Get Updates
Get notified of breaking news, exclusive insights, and must-see stories!

ವೀರಶೈವ ಗಣತಿ ಗೊಂದಲ ಬೇಡ ಎಂದು ಚಿ.ಮೂ

ಬೆಂಗಳೂರು: ವೀರಶೈವ-ಲಿಂಗಾಯುತರು ಎಂದು ಪ್ರತ್ಯೇಕವಾಗಿ ಜನಗಣತಿಯಲ್ಲಿ ಬರೆಯಬೇಕೆಂದು ಕೆಲವರು ಹೇಳುತ್ತಿರುವುದಕ್ಕೆ ಸೊಪ್ಪು ಹಾಕಬಾರದೆಂದು ಸಂಶೋಧಕ, ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಸಂಚಾಲಕ ಡಾ. ಎಂ. ಚಿದಾನಂದಮೂರ್ತಿ ಹೇಳಿದ್ದಾರೆ.

ಹಿಂದೂ ವಿವಾಹ ಮತ್ತು ದತ್ತಕ ಕಾನೂನುಗಳಲ್ಲಿ ವೀರಶೈವರು ಹಿಂದೂಗಳೆಂದು ಸ್ಪಷ್ಟವಾಗಿರುವುದರಿಂದ ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಶುಕ್ರವಾರ ಹೇಳಿರುವ ಚಿ.ಮೂ, ಜನಗಣತಿಯಲ್ಲಿ ಬೇರೆ ಬರೆಸಿದರೆ ಏನೂ ಲಾಭ ಸಿಗಲಾರದು. ಈ ಸಂಬಂಧ ಕೆಲವು ಜನಗಣತಿ ಅಧಿಕಾರಿಗಳೊಂದಿಗೆ ತಾವು ಮಾತುಕತೆ ನಡೆಸಿದ್ದು ಅವರೂ ತಮ್ಮ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮ್ಮ ಅಭಿಪ್ರಾಯಕ್ಕೆ ಸಿದ್ಧಗಂಗೆಯ ಡಾ. ಶಿವಕುಮಾರಸ್ವಾಮಿ ಹಾಗೂ ರಂಭಾಪುರಿ ಜಗದ್ಗುರುಗಳು ಸಹಮತ ವ್ಯಕ್ತಪಡಿಸಿರುವುದನ್ನು ಸ್ಮರಿಸಿರುವ ಅವರು ಈ ಬಗ್ಗೆ ಗೊಂದಲ ಬೇಡ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+