Get Updates
Get notified of breaking news, exclusive insights, and must-see stories!

ಮೈಸೂರಿನಲ್ಲಿ ಫೆಬ್ರವರಿ ಮೂರನೇ ವಾರ ವಚನ ಸಂಗೀತೋತ್ಸವ

ಮೈಸೂರು : ಫೆಬ್ರವರಿ ಮೂರನೇ ವಾರದಲ್ಲಿ ಪ್ರಪ್ರಥಮ ವಚನ ಸಂಗೀತೋತ್ಸವ ಮೈಸೂರಿನಲ್ಲಿ ಜರುಗಲಿದೆ. ಈ ಸಂಗೀತೋತ್ಸವಕ್ಕಾಗಿ ಸರಕಾರ ಒಂದು ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಎರಡು ದಿನಗಳ ಕಾಲ ಮೈಸೂರಿಗರಿಗೆ ವಚನ ಗಾನಾಮೃತ ಸವಿಯುವ ಅವಕಾಶ ಲಭ್ಯವಾಗಲಿದೆ.

ಈ ವಿಷಯವನ್ನು ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ರಾಣಿ ಸತೀಶ್‌ ಮೈಸೂರಿನಲ್ಲಿ ಬುಧವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದಾಸ ಸಾಹಿತ್ಯದ ಸಮಗ್ರ ಸಂಪುಟವೊಂದನ್ನು ಸಹ ಹೊರತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪುರಂದರದಾಸರ ಪುಣ್ಯದಿನವಾದ ಬುಧವಾರ ತಿಳಿಸಿದರು. ಅಲ್ಲದೆ ಹಂಪೆಯ ಪುರಂದರ ಮಂಟಪದಲ್ಲಿ ಒಂದು ದಿನದ ಪುರಂದರ ಉತ್ಸವವನ್ನು ಸಹ ಆಚರಿಸಲಾಗುವುದೆಂದರು.

ಕುವೆಂಪು ಭವನ: ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಫೆಬ್ರವರಿ 2ನೇ ತಾರೀಖು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಕುವೆಂಪು ಭವನವನ್ನು ಉದ್ಘಾಟಿಸಲಿದ್ದಾರೆ ಎಂದ ಅವರು ಗಡಿನಾಡು ಹಾಗೂ ಜಿಲ್ಲಾ ಉತ್ಸವಗಳಿಗೆ ತಲಾ 50 ಸಾವಿರ ರುಪಾಯಿ ನೀಡಲಾಗುತ್ತಿದೆ, ಕನ್ನಡ ಸಂಸ್ಕೃತಿಯನ್ನು ಪ್ರಚುರ ಪಡಿಸಲು ಸ್ಥಳೀಯರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮಡಿಕೇರಿಯಲ್ಲಿರುವ ವೀರರಾಜೇಂದ್ರ ಹಾಗೂ ದಿವಾನರ ಗದ್ದುಗೆಗಳ ಪುನಶ್ಚೇತನಕ್ಕೆ 10 ಲಕ್ಷ ರುಪಾಯಿ ಬಿಡುಗಡೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ದನಗೂರಿನಲ್ಲಿ ಉಪ್ಪಿನ ಷಡಕ್ಷರಿ ಅವರ ಹೆಸರಿನಲ್ಲಿ ಬಯಲು ರಂಗಮಂದಿರ ನಿರ್ಮಿಸಲು 1 ಲಕ್ಷ ರುಪಾಯಿ ಬಿಡುಗಡೆಗೊಳಿಸಲಾಗಿದೆ ಎಂಬ ವಿವರಗಳನ್ನೂ ಸಚಿವೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+