ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಸಹೋದರ ಭೇಟಿಯಿಂದ ಮನೆಯೆಲ್ಲಾ ಗಲಗಲ ಎನ್ನಲಿದೆ. ಹಿರಿಯರು ಹೇಳುವುದು ನಿಮ್ಮ ಒಳ್ಳೆಯದಕ್ಕೇ ಅಲ್ವ ? ಸಿಟ್ಟು ಬೇಡ.

ವೃಷಭ :ಇವತ್ತು ಡಲ್ಲಾಗಿರುತ್ತೀರಿ. ನಿಜ ಹೇಳಬೇಕೆಂದರೆ ಯಾವುದೋ ಪ್ಲಾನ್‌ ನಿಮ್ಮ ತಲೆಯಲ್ಲಿ ಸಿದ್ಧಗೊಳ್ಳುತ್ತಿದೆ. ದಾರಿ ಸುಗಮವಾಗಿದೆ.

ಮಿಥುನ : ತುಂಬಾ ಖುಷಿಯಾಗಿರುತ್ತೀರಿ. ಏನೋ ಕಾದಿದೆ ಅಂತ ಈಗಿರುವ ಖುಷಿಯನ್ನೆಲ್ಲಾ ಕೆಡಿಸಿಕೊಳ್ಳಬೇಡಿ.

ಕಟಕ : ಬೇಜಾರು, ನೋವುಗಳಿಗೆ ಮದ್ದಾಗಿ ಇನ್ನೆಲ್ಲೋ ಖುಷಿಯಾಂದು ಹುಟ್ಟಿ ಬರುತ್ತಿದೆ. ಅದನ್ನು ಹುಡುಕಿ, ಪೋಷಿಸುವುದೇ ನಿಮ್ಮ ಮುಂದಿರುವ ಈಗಿನ ಜವಾಬ್ದಾರಿ.

ಸಿಂಹ : ನಾಯಿ ಬಾಲ ಡೊಂಕು ಎಂಬಂತೆ ವರ್ತಿಸಿದರೆ, ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವ ಸ್ನೇಹಿತರೂ ದೂರಾಗುತ್ತಾರೆ. ತಿದ್ದಿಕೊಳ್ಳಲು ಯಾರಿಂದಲಾದರೂ ಬೈಯಿಸಿಕೊಳ್ಳಬೇಕೆಂದಿಲ್ಲ.

ಕನ್ಯಾ : ನಿಮ್ಮ ಚೌಕಟ್ಟಿನೊಳಗೇ ಎಲ್ಲರೂ ಬರಲಿ ಎಂದರೆ ಆದೀತೇ ? ಇನ್ನೊಬ್ಬರ ಸ್ವಂತಿಕೆಯನ್ನು ಗೌರವಿಸಿ ನೋಡಿ. ಇವತ್ತೆಲ್ಲಾ ಖುಷಿ ನಿಮಗೆ ಸಿಗುತ್ತದೆ.

ತುಲಾ : ಆಫೀಸಿನಲ್ಲಿ ವಾಗ್ವಾದವಿದೆ. ಜಟಾಪಟಿವರೆಗೆ ಹೋಗದಿರಲಿ. ಜೋಪಾನ. ಹಟಮಾರಿತನವನ್ನು ಇವತ್ತಿನ ಮಟ್ಟಿಗಾದರೂ ಬಿಟ್ಟುಬಿಡಿ.

ವೃಶ್ಚಿಕ : ಯಾಕೆ ಕಸಿವಿಸಿ. ಶುದ್ಧವಾಗಿರುವುದು ಕದಡುವುದು ಸುಲಭವೇ ? ಎಲ್ಲವೂ ಚೆನ್ನಾಗಿದ್ದರೂ ಸುಮ್ಮನೇ ತಲೆಬಿಸಿ ಮಾಡಿಕೊಳ್ಳುತ್ತೀರಿ. ಸಹೋದರ ಭೇಟಿಯಿಂದ ಒಳಗೊಳಗೇ ಹರ್ಷ.

ಧನಸ್ಸು :ಆಫೀಸಿನಲ್ಲಿ ನಿರಾಳ ನೆಮ್ಮದಿ ಇರುತ್ತದೆ. ಬಹಳ ದಿನಗಳ ನಂತರ ಉಲ್ಲಾಸಿತರಾಗಿ ಕೆಲಸಗಳಿಗಾಗಿ ಓಡಾಡುತ್ತೀರಿ. ತಕ್ಕ ಪ್ರತಿಫಲವೂ ನಿಮ್ಮದಾಗುತ್ತದೆ.

ಮಕರ : ಎಷ್ಟು ಹಚ್ಚಿಕೊಂಡವರು ಬೈದರೂ ಹಾಳಾಗದಷ್ಟು ಖುಷಿಯಾಗಿರುತ್ತೀರಿ. ಎಲ್ಲದಕ್ಕೂ ವ್ಯಾಖ್ಯಾನ ಬರೆಯುವ ಬುದ್ಧಿಯನ್ನು ಇನ್ನಾದರೂ ಬಿಡಬಾರದೇ.

ಕುಂಭ : ಗಣ್ಯರ ಭೇಟಿ. ಪ್ರತಿಷ್ಠೆಯ ದಿನ. ಕಳವಳ . ಏನೂ ಬೇಡ. ಎಲ್ಲವೂ ಚೆನ್ನಾಗಾಗುತ್ತದೆ. ಅಧಿಕ ಹಣವ್ಯಯ.

ಮೀನ : ಕಾಫಿಯೋ ಬೋರ್ನ್‌ವಿಟಾವೋ, ಎರಡೂ ಒಂದೇ. ಸುತ್ತ ಮುತ್ತ ನಡೆಯುವ ಬದಲಾವಣೆಗಳು ನಿಮ್ಮನ್ನು ತಲುಪುವ ಮಟ್ಟದಲ್ಲಿಲ್ಲ. ಆರಾಮವಾಗಿದ್ದು ಬಿಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X