ರಾಂಗ್ ಡ್ರೆೃವಿಂಗ್ಗೆ ಕಡಿವಾಣ : ವಿವಿಐಪಿಗಳ ರಸ್ತೆಗಳಲ್ಲಿ ಟೆಲಿ ಕ್ಯಾಮರಾ
ಬೆಂಗಳೂರು : ವಿವಿಐಪಿಗಳು ಓಡಾಡುವ ಜಾಗದಲ್ಲಿ ಇನ್ನು ಮುಂದೆ ನೀವು ರಾಂಗ್ ಡ್ರೆೃವಿಂಗ್ ಮಾಡಿದಲ್ಲಿ , ದಂಡ ತೆರದೆ ನೀವು ಮುಂದೆ ಹೋಗುವಂತೆಯೇ ಇಲ್ಲ. ಕ್ಯಾಮರಾದಲ್ಲಿ ನಿಮ್ಮ ತಪ್ಪು ನೀಟಾಗಿ ರೆಕಾರ್ಡ್ ಆಗಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜಭವನದ ರಸ್ತೆಯಲ್ಲಿ , ನಗರದ ಮುಖ್ಯ ಟ್ರಾಫಿಕ್ ಜಂಕ್ಷನ್ಗಳಲ್ಲಿ ಮತ್ತು ವಿವಿಐಪಿಗಳು ಓಡಾಡುವಲ್ಲಿ ಟೆಲಿ ಕ್ಯಾಮರಾಗಳನ್ನು ಅಳವಡಿಸುವ ಪ್ರಸ್ತಾವನೆ ಟ್ರಾಫಿಕ್ ಪೊಲೀಸರ ಮುಂದಿದೆ.
ಟೆಲಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸಕ್ಕೆ 15 ಲಕ್ಷ ರೂಪಾಯಿ ಖರ್ಚಾಗಲಿದೆ. ಇದು ಪೊಲೀಸರಿಗೆ ಮಾಹಿತಿ ನೀಡುವ ಮುಖ್ಯ ಅಸ್ತ್ರವಾಗಲಿದೆ ಎಂದು ನಗರದ ಸೆಕ್ಯುರಿಟಿ ಮತ್ತು ಟ್ರಾಫಿಕ್ ವಲಯದ ಹೆಚ್ಚುವರಿ ಆಯುಕ್ತ ಎಂ.ಎನ್. ರೆಡ್ಡಿ ಹೇಳುತ್ತಾರೆ. ಸದ್ಯಕ್ಕೆ ಈ ಯೋಜನೆಗೆ ರಾಜ್ಯ ಸರಕಾರ ಮತ್ತು ಪೊಲೀಸ್ ಕಮೀಷನರ್ ಅವರ ಅಪ್ಪಣೆ ಸಿಗಬೇಕು.
ಇವುಗಳನ್ನು ಅಳವಡಿಸಿದ ನಂತರ ಅಪರಾಧಿಗಳನ್ನು ಪತ್ತೆ ಹಚ್ಚಲು, ದಂಡ ವಿಧಿಸಲು ಸಹಾಯಕವಾದರೆ ಮಾತ್ರ ಈ ಯೋಜನೆಯನ್ನು ಮುಂದುವರೆಸಲಾಗುವುದು. ಸಿರ್ಸಿ ಸರ್ಕಲ್ ಫ್ಲೈ ಓವರ್, ಎಂ.ಜಿ. ರೋಡ್ ಮತ್ತು ಬ್ರಿಗೇಡ್ ರೋಡ್ ಜಂಕ್ಷನ್, 100 ಫೀಟ್ ರಿಂಗ್ ರೋಡ್, ಟ್ರಿನಿಟಿ ಸರ್ಕಲ್, ಗಾಂಧಿ ಪ್ರತಿಮೆ ಮತ್ತು ರಾಜಭವನದ ಬಳಿ ಕ್ಯಾಮರಾಗಳನ್ನು ಫಿಕ್ಸ್ ಮಾಡಲಾಗುವುದು.
ಈ ವಾರದ ಆರಂಭದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ ಕ್ಯಾಮರಾದಲ್ಲಿ ಸೇನೆಯ ಕ್ಯಾಪ್ಟನ್ ಒಬ್ಬ ಭಾನುವಾರದಂದು ತಪ್ಪು ದಿಕ್ಕಿನಲ್ಲಿ ವಾಹನ ಓಡಿಸುತ್ತಿದ್ದು, ಆತ ಸಿಕ್ಕಿ ಬಿದ್ದಾಗ, ಎರಡು ಮಾತಿಲ್ಲದೆ ದಂಡ ತೆತ್ತಿದ್ದಾನೆ. ವೀಡಿಯೋ ಕ್ಯಾಮರಾದಲ್ಲಿ ಪ್ರಯಾಣಿಕರು ಮಾಡಿರುವ ತಪ್ಪು, ಸಮಯ, ವಾಹನದ ನಂಬರ್ ಎಲ್ಲವೂ ನಮೂದಾಗುತ್ತದೆ.
(ಇನ್ಫೋ ವಾರ್ತೆ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications