ಶಾಂತಿ ಕಾಪಾಡಲು ‘ರಜನಿ ರಸಿಗರ್ ಮಂದ್ರ’ ಗಸ್ತು
ದಿಂಬಂ : ಚಾಮರಾಜನಗರ ಮತ್ತು ಸತ್ಯಮಂಗಲಂನ ಹಳ್ಳಿಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ರಜನಿಕಾಂತ್ ಅಭಿಮಾನಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.
‘ರಜನಿ ರಸಿಗರ್ ಮಂದ್ರಂ’ ಎಂಬ ರಜನಿ ಅಭಿಮಾನಿಗಳ ಸಂಘದ ಸದಸ್ಯರು ತಂಡ ತಂಡಗಳಾಗಿ ಹಳ್ಳಿಗಳಲ್ಲಿ ಸುತ್ತುತ್ತಿದ್ದು, ಜನ ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಗೋಪಾಲ್ ಮೂಲಕ ರಾಜ್ ಅವರಿಗೆ ರಜನಿಕಾಂತ್ ಕ್ಯಾಸೆಟ್ಟನ್ನು ಕಳುಹಿಸಿಕೊಟ್ಟ ಮೇಲಂತೂ ಸದಸ್ಯರು ಮತ್ತಷ್ಟು ಚಟುವಟಿಕೆಯಿಂದಿದ್ದಾರೆ. ಮನೆಯ ಚಿಂತೆ ಬಿಟ್ಟು ನಾಡಿನ ಶಾಂತಿ ಕಾಪಾಡುವ ಕಾಯಕದಲ್ಲಿ ಮುಳುಗಿದ್ದಾರೆ.
ಸತ್ಯಮಂಗಲಂ ತಾಲೂಕಿನ 3 ಹೋಬಳಿಗಳಲ್ಲಿ ರಜನಿ ಅಭಿಮಾನಿಗಳ ಸಂಖ್ಯೆ 10 ಸಾವಿರದಷ್ಟಿದೆ. ಸತ್ಯಮಂಗಲಂ ಪಟ್ಟಣದಲ್ಲೇ 250ಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ತಮಿಳುನಾಡಿನ ಹಳ್ಳಿಗಳಲ್ಲಿರುವ ಕನ್ನಡಿಗರ ಹಾಗೂ ತಮಿಳರ ನಡುವೆ ಸೌಹಾರ್ದತೆ ಬಿತ್ತಿ, ಯಾವುದೇ ಭಿನ್ನಾಭಿಪ್ರಾಯಗಳೂ ಮೂಡದಂತೆ ಈ ಅಭಿಮಾನಿಗಳು ನಿಗಾ ವಹಿಸಿದ್ದಾರೆ. ಮಂದ್ರಂ ಅಧ್ಯಕ್ಷ ಎಸ್.ಎಂ. ದಯಾಳನ್ ಹೀಗೆನ್ನುತ್ತಾರೆ- ‘ಇಲ್ಲಿರುವ ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬ ಭರವಸೆ ನಮಗಿದೆ. ಈ ಕಾರಣಕ್ಕಾಗೇ ನಾವು ಶಾಂತಿಗೆ ಭಂಗ ತರುವ ಯಾವುದೇ ಘಟನೆ ನಡೆಯದಂತೆ ತೀವ್ರ ನಿಗಾ ವಹಿಸಿದ್ದೇವೆ’.
‘ಕರ್ನಾಟಕದಲ್ಲಿನ ಕೆಲವು ರಾಜ್ ಅಭಿಮಾನಿಗಳು ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗಲು ಸಿದ್ಧರಾದಂತೆ ನಾವೂ ಕಾಡಿಗೆ ನುಗ್ಗಲು ಸಿದ್ಧ. ಆದರೆ ಅದಕ್ಕೆ ರಜನಿಕಾಂತ್ ಅಪ್ಪಣೆ ಇತ್ತಿಲ್ಲವಾದ್ದರಿಂದ, ಅವರ ಇಮೇಜಿಗೆ ಚ್ಯುತಿ ತರಬಾರದೆಂದು ಸುಮ್ಮನಿದ್ದೇವೆ’ ಎನ್ನುತ್ತಾರೆ ದಯಾಳನ್.
(ಇನ್ಫೋ ವಾರ್ತೆ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications