ಚಿಕ್ಕಕೆರೆಯಲ್ಲಿ ಬಿದ್ದವನಿಗೆದೊಡ್ಡಕೆರೆಯಲ್ಲಿ ಸ್ವಾಗತ
*ಕರಿಸ್ವಾಮಿ ಕೆ.
ಭಾರತದಲ್ಲಿ ಮಹಾಶಿವರಾತ್ರಿ ಮತ್ತು ಯುಗಾದಿಯ ನಂತರ ಸಾಲುಸಾಲಾಗಿ ಬರುವ ಹಬ್ಬಗಳನ್ನು ಶ್ರಾವಣ ಮಾಸ ಉದ್ಘಾಟಿಸುತ್ತದೆ. ಶ್ರಾವಣದ ಹಬ್ಬಗಳು ಅಮಲು ಇರುವಾಗಲೇ ಹೆಗಲೇರಿ ಬರುವ ಗಣೇಶ ಕೊಟ್ಯಾಂತರ ಭಕ್ತರ ಪಾಲಿನ ವಿಘ್ನವಿನಾಶಕ, ಆದಿಮ ದೇವರು. ಎಲ್ಲ ಮೊದಲುಗಳಿಗೂ ಕಾರಣಕರ್ತ.
ಮನೆ-ಮನಗಳಲ್ಲಿ ಪೂಜೆಗೊಳ್ಳುವ ಗಣಪ ಸಾಂಘಿಕವಾಗಿ ಪೂಜೆಗೊಳ್ಳುವ ಮೂಲಕ ಹತ್ತಾರು ಅಭಿರುಚಿಯ ಜನರನ್ನು ಒಂದೇ ವೇದಿಕೆಯಡಿ ಕರೆತರುವಷ್ಚು ಶಕ್ತಿ ಪಡೆದಿದ್ದಾನೆ. ಬಹುಶಃ ಸ್ಥಳೀಯವಾಗಿ ರಾಜ್ಯೋತ್ಸವದಂಥ ಐತಿಹಾಸಿಕ ಹಬ್ಬ ಹೊರತುಪಡಿಸಿದರೆ ಗುಂಪಾಗಿ ಆಚರಿಸುವ ಸಾಂಸ್ಕೃತಿದ ಹಬ್ಬಗಳಲ್ಲಿ ಮತ್ತೆ ಗಣಪನ ಹಬ್ಬಕ್ಕೆ ಅಗ್ರ ಸ್ಥಾನ .
ಹಾಗೆ ನೋಡಿದರೆ ನವೆಂಬರ್ನಲ್ಲಿ ಬರುವ ರಾಜ್ಯೋತ್ಸವಕ್ಕೆ ಸಂಘಸಂಸ್ಥೆಗಳನ್ನು ಸಿದ್ಧಪಡಿಸುವ, ಜಾಗೃತಿಗೊಳಿಸುವವನೇ ಗಣಪ. ಗಣೇಶೋತ್ಸವಕ್ಕೆ ಎಚ್ಚರಗೊಳ್ಳುವ ಸಂಘಸಂಸ್ಥೆಗಳು ಮತ್ತೆ ನವೆಂಬರ್ ನಂತರ , ಇನ್ನೊಮ್ಮೆ ಗಣೇಶೋತ್ಸವ ಬರುವ ತನಕ ಮಲಗುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಗಣೇಶೋತ್ಸವ ಯುವಕ ಸಂಘಗಳು ಮತ್ತು ರಾಜ್ಯೋತ್ಸವ ಸಂಘಗಳು ಬಹುತೇಕ ಬೇರೆ ಬೇರೆಯಾದರೂ ಒಂದರ್ಥದಲ್ಲಿ ಆಚರಣೆಗೆ ಪರೋಕ್ಷವಾಗಿ ಪೈಪೋಟಿಗಿಳಿಯುತ್ತವೆ. ಕೆಲವು ಸಂಸ್ಥೆಗಳಂತೂ ಎರಡೂ ರೀತಿಯ ಉತ್ಸವಗಳನ್ನೂ ಆಚರಿಸುತ್ತವೆ.
ಇದೆಲ್ಲಾ ಎನೇ ಇದ್ದರೂ ಗಣೇಶೋತ್ಸವದಂಥ ಸಾಂಸ್ಕೃತಿಕ ಉತ್ಸವದಿಂದ ಜನರನ್ನು ಹೇಗೆ ಸಂಘಟಿಸಬಹುದೆಂದು ಆರಿತಿದ್ದ ಲೋಕಮಾನ್ಯ ಭಾಲಗಂಗಾಧರ ತಿಲಕರು ಸ್ವಾತಂತ್ರೋತ್ಸವ ಸಮರಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಆಯಾಮನ್ನೇ ನೀಡಿದ್ದು ಈಗ ಇತಿಹಾಸ ಅಷ್ಟೇ. ಸಾಂಸ್ಕೃತಿಕ ಮತ್ತು ಪೌರಾಣಿಕ ಕಾರಣಗಳು ಜನರನ್ನು ಹೆಚ್ಚು ಸೆಳೆಯುವ, ಭಾವನಾತ್ಮಕವಾಗಿ ಒಂದುಗೂಡಿಸುವ ಮಹತ್ವದ ಶಕ್ತಿ ಪಡೆದಿರುವುದನ್ನು ಗುರುತಿಸಿದ್ದ ಗಾಂಧೀಜಿ ಮತ್ತು ತಿಲಕರು ಸ್ವಾತಂತ್ರೋತ್ತರ ಇತಿಹಾಸದಲ್ಲಿ ಜನರನ್ನು ಬ್ರೀಟೀಷರ ವಿರುದ್ಧ ಸಂಘಟಿಸುವಲ್ಲಿ ಮಾಡಿದ ಸಾಧನೆಗಳ ಹಿನ್ನಲೆಯಲ್ಲಿ ಗಣೇಶೋತ್ಸವ ಸೇರಿದಂತೆ ಅನೇಕ ಸಾಂಸ್ಕೃತಿಕ ಉತ್ಸವಗಳು ನೆನಪಾಗುತ್ತವೆ.
ಗಣೇಶೋತ್ಸವ ಇವತ್ತಿಗೂ ಮುಖ್ಯ : ಇಂಥ ಎಲ್ಲ ಸಾಧ್ಯತೆಗಳನ್ನು ಒಳಗೊಂಡ ಉತ್ಸವಗಳ ಮಹತ್ವ, ಸೂಕ್ಷ್ಮವಾಗಿ ಯೋಚಿಸುವ ಯಾರಿಗಾದರೂ ಹೊಳೆದೀತು. ಇವತ್ತಿಗೂ ಕೂಡ ಹಲವು ವಿಶಿಷ್ಟ ಕಾರಣಗಳಿಗಾಗಿ ಗಣೇಶೋತ್ಸವ ಬಹಳ ಮುಖ್ಯವಾದುದಾಗಿದೆ. ಅದರಲ್ಲೂ ಸಂಘಸಂಸ್ಥೆಗಳು ಆಚರಿಸುವುದಕ್ಕಂತೂ ಬೇರೆಯದೇ ಆದ ಅರ್ಥಗಳುಂಟು. ಮಹಾರಾಷ್ಟ್ರದಲ್ಲಿ ಕನಿಷ್ಟ 10 ದಿನ ನಡೆಯುವ ಗಣೇಶೋತ್ಸವ ಇವತ್ತಿಗೂ ಮೊದಲ ಜನಪ್ರಿಯ ಹಬ್ಬ. ರಾಷ್ಟ್ರಾದ್ಯಂತ ಸಾಮೂಹಿಕವಾಗಿ ಆಚರಿಸಲಾಗುವ ಗಣೇಶೋತ್ಸವದ ರಂಗು ಮನೆಗಳ ಹೊಸಿಲು ದಾಟಿ ಬಿದಿಯ ಕೊನೆಯವರಿಗೂ ಬರುತ್ತದೆ. ಹಾಗೆ ನೋಡಿದರೆ ಸರಾಸರಿ ಒಂದು ವಾರ ಭರ್ಜರಿ ಭರಾಟೆ ಇದ್ದೇ ಇರುತ್ತದೆ.
ಅನೇಕ ಹೊಸ-ಹಳೆಯ ಪ್ರತಿಭೆಗಳಿಗೆ ಸಾಮಾಹಿಕವಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುವ ಗಣೇಶೋತ್ಸವ, ಸ್ಪರ್ಧೆಗಳನ್ನೂ ಒಡ್ಡುತ್ತದೆ. ಗಾಯನ, ನಟನೆ, ನೃತ್ಯ ಎಲ್ಲಕ್ಕೂ ಇಲ್ಲಿ ಜಾಗವುಂಟು. ಹಿರಿಯರಿಗೆ ಸನ್ಮಾನಗಳುಂಟು, ಕಿರಿಯರಿಗೆ ಪ್ರೋತ್ಸಾಹವುಂಟು. ತೀರ್ಥ-ಪ್ರಸಾದಗಳುಂಟು. ತಪ್ಪುಗಳನ್ನೆಲ್ಲಾ ಒಪ್ಪಿಸಿ ಕ್ಷಮೆ ದಯಪಾಲಿಸುವಂತೆ ಉದ್ದಂಡ ನಮಸ್ಕಾರ ಹಾಕುವ ವಾಡಿಕೆಯುಂಟು. ಅಪ್ಪಿ-ತಪ್ಪಿ ಚೌತಿಯ ಚಂದ್ರನ ನೋಡಿದವರಿಗೆ ಶಮಂತಕೋಪಾಖ್ಯಾನ ಕಥೆಯ ಪರಿಹಾರವೂ ಇದೆ. ಕಂಡೂ, ಕಾಣದೆ ಮಾಡಿದ ತಪ್ಪುಗಳನ್ನು ಆತನ ತಲೆಯ ಮೇಲೆ ಹಾಕಿ ಹಗುರಾಗುವವರೂ, ನಿತ್ಯ ಅಭಿಷೇಕ ಮಾಡಿಸುವವರೂ, ಮುಂದಿನ ಬಾರಿಗೆ ಹರಕೆ ಹೊರುವವರೂ ಎಲ್ಲರೂ ಒಗ್ಗೂಡುವುದು ಸಂಘವೊಂದು ಭರ್ಜರಿಯಾಗಿ ಉತ್ಸವ ಏರ್ಪಡಿಸಿದಾಗ. ಜಾನಪದ ಹಾಡು, ಸುಗ್ಗಿ ಕುಣಿತಗಳು ಗ್ರಾಮೀಣ ಪ್ರದೇಶದಲ್ಲಿ ಗಣೇಶೋತ್ಸವಕ್ಕೆ ಹೊಸ ರಂಗು ತರುತ್ತವೆ.
ಇಷ್ಟೇಲ್ಲಾ ಹೇಳಿದ ಮೇಲೆ ಗಣೇಶನ ಹೆಸರಿನಲ್ಲಿ ನಡೆಯುವ ಹಾವಳಿಗಳ ಬಗ್ಗೆ ಹೇಳಲೇಬೇಕು. ಗಣೇಶೋತ್ಸವದ ಹೆಸರಿನಲ್ಲಿ ನಡೆಯುವ ಬಲವಂತದ ವಸೂಲಿಗಳು ಮತ್ತು ಅದಕ್ಕೆ ಸಾರ್ವಜನಿಕರಿಗೆ ಉತ್ತರದಾಯಿತ್ವ ಇಲ್ಲದಿರುವುದು ಅನಧಿಕೃತ ದಂಧೆಗೆ ಅವಕಾಶ ಮಾಡಿಕೊಡುತ್ತಿದೆ. ಇವತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟ ಬೇಡ, ಚಿಕ್ಕ ಗ್ರಾಮವೊಂದರ ಗಣೇಶೋತ್ಸವ ಸಮಿತಿಗೆ ಅಧ್ಯಕ್ಷರಾಗಲು ಚುನಾವಣೆ ಬಿಸಿಗಿಂತಲೂ ಮಿಗಿಲಾದ ಪೈಪೋಟಿ ಏರ್ಪಡುತ್ತದೆ. ಇಂಥ ಅಸಹ್ಯ ಪೈಪೋಟಿ ವಶೀಲಿ-ಬಾಜಿ ನೋಡಿ ನಾಗರಿಕರಿಗೆ ಇನ್ನೊಂದು ರೀತಿಯ ಜಿಗುಪ್ಸೆ ಈಗಾಗಲೇ ಆರಂಭವಾಗಿದೆ. ಇನ್ನು ಆನಗತ್ಯ ಶಬ್ಧಮಾಲಿನ್ಯಕ್ಕೆ ಕಡಿವಾಣ ಹಾಕಲು ಯಾವ ಕ್ರಮ ತೆಗೆದುಕೊಳ್ಳಬೇಕೋ ತಿಳಿಯುವುದಿಲ್ಲ. ಚಿಕ್ಕವರು ಮತ್ತು ಓದುತ್ತಿರುವ ಮಕ್ಕಳು ಹಾಗೂ ಅನಾರೋಗ್ಯ ಪೀಡಿತರ ಪಾಲಿಗೆ ಗಣೇಶನನ್ನು ಶತೃವನ್ನಾಗಿ ಉತ್ಸವ ಸಮಿತಿಯ ಜನ ಬಿಂಬಿಸುತ್ತಾರೆ. ವರ್ಷವಿಡಿ ವಿದ್ಯುತ್ ಕೊರತೆಯಿಂದ ಬಳಲುವ ಜನರಿಗೆ, ಮುಖ್ಯವಾಗಿ ರೈತರಿಗೆ ತೊಂದರೆಯನ್ನು ಪರೋಕ್ಷವಾಗಿ ಗಣೇಶ ಕೊಡುತ್ತಾನೆ. ಇಂಥ ವೇಳೆಯಲ್ಲಿ ದೇವರ ಹೆಸರಲ್ಲಿ ನಡೆಯುವ ವಿದ್ಯುತ್ಕಳ್ಳತನಕ್ಕೆ ಲೆಕ್ಕ ಇಟ್ಟರೆ ಕೆಇಬಿಗೆ ಆಗುತ್ತಿರುವ ಖೋತಾ ವಿದ್ಯುತ್ ಪ್ರಮಾಣ ಗೊತ್ತಾಗುತ್ತದೆ. ಇದಕ್ಕೆಲ್ಲಾ ಎಂದಿಗೆ ಕೊನೆ ವಿಘ್ನೕಶ್ವರಾ?
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications