನವೊಲಿಸುವ ಕಾರ್ಯ ಸಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಅಯಾಚಿತ್ ತಿಳಿಸಿದ್ದಾರೆ.
(ಕೊಪ್ಪಳ ಪ್ರತಿನಿಧಿಯಿಂದ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications