ಗೋರ್ಗೆ ಒಂದಿಷ್ಟು ಭರವಸೆ, ವಿವಾದಾತ್ಮಕ ಮತಪತ್ರಗಳು ಕೋರ್ಟಿಗೆ
ವಾಷಿಂಗ್ಟನ್ : ಕೊನೆಗೂ ಡೆಮಾಕ್ರಟಿಕ್ ಪಕ್ಷದ ಆಲ್ ಗೋರ್ಗೆ ಕೊಂಚ ಖುಷಿ ಕೊಡುವ ಸುದ್ದಿ ಬಂದಿದೆ. ಲಿಯಾನ್ ಪ್ರಾಂತ್ಯದ ಸರ್ಕಿಟ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸ್ಯಾಂಡರ್ಸ್ ಸಾಲ್ಸ್, ವಿವಾದಾತ್ಮಕ ಮತಪತ್ರಗಳನ್ನು ಹಾಗೂ ಮತಯಂತ್ರಗಳನ್ನು ಕೋರ್ಟಿಗೇ ತರುವಂತೆ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ 5 ಗಂಟೆ (ಭಾರತೀಯ ಕಾಲಮಾನ : ಶನಿವಾರ ಬೆಳಗಿನ ಜಾವ 3.30 ಗಂ.) ಗೆ ಮಿಯಾಮಿ ಡೇಡ್ ಹಾಗೂ ಪಾಲ್ಮ್ ಬೀಚ್ ಪ್ರಾಂತ್ಯಗಳ ಮತಪತ್ರಗಳು ಹಾಗೂ ಮತಯಂತ್ರಗಳನ್ನು ಕೋರ್ಟಿಗೆ ತರುವಂತೆ ಆದೇಶಿಸಿರುವ ಮುಖ್ಯ ನ್ಯಾಯಮೂರ್ತಿ ಸಾಲ್ಸ್, ಮತಪತ್ರಗಳನ್ನು ಮರು ಎಣಿಕೆ ಮಾಡುವ ಕುರಿತು ಏನೂ ಹೇಳಿಲ್ಲ.
ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ಡಿಸೆಂಬರ್ 6 ಅಥವಾ 7ರೊಳಗೆ ವಿಚಾರಣೆ ಪೂರ್ಣ ಮುಗಿಯುವ ನಿರೀಕ್ಷೆಯಿದೆ.
ಒಂದು ವೇಳೆ ಮತಗಳ ಮರು ಎಣಿಕೆ ಮಾಡಬೇಕೆಂದಾದರೆ ಎಲ್ಲಿ, ಯಾವ ರೀತಿಯಲ್ಲಿ ಮಾಡಬೇಕು, ಚುನಾವಣೆಯ ಗೆಲುವನ್ನು ಪ್ರಾಂತ್ಯವಾರು ಅಥವಾ ರಾಜ್ಯವಾರು ಜಯದಿಂದ ನಿರ್ಧರಿಸಬೇಕೆ ಎಂಬಿತ್ಯಾದಿ ಗೊಂದಲಗಳ ಬಗೆಗೆ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಎಲ್ಲಾ ವಿವಾದಿತ ಮತಪತ್ರಗಳ ಮರು ಎಣಿಕೆಯನ್ನೇ ನಾವು ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಗೋರ್ ಅವರ ವಕೀಲ ಡೇವಿಸ್ ಬೋಯಿಸ್.
ಮಿಯಾಮಿ ಡೇಡ್ ಪ್ರಾಂತ್ಯದ 10 ಸಾವಿರ ಹಾಗೂ ಪಾಲ್ಮ್ ಬೀಚ್ ಪ್ರಾಂತ್ಯದ 3,300 ಮತಗಳನ್ನು ತಕ್ಷಣವೇ ಮರು ಎಣಿಕೆ ಮಾಡಬೇಕೆಂಬ ಗೋರ್ ಅವರ ಅರ್ಜಿಯನ್ನು ರಾಜ್ಯದ ಮುಖ್ಯ ನ್ಯಾಯಮೂರ್ತಿ ಮಂಗಳವಾರ ತಳ್ಳಿ ಹಾಕಿದ್ದರು. ಫ್ಲೋರಿಡಾ ರಾಜ್ಯದಲ್ಲಿ ಜಾರ್ಜ್ ಡಬ್ಲ್ಯು ಬುಷ್ ಅವರು ಗೋರ್ ಅವರಿಗಿಂತ 537 ಹೆಚ್ಚು ಮತ ಗಳಿಸಿದ್ದಾರೆ.
(ಇನ್ಫೋ ವಾರ್ತೆ)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications