Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೆಹಲಿಗೆ ಕಾಫಿ ಬೆಳೆಗಾರರ ನಿಯೋಗ

ಬೆಂಗಳೂರು : ಕಾಫಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ನೆರವು ನೀಡುವಂತೆ ಕೇಂದ್ರಸರ್ಕಾರವನ್ನು ಒತ್ತಾಯಿಸಲು ದೆಹಲಿಗೆ ತೆರಳುವ ಸಣ್ಣ ಕಾಫಿ ಬೆಳೆಗಾರರ ನಿಯೋಗದ ನೇತೃತ್ವವನ್ನು ವಹಿಸಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಒಪ್ಪಿದ್ದಾರೆ.

ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅಖಿಲ ಭಾರತ ಕಾಫಿ ಕೈಗಾರಿಕೆ ಕಾರ್ಯಕಾರಿ ಸಮಿತಿಯ ಸದಸ್ಯರು, 8 ಕೋಟಿ ರುಪಾಯಿ ಕೃಷಿ ಆದಾಯ ತೆರಿಗೆ ಹಾಗೂ ಸಹಕಾರಿ ಸಾಲಗಳನ್ನು ರದ್ದು ಪಡಿಸುವಂತೆ

ಒತ್ತಾಯಿಸಿದರು. ಕಾಫಿ ಕೈಗಾರಿಕೆ 250 ಕೋಟಿ ರುಪಾಯಿಗಳ ನಷ್ಟದಲ್ಲಿರುವುದರಿಂದ ಬೆಳೆಗಾರರಿಗೆ ಸರ್ಕಾರದಿಂದ ಈ ನೆರವು ಅಗತ್ಯ ಎಂದು ಸದಸ್ಯರು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಮನ್ವಯಕ ಜಿ.ಸಿ. ಬಾಲಚಂದ್ರನ್‌- ಕಾಫಿ ಕೃಷಿಯಲ್ಲಿ ತೊಡಗಿರುವವರಲ್ಲಿ ಪ್ರತಿಶತ 95 ರಷ್ಟು ಮಂದಿ ಸಣ್ಣ ಹಾಗೂ ಮಧ್ಯಮ ರೈತರು. ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ. 60 ರಷ್ಟನ್ನು ಉತ್ಪಾದಿಸುವ ಈ ರೈತರು, ಸಹಕಾರಿ ಬ್ಯಾಂಕ್‌ಗಳಿಂದ 300 ಕೋಟಿ ರು. ಸಾಲವನ್ನು ಪಡೆದಿದ್ದಾರೆ. ಬೆಳೆಗಾರರು ಪ್ರಸಕ್ತ ನಷ್ಟದಲ್ಲಿರುವುದರಿಂದ ಈ ಸಾಲಗಳನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಬೇಕು ಎಂದರು.

ಪ್ರಸಕ್ತ ವರ್ಷ ಮಾರಾಟ ತೆರಿಗೆಯನ್ನು ರದ್ದು ಪಡಿಸುವಂತೆ ಹಾಗೂ ವಾಣಿಜ್ಯ ಬ್ಯಾಂಕ್‌ಗಳು ನೀಡಿರುವ ಸಾಲವನ್ನು ಕೂಡಾ ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಲು ಕೇಂದ್ರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಬೇಕೆಂದು ರಾಜ್ಯ ಸರ್ಕಾರವನ್ನು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+