Get Updates
Get notified of breaking news, exclusive insights, and must-see stories!

ಉಡುಪಿಯಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆ

ಉಡುಪಿ : ಇಲ್ಲಿನ ಹವ್ಯಾಸಿ ರಂಗಕಲಾವಿದರು ದಿವಂಗತ ಟಿ.ಎಂ.ಎ.ಪೈ ಮತ್ತು ದಿವಂಗತ ಎಸ್‌.ಎಲ್‌. ನಾರಾಯಣ ಭಟ್‌ ಸ್ಮರಣಾರ್ಥ ರಾಜ್ಯಮಟ್ಟದ 21ನೇ ಕನ್ನಡ ನಾಟಕ ಸ್ಪರ್ಧೆ ನಡೆಸುತ್ತಿದ್ದಾರೆ. ಈ ಸ್ಪರ್ಧೆ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಆನಂದ ಗಾಣಿಗಾ ತಿಳಿಸಿದ್ದಾರೆ.

ಹವ್ಯಾಸಿ ನಾಟಕ ತಂಡಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇದೆ. ಕಾಸರಗೋಡು ಸೇರಿದಂತೆ ರಾಜ್ಯದ ತಂಡಗಳಲ್ಲಿ 15 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. 8 ಸಾವಿರ, 5 ಸಾವಿರ ಹಾಗೂ 3 ಸಾವಿರ ರುಪಾಯಿಗಳ ಮೂರು ಬಹುಮಾನ ಮತ್ತು ಪರ್ಯಾಯ ಫಲಕವನ್ನು ವಿಜೇತರಿಗೆ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ. ಇದಲ್ಲದೆ ಕೆಲವು ವೈಯಕ್ತಿಕ ವಿಶೇಷ ಬಹುಮಾನಗಳೂ ಇವೆ.

ಆಸಕ್ತರು ಪ್ರವೇಶ ಪತ್ರಗಳನ್ನು ಪ್ರಧಾನ ಕಾರ್ಯದರ್ಶಿ, ನಾಟಕ ಸ್ಪರ್ಧಾ ಸಮಿತಿ, ರಂಗಭೂಮಿ, ಅಜರಕಾಡು, ಉಡುಪಿ - 576 101 ವಿಳಾಸದಿಂದ ಪಡೆಯಬಹುದು. ಪ್ರವೇಶ ಪತ್ರ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್‌ 23

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+