Get Updates
Get notified of breaking news, exclusive insights, and must-see stories!

--ನ-ಮ್ಮ ಪಾ-ಡಿ-ಗೆ ನಮ್ಮ ಬಿಡಿ : ಅ-ಜಲು ಪದ್ಧ-ತಿ ನಿಷೇ-ಧ-ಕ್ಕೆ ಕೊರ-ಗ-ರ ಕ್ರೋ-ಧ

ಕಿನ್ನಿಗೋಳಿ : ತಲೆ ಮೇಲೆ ಮಲ ಹೊರುವ ಪದ್ಧತಿಗಿಂತಲೂ ಹೀನವಾದ ಅಜಲು ಪದ್ಧತಿಯ-ನ್ನು ನಿಷೇಧಿ-ಸಿ-ರು-ವ ಸರ್ಕಾ-ರ-ದ ಕ್ರಮ-ವನ್ನು ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಒಕ್ಕೂಟ ವಿರೋಧಿಸಿದೆ.

ಕೇವಲ ಕೊರಗ ಜಾತಿಯವರಿಗಷ್ಟೇ ಮೀಸಲಾಗಿರುವ ಅಜಲು ಪದ್ಧತಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾರವಾರಗ ಜಿಲ್ಲೆ-ಗಳಲ್ಲಿ ಆಚರಣೆಯಲ್ಲಿದೆ. ಅಜಲು ಪದ್ಧತಿಯ ಪ್ರಕಾರ ರೋಗಿಯಾಬ್ಬನ ಕೂದಲು ಮತ್ತು ಉಗುರುಗಳನ್ನು ಅನ್ನದಲ್ಲಿ ಬೆರೆಸಿ, ಕೊರಗ ಜನಾಂಗದವರನ್ನು ಮನೆಗೆ ಕರೆದು ತಿನ್ನಿಸಲಾಗುವುದು. ಇದರಿಂದಾಗಿ ರೋಗಿ ಗುಣಮುಖನಾಗುತ್ತಾನೆ ಎಂಬ ನಂಬಿಕೆ ಕರಾವಳಿಯ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡು ಬಂದಿದೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಅಜಲು ಪದ್ಧತಿಯ ನಿಷೇಧಕ್ಕೆ ಕರಾವಳಿಯ ಸಂಘ ಸಂಸ್ಥೆಗಳು ಹೋರಾಡುತ್ತಿದ್ದವು. ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕವಿ, ಜಿ.ಎಸ್‌. ಸಿದ್ಧಲಿಂಗಯ್ಯ ಈ ಪದ್ಧತಿಯ ನಿರ್ಮೂಲನೆಗಾಗಿ ಆಗ್ರಹಿಸಿದ್ದರು. ವಿಧಾನಸಭೆಯಲ್ಲಿಯೂ ಈ ವಿಷಯದ ಕುರಿತು ಸಾಕಷ್ಟು ಚರ್ಚೆಗಳು ನಡೆದು ಇದೀಗ ರಾಜ್ಯಪಾಲೆ ವಿ.ಎಸ್‌. ರಮಾದೇವಿ ಅಜಲು ಪದ್ಧತಿಯನ್ನು ನಿಷೇಧಿಸಿ ಆಜ್ಞೆ ಹೊರಡಿಸಿದ್ದಾರೆ.

ಆದರೆ ಅಜಲು ಪದ್ದತಿಗೆ ಬಲಿಯಾಗಿದ್ದ ಕೊರಗ ಸಮುದಾಯವೇ ಈ ನಿಷೇಧವನ್ನು ವಿರೋಧಿಸಿದೆ. ಕೊರಗ ಸಮುದಾಯದ ಪ್ರಮುಖರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ, ಕೊರಗರು ಹೇಗೆ ಜೀವನ ನಡೆಸುತ್ತಿದ್ದಾರೆ ಎನ್ನುವುದನ್ನು ಅಧ್ಯಯನ ನಡೆಸದೇ ಮತ್ತು ಅವರು ಹೇಗೆ ಜೀವಿಸಬೇಕು ಎಂಬ ಬಗ್ಗೆ ಯಾವುದೇ ಮಾರ್ಗದರ್ಶಿ ಸೂತ್ರ ರಚಿಸದೇ ಏಕಾಏಕಿ ಅಜಲು ಪದ್ಧತಿಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದಿದ್ದಾರೆ. ಅನಾದಿ ಕಾಲದಿಂದಲೂ ಬಂದಿರುವ ಕುಲ ಕಸುಬಿನ ಹಕ್ಕನ್ನು ಕಿತ್ತು ಕೊಳ್ಳುವುದರಿಂದ ಬದುಕುವುದಕ್ಕೆ ತೊಂದರೆಯಾಗುತ್ತದೆ. ಕೊರಗರ ಶೋಷಣೆಯನ್ನು ಸರಕಾರ ವಿರೋಧಿಸಲಿ, ಆದರೆ ಊರಿನ ಜನಜೀವನದೊಂದಿಗೆ ಸಹಜವಾಗಿ ಬದುಕುತ್ತಿರುವ ಕೊರಗರು ಮತ್ತು ಗ್ರಾಮಸ್ಥರ ಸಂಬಂಧಕ್ಕೆ ಹುಳಿ ಹಿಂಡಿ, ಓಟ್‌ ಬ್ಯಾಂಕ್‌ ನಿರ್ಮಿಸುವ ಈ ತಂತ್ರವನ್ನು ಕೊರಗ ಸಮುದಾಯ ವಿರೋಧಿಸುತ್ತದೆ ಎಂದು ಸುದ್ದಿ ಗೋ-ಷ್ಠಿಯಲ್ಲಿ ಹಾಜರಿದ್ದ ಕೊರಗ ಸಮುದಾಯದ ಪ್ರಮುಖರು ಹೇಳಿದ್ದಾರೆ.

(ಇನ್ಫೋ- ವಾ-ರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+