Get Updates
Get notified of breaking news, exclusive insights, and must-see stories!

ನೆಲ ಜಲಕ್ಕೆ ಹಾನಿ ಮಾಡುವ ಯೋಜನೆ ಬೇಕಿಲ್ಲ - ಬೇಡ್ತಿ ಸಮಾವೇಶ

ಕಾರವಾರ: ಅಭಿವೃದ್ಧಿಯ ಹೆಸರಲ್ಲಿ ಜಿಲ್ಲೆಯ ನೆಲ ಜಲಕ್ಕೆ ಹಾನಿಮಾಡುವ ಯಾವುದೇ ಯೋಜನೆಯನ್ನು ಶತಾಯ ಗತಾಯ ವಿರೋಧಿಸಲು ಯಲ್ಲಾಪುರದ ಮಾಗೋಡಿನಲ್ಲಿ ಇತ್ತೀಚೆಗೆ ನಡೆದ ಬೇಡ್ತಿ ಸಮಾವೇಶದಲ್ಲಿ ನಿರ್ಧರಿಸಲಾಯಿತು.

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರೇಂದ್ರ ಸ್ವಾಮೀಜಿಯವರು ಜಿಲ್ಲೆಯ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಬೇಕಿದೆ. ಇಲ್ಲಿನ ನೆಲ ಜಲ, ದುರುಪಯೋಗವಾಗಬಾರದು. ಅಭಿವೃದ್ಧಿಯ ಹೆಸರಲ್ಲಿ ಆಗುತ್ತಿರುವ ಪ್ರಕೃತಿ ನಾಶ ತಡೆಯಬೇಕು. ಸುಂದರ ಪರಿಸರವನ್ನು ಉಳಿಸಿ, ಬೆಳೆಸುವುದು, ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಸಮಾವೇಶದ ಉದ್ದೇಶ. ಜನಕ್ಕೆ, ಪರಿಸರಕ್ಕೆ ಧಕ್ಕೆಯಾಗದಂತಹ ಯೋಜನೆಗಳು ಬರಲಿ ಎಂದರು.

ಕೆ.ಎಂ. ಹೆಗಡೆ ಬೈರಂಬೆ ಅವರು ಗ್ರಾಮ ಹಿತಕ್ಕೆ ಯಾವುದು ಮುಖ್ಯ ಎಂಬುದರ ಬಗ್ಗೆ ಸ್ಪಷ್ಟ ಅರಿವು ಜನರಲ್ಲಿ ಮೂಡಬೇಕಿದೆ ಎಂದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರವಾಸೋದ್ಯಮ ಹಾಗು ತೋಟಗಾರಿಕೆ ಈ ಜಿಲ್ಲೆಗೆ ಸೂಕ್ತ . ಪರಿಸರ ವಿರೋಧಿ ಯೋಜನೆಯನ್ನು ತಡೆಗಟ್ಟುವ ಹೋರಾಟದ ಮುಂಚೂಣಿಯಲ್ಲಿ ನಾನಿರುವೆ ಎಂದು ಘೋಷಿಸಿದರು. ಇನ್ನೋರ್ವ ಅತಿಥಿ ಮಾಜಿ ಸಂಸದ ಅನಂತಕುಮಾರ್‌ ಮಾತನಾಡಿ ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಸದರ ಹಾಗೂ ಸಚಿವರ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು. ಶಾಸಕರಾದ ವಿವೇಕಾನಂದ ವೈದ್ಯ, ಪ್ರಮೋದ ಹೆಗಡೆ ರಮಾನಂದ ನಾಯಕ ಹಾಗೂ ಇನ್ನೂ ಅನೇಕ ಧುರೀಣರು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಹಸ್ರಾರು ಪರಿಸರವಾದಿಗಳ ಮೆರವಣಿಗೆ ತಂದಗುಳಿ ದೇವಸ್ಥಾನದಿಂದ ಆರಂಭವಾಗಿ ಕರಡಿಪಾಲು ಶಾಲಾ ಆವರಣದಲ್ಲಿ ಸಭೆಯ ಸೇರಿತು.

(ಕಾರವಾರ ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+