ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಳೇಹಳ್ಳಿ ಗೊಲ್ಲರಹಟ್ಟಿಯಲ್ಲಿ 4 ಗುಡಿಸಲುಗಳು ಭಸ್ಮ, 1 ಸಾವು
ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹಳೇಹಳ್ಳಿ ಗೊಲ್ಲರ ಹಟ್ಟಿಯಲ್ಲಿ ಶುಕ್ರವಾರ ಸಂಜೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡ ಪರಿಣಾಮ 4 ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದು, 7 ವರ್ಷದ ಬಾಲಕನೊಬ್ಬ ಆಹುತಿಯಾಗಿದ್ದಾನೆ.
ತಿಪ್ಪೇಶಪ್ಪ ಎಂಬುವರ ಮಗ ರಮೇಶ ಶಾಲೆ ಮುಗಿಸಿಕೊಂಡು ಬಂದು ಗುಡಿಸಲಿನಲ್ಲಿ ಮಲಗಿದ್ದ. ಅವನು ಗುಡಿಸಲಿನಲ್ಲಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಈ ಅನಾಹುತದಲ್ಲಿ 1 ಎಮ್ಮೆ ಕರು ಹಾಗೂ 3 ಮೇಕೆ ಮರಿಗಳೂ ಸುಟ್ಟು ಹೋಗಿವೆ.
ಚಿತ್ರದುರ್ಗ ಜಿಲ್ಲಾ ಉಪ ವಿಭಾಗಾಧಿಕಾರಿ ಸೈಯಲ್ ಅಲಿ ರಿಜ್ವಿ ಸ್ಥಳಕ್ಕೆ ಭೇಟಿ ಕೊಟ್ಟು, ಸರ್ಕಾರದ ಪರವಾಗಿ ಪರಿಹಾರ ನೀಡಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ತಹಸಿಲ್ದಾರ್ ಅಪಘಾತ ಸಂಭವಿಸಿದ ಜಾಗೆಯಲ್ಲಿದ್ದರು.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]