ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೃಂದಾವನಕ್ಕೆ ಅಮ್ಯೂಸ್ಮೆಂಟ್ ಪಾರ್ಕ್ ಮೆರುಗು ನೀಡಲು ನಿರ್ಧಾರ
ಮೈಸೂರು : ಕೆಆರ್ಎಸ್ನ ಬೃಂದಾವನವನ್ನು ಅಂತರರಾಷ್ಟ್ರೀಯ ಮಟ್ಟದ ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ.
ಭಾರೀ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ವರುಣಾ ನಾಲೆ ಮೇಲು ಕಾಲುವೆಯನ್ನು ಮಂಗಳವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಉದ್ಯಾನವನವನ್ನು ನವೀಕರಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಗೆ ನೀಲಿ ನಕಾಶೆ ಸಿದ್ಧ ಪಡಿಸುವಂತೆ ಹೇಳಲಾಗಿದೆ. ನಂತರ ತಜ್ಞರೊಡನೆ ಚರ್ಚಿಸಿ, ಸಲಹೆ ಪಡೆದು, ಹಣ ಬಿಡುಗಡೆ ಮಾಡಲಾಗುವುದು ಎಂದರು.
ಈಗ ಬೃಂದಾವನದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಜನ ಟೀವಿಯಲ್ಲಿ ನೋಡುವ ಅಮೆರಿಕೆಯ ಅಮ್ಯೂಸ್ಮೆಂಟ್ ಪಾರ್ಕ್, ಡಿಸ್ನಿಲ್ಯಾಂಡ್ಗಳಂಥ ಅಂತರರಾಷ್ಟ್ರೀಯ ಉದ್ಯಾನವನಗಳನ್ನೇ ನೋಡಬಯಸುತ್ತಾರೆ. ಅಂತಹವರ ಆಸೆಯನ್ನು ಬೃಂದಾವನ ಪೂರೈಸಲಿದೆ. ಅಲ್ಲಿ ಮಕ್ಕಳ ಆಟಗಳು, ಜಲಕ್ರೀಡೆ ಮುಂತಾದ ಮನಸ್ಸಿಗೆ ಮುದ ನೀಡುವ ಮನರಂಜನೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
(ಇನ್ಫೋ ವಾರ್ತೆ)
Comments
Story first published: Wednesday, August 30, 2000, 0:00 [IST]