ಔದ್ಯೋಗಿಕ ನಗರಿ ಕಳಕೊಂಡಿರೋದು6 ಸಾವಿರ ಕೋಟಿ ರುಪಾಯಿ
ಗುಜರಾತ್ : ಒಂದೆಡೆ ಹೆಣಗಳ ಹುಡುಕಾಟ, ಇನ್ನೊಂದೆಡೆ ಬದುಕು ಸಾವಿನ ನಡುವೆ ಹೋರಾಡುತ್ತಿರುವ ಜೀವಗಳ ರಕ್ಷಣೆಗೆ ಒತ್ತು, ಮತ್ತೊಂದೆಡೆ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ನಲುಗಿ ಹೋಗಿರುವ ಗುಜರಾತ್ ಈಗ ನಂಬರ್ ಒನ್ ಔದ್ಯಮಿಕ ನಾಡಾಗಿ ಉಳಿದಿಲ್ಲ. ಒಟ್ಟಾರೆ 6 ಸಾವಿರ ಕೋಟಿ ರುಪಾಯಿ ಕಳಕೊಂಡು ಪಿಂಜರಾಪೋಲಾಗಿ ಬಿಟ್ಟಿದೆ.
ಗುಜರಾತ್ ಕೈಗಾರಿಕೆಗಳಿಗೆ ಹೆಸರುವಾಸಿಯಾದ ರಾಜ್ಯ. ಗಣರಾಜ್ಯೋತ್ಸವದ ಕಹಿ ಕೊಡುಗೆ ಭೂಕಂಪನ ಈ ರಾಜ್ಯದ ಕೈಗಾರಿಕಾ ಸಾರ್ವಭೌಮತ್ವಕ್ಕೇ ಕುತ್ತು ತಂದಿದೆ. ಮಾನವ ಸಂಪನ್ಮೂಲ ಕಳಕೊಂಡಿರುವ ಜತೆಗೆ ಸರ್ಕಾರ ಪ್ರತಿ ನಿತ್ಯ 500 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿದೆ.
ಎಣ್ಣೆಬೀಜ, ವನಸ್ಪತಿಗಳ ತವರು ಎಂದೇ ಕರೆಸಿಕೊಳ್ಳುತ್ತಿದ್ದ ಗುಜರಾತ್, ಮಾರುಕಟ್ಟೆಯ ದೃಷ್ಟಿಯಲ್ಲಿ ಈ ಹೊತ್ತು ಏನೂ ಆಗಿ ಉಳಿದಿಲ್ಲ. ಔದ್ಯಮಿಕ ನಗರಿ ಎಂದೇ ಕರೆಸಿಕೊಳ್ಳುತ್ತಿದ್ದ ಅಹಮದಾಬಾದ್ನಲ್ಲಿ ಬದುಕುಳಿದ ಜನ ಚದುರಿ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ರಿಲಯನ್ಸ್, ಎಸ್ಸಾರ್ ಗುಜರಾತ್ ಮೊದಲಾದ ಹೆಸರಾಂತ ಕಂಪನಿಗಳು ಕಂಪನದ ತುಳಿತದಿಂದ ಬಚಾವಾಗಿದ್ದರೂ, ಕಂಪನಿಗಳ ಕೆಲಸಗಳು ಸ್ಥಗಿತಗೊಂಡಿವೆ.
ದೇಶದ ಹಲವಾರು ರಾಜ್ಯಗಳು ಒಂದು ರಾಜ್ಯವನ್ನು ಯಾವುದಾದರೊಂದು ದೈನಿಕ ಅಗತ್ಯ ವಸ್ತುವಿಗೆ ಅವಲಂಬಿಸುವುದು ಬಹುತೇಕ ಅನಿವಾರ್ಯ. ದಿನ ನಿತ್ಯ ಅಡುಗೆಗೆ ಉಪಯೋಗಿಸುವ ಕಡಲೆಕಾಯಿಎಣ್ಣೆ, ವನಸ್ಪತಿ ಉತ್ಪಾದನೆ ಹಿಂದೆಂದೂ ಕಾಣದಷ್ಟು ಕುಸಿಯುವ ಸಾಧ್ಯತೆಯಿದ್ದು, ಇದಕ್ಕೆ ಇಡೀ ದೇಶದ ಜನ ದಂಡ ತೆರಬೇಕಾಗುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಒಟ್ಟಿನಲ್ಲಿ ಔದ್ಯೋಗಿಕವಾಗಿ ನಾಗಾಲೋಟದಿಂದ ಓಡುತ್ತಿದ್ದ ಗುಜರಾತನ್ನು ಕಂಪನದ ಎಡರು ಮುಗ್ಗರಿಸಿ ಬೀಳುವಂತೆ ಮಾಡಿಬಿಟ್ಟಿದೆ ; ಎಲ್ಲದರಲ್ಲೂ.
(ಇನ್ಫೋ ವಾರ್ತೆ)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications