ದೇವರು ಅವತಾರ ಎತ್ತುವ ಸಿದ್ಧಾಂತ ಮೇಲ್ಜಾತಿ ಸೃಷ್ಟಿಸಿದ ಶ್ರೇಷ್ಠ ಸುಳ್ಳು
ಮಂಗಳೂರು : ದೇವರು ಅವತಾರ ಎತ್ತುತ್ತಾನೆ ಎನ್ನುವುದು ಅತ್ಯಂತ ಶ್ರೇಷ್ಠ ಸುಳ್ಳು. ಅವತಾರ ಸಿದ್ಧಾಂತವು ಪುರೋಹಿತ ವರ್ಗ ಮತ್ತು ಮೇಲ್ಜಾತಿಯವರು ಸೃಷ್ಟಿಸಿರುವ ಶುದ್ಧ ಸುಳ್ಳು ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಜೀ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಡಿವೈಎಫ್ಐನ 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮೂರು ಹೊತ್ತೂ ಕರ್ತವ್ಯವನ್ನು ಮರೆತು ಪೂಜೆ ಮಾಡುವುದು ಪಾಪ ಎಂದು ಬಣ್ಣಿಸಿದರು. ಧರ್ಮ, ದೇವರ ಹೆಸರಿನಲ್ಲಿ ಶೋಷಣೆ, ವಂಚನೆ ಮಾಡಬಾರದು ಎಂದ ಸ್ವಾಮೀಜಿ, ವರ್ಣಭೇದವನ್ನು ಕಟುವಾಗಿ ಟೀಕಿಸಿದರು. ಅಸ್ಪೃಶ್ಯತೆ ಆಚರಿಸುವ ಗುಡಿ, ಮಂದಿರ, ಮಠಗಳಿಗೆ ಹೋಗುವುದಿಲ್ಲ ಎಂದು ಯುವಜನತೆ ಸಂಕಲ್ಪ ಮಾಡಬೇಕು. ಹಿಂದೂಗಳೆಲ್ಲರೂ ಒಂದು, ಹಿಂದುಗಳು ನಮ್ಮ ಬಂಧು ಎಂದು ಹೇಳುವ ಮಠಗಳಲ್ಲಿ ದಲಿತ, ಹರಿಜನ, ಹಿಂದುಳಿದ ವರ್ಗದವರಿಗೆ ಪೂಜೆ ಮಾಡಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.
ಕಸ ಚೆಲ್ಲುವವನು ಮೇಲು, ಕಸ ಎತ್ತುವವನು ಕೀಳು, ಹೊಲಸು ಮಾಡುವವ ಮೇಲು, ಹೊಲಸು ತೆಗೆಯುವವನು ಕೀಳು, ಇಂದು ವರ್ಣಭೇದದ ಕೊಡುಗೆ ಎಂದು ಸ್ವಾಮೀಜಿ ಖಂಡಿಸಿದರು. ಜಾತಿಯ ಕೇಂದ್ರಗಳಾಗುತ್ತಿರುವ ಮಠಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಅಯೋಧ್ಯೆ ವಿವಾದ : ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸುವುದನ್ನು ಬಿಟ್ಟು, ಅಲ್ಲಿ ರಕ್ತದ ಹೊಳೆ ಹರಿಸಲಾಗುತ್ತಿದೆ. ಕೋಮು ಸೌಹಾರ್ದಕ್ಕಾಗಿ ಅಲ್ಲಿರುವ ಅಂದಾಜು ಮೂರು ಎಕರೆ ಭೂಮಿಯನ್ನು ಹಿಂದೂ ಹಾಗೂ ಮುಸ್ಲಿಮರಿಗೆ ಸಮನಾಗಿ ಹಂಚಿ, ಹಿಂದುಗಳಿಂದ ಮಸೀದಿ ಕಟ್ಟಿಸಬೇಕು, ಅಂತೆಯೇ ಮುಸ್ಲಿಮರಿಂದ ರಾಮ ಮಂದಿರ ನಿರ್ಮಿಸಬೇಕು ಎಂದೂ ಸ್ವಾಮೀಜಿ ಸಲಹೆ ಮಾಡಿದರು.
ದಕ್ಷಿಣ ಕನ್ನಡ ಬೀಡಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್, ಕೃಷ್ಣಪ್ಪ ಕೊಂಚಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications