ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಅಯ್ಯಪ್ಪನ ಭಕ್ತರಿಗಾಗಿ ವಿಶೇಷ ಬಸ್‌ ಸೌಲಭ್ಯ

By Staff
|
Google Oneindia Kannada News

ಶಬರಿಮಲೆ : ಮಾಲೆ ಧರಿಸಿ, ಕಪ್ಪ ವಸ್ತ್ರ ತೊಟ್ಟು ಶಬರಿಗಿರಿಗೆ ಬಂದು ಸ್ವಾಮಿ ಅಯ್ಯಪ್ಪನ ದರ್ಶನ ಮಾಡುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯದಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಬಸ್‌ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಶಬರಿಮಲೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಡಿಸೆಂಬರ್‌ 1ರಿಂದ ಪಳನಿ, ತೆಂಕಾಶಿ, ಕೊಯಮತ್ತೂರು ನಡುವೆ ವಿಶೇಷ ಹಾಗೂ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲಾಗುತ್ತಿದೆ. ದೂರ ಪ್ರಯಾಣ ಕಾಲದಲ್ಲಿ ಬಸ್‌ ಕೆಟ್ಟು ಪ್ರಯಾಣಿಕರಿಗೆ ಉಂಟಾಗಬಹುದಾದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಲ್ಲಿ ಮೊಬೈಲ್‌ ವರ್ಕ್‌ಶಾಪ್‌ಗಳನ್ನೂ ಸ್ಥಾಪಿಸಲಾಗುತ್ತಿದೆ.

ಅಯ್ಯಪ್ಪನ ದರ್ಶನಕ್ಕೆ ಹಗಲಿರುಳೂ ಬರುವ ಭಕ್ತರ ಸೇವೆಯ ದೃಷ್ಟಿಯಿಂದ ಪಂಪಾದಿಂದ ತ್ರಿವೇಣಿಯವರೆಗಿನ ದಾರಿಯಲ್ಲಿ ಸುಮಾರು ಎರಡು ಸಾವಿರ ವಿದ್ಯುತ್‌ ದೀಪ ಅಳವಡಿಸಲು ವಿದ್ಯುತ್‌ ಮಂಡಳಿ ಕಾರ್ಯಪ್ರವೃತ್ತವಾಗಿದೆ. ಈ ಪ್ರದೇಶವನ್ನು ಶುಚಿಯಾಗಿಡುವ ಕಾರ್ಯಸಹ ಭರದಿಂದ ಸಾಗಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X