ಕರ್ನಾಟಕದಲ್ಲಿ ಭೂಕಂಪ ? ಆತಂಕಕ್ಕೆ ಆಸ್ಪದವಿಲ್ಲ,ವದಂತಿಗಳೆಲ್ಲಾ ಸುಳ್ಳು
(ಇನ್ಫೋ ವರದಿ)
ಬೆಂಗಳೂರು : ಭೂಕಂಪ ಕುರಿತಂತೆ ಯಾವುದೇ ಆತಂಕಗಳಿಗೆ ಕಾರಣವಿಲ್ಲ . ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಸುರಕ್ಷಿತ ವಲಯದಲ್ಲಿದೆ. ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಭೂಕಂಪ ಪರಿಣತರು ರಾಜ್ಯದ ಜನತೆಗೆ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 20 ಕ್ಕೂ ಹೆಚ್ಚು ಸೆಕೆಂಡುಗಳ ಕಾಲ ಸಂಭವಿಸಿದ ಭೂಕಂಪದ ನಂತರ, ನಗರದಲ್ಲಿ ವದಂತಿಗಳದ್ದೇ ಮೇಲುಗೈ. ಮತ್ತೆ ಭೂಕಂಪವಾಗುತ್ತದಂತೆ ಅನ್ನುವ ಮಾತಿನಿಂದ ಹಿಡಿದು, ಭೂಕಂಪ ಹನ್ನೊಂದು - ಹನ್ನೆರಡು ಗಂಟೆಗೆ ಸಂಭವಿಸುತ್ತದಂತೆ ಅನ್ನುವ ಗಡುವುಗಳೂ ಚಾಲ್ತಿಯಲ್ಲಿದ್ದವು. ಈ ಕುರಿತ ಆತಂಕದ ದೂರವಾಣಿ- ಈ ಮೆಯಿಲ್ ಕರೆಗಳು ಇಂಡಿಯಾ ಇನ್ಫೋ ಕಚೇರಿಗೆ ಬಿಡುವಿಲ್ಲದಂತೆ ಬರುತ್ತಿವೆ. ಈ ನಿಟ್ಟಿನಲ್ಲಿ ತಜ್ಞರನ್ನು ಸಂಪರ್ಕಿಸಿದಾಗ ಅವರು ಒಂದೇ ಮಾತಿನಲ್ಲಿ ಹೇಳಿದ್ದು - ಆತಂಕಕ್ಕೆ ಆಸ್ಪದವೇ ಇಲ್ಲ , ವದಂತಿಗಳೆಲ್ಲಾ ಸುಳ್ಳು.
ತಜ್ಞರು ಹೀಗೆನ್ನುತ್ತಾರೆ : ಗುಜರಾತ್ನಲ್ಲಿ ಸಂಭವಿಸಿರುವ ಭೂಕಂಪದ ಆತಂಕ ವಲಯಕ್ಕೆ ಕರ್ನಾಟಕ ಸೇರಿಲ್ಲ . ಆದ್ದರಿಂದ ಆತಂಕಕ್ಕೆ ಕಾರಣವೇನೂ ಇಲ್ಲ ಎಂದು ಹೈದರಾಬಾದ್ನ ಜಿಯಾ- ಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ನ (ಎನ್ಜಿಪಿಆರ್ಐ) ಡಾ. ಆರ್.ಎನ್. ಅಥಾವಳೆ ಹೇಳಿದ್ದಾರೆ. ಅದೇ ಸಂಸ್ಥೆಗೆ ಸೇರಿದ ಡಾ. ಕೌಸಲ್ಯ ಹೇಳುವಂತೆ- ಬೆಂಗಳೂರಿನಲ್ಲಿ ಅನುಭವಕ್ಕೆ ಬಂದಿರುವ ಭೂಕಂಪದ ಕೇಂದ್ರ (ಎಪಿ ಸೆಂಟರ್) ಇರುವುದು ತಮಿಳುನಾಡಿನ ಧರ್ಮಪುರಿಯಲ್ಲಿ . ತಮಿಳುನಾಡಿನ ರಾಷ್ಟ್ರೀಯ ಭೂಗರ್ಭ ಅಧ್ಯಯನ ಸಂಸ್ಥೆಯ ಮೂಲಗಳ ಪ್ರಕಾರ, ಧರ್ಮಪುರಿಯ ಇತಿಹಾಸದಲ್ಲಿ ಇಂಥಾ ಲಘು ಕಂಪನಗಳು ಮಾಮೂಲು. ಸೋಮವಾರದ ಕಂಪನದ ತೀವ್ರತೆಯನ್ನು ಅಲ್ಲಿನ ರಿಕ್ಟರ್ ಮಾಪಕ 4.5 ಎಂದು ಗುರುತಿಸಿದೆ.
ಮಾಹಿತಿ ಸಂಗ್ರಹಣೆ : ಭೂಕಂಪದ ಬಗೆಗಿನ ಮಾಹಿತಿಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ.ಎಲ್. ಕ್ಪೊಪಾರ್ ಹೇಳಿದ್ದಾರೆ. ಬೆಂಗಳೂರು. ತುಮಕೂರು ಹಾಗೂ ಕೊಳ್ಳೇಗಾಲದಲ್ಲಿ ಭೂಕಂಪ ಸಂಭವಿಸಿರುವ ವರದಿಗಳು ಬಂದಿದೆ ಎಂದು ಅವರು ತಿಳಿಸಿದ್ದಾರೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications