ಮಸ್ಕಿ ನಾಲೆ : ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ !
ಇನ್ಫೋ ಪ್ರತಿನಿಧಿಯಿಂದ
ರಾಯಚೂರು : ಹೈದರಾಬಾದ್ ನಿಜಾಮರ ಕಾಲದ ಪರಿಕಲ್ಪನೆಯಿದು. ಪ್ರಜಾರಾಜ್ಯ ಆಡಳಿತಕ್ಕೆ ಬಂದು, ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಈ ಕಲ್ಪನೆ ಈವರೆಗೆ ಸಾಕಾರಗೊಂಡಿಲ್ಲ. ಶತಮಾನ ಕಂಡ ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ನಾಲಾ ಯೋಜನೆ ಒಂದರ್ಥದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!
ಒಂದೂವರೆ ದಶಕದ ಹಿಂದೆ ಯೋಜನೆಯ ರೂಪುರೇಷೆ ಅಂತಿಮಗೊಂಡು ಆಡಳಿತಾತ್ಮಕ, ತಾಂತ್ರಿಕ ಮಂಜೂರಾತಿ ಪಡೆದಾಗ ಯೋಜನೆಯ ಆಂದಾಜು ವೆಚ್ಚ 311 ಲಕ್ಷ ರುಪಾಯಿಗಳು. ಇದರಿಂದ 7 ಸಾವಿರ ಎಕರೆ ಬರಡು ಭೂಮಿಗೆ ನೀರುಣಿಸುವ ಸೌಭಾಗ್ಯ. ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಬಳಲಿದ ಈ ಯೋಜನೆ ಹಲವು ವರ್ಷಗಳ ಕಾಲ ಕಡತದಲ್ಲೇ ಕೊಳೆಯುತ್ತಾ ನೆನಪಾದಾಗೊಮ್ಮೆ ಕಾಗದದಲ್ಲೇ ಯೋಜನಾತ್ಮಕ ಪರಿಷ್ಕರಣೆ ಆಗುತ್ತಲೇ ನಡೆಯಿತು. ಕಾಮಗಾರಿ ಅನುಷ್ಠಾನಕ್ಕೆ ಬಂದ ನಂತರ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡವರಂತೆ ಒಂದಿಲ್ಲೊಂದು ತಾಂತ್ರಿಕ ಅಡಚಣೆಯಲ್ಲಿ ಬೇಗನೆ ಕೆಲಸ ಮುಗಿಯದಂತೆ ನೋಡಿಕೊಂಡರು.
ತತ್ಪರಿಣಾಮವಾಗಿ ಈ ಯೋಜನೆಯ ವೆಚ್ಚವೀಗ 35 ಕೋಟಿ ರುಪಾಯಿಗಳಿಗೇರಿದೆ. ಕೆಲಸ ಮಾತ್ರ ಇನ್ನೂ ಉಳಿದುಕೊಂಡಿದೆ. ಸಾಲ ಒದಗಿಸಿದ ನಬಾರ್ಡ್ ಸಂಸ್ಥೆ 1999ರ ಮಾರ್ಚ್ನಲ್ಲೊಮ್ಮೆ ವಿಧಿಸಿದ ಗಡುವನ್ನು ಎರಡು ಬಾರಿ ವಿಸ್ತರಿಸಿದ್ದು, ಈ ವರ್ಷದ ಡಿಸೆಂಬರ್ನೊಳಗೆ ಕೆಲಸ ಮುಗಿಸಿ ರೈತರಿಗೆ ನೀರಾವರಿ ಸೌಕರ್ಯ ಒದಗಿಸಲು ತಾಕೀತು ಮಾಡಿದೆ. ನೀರಾವರಿ ಸಚಿವ ಎಚ್. ಕೆ. ಪಾಟೀಲರು ಯೋಜನಾ ಗಾತ್ರ ಮತ್ತು ನೀರಾವರಿ ಸೌಲಭ್ಯದ ಉದ್ಗಾರವೆತ್ತಿ ನಬಾರ್ಡ್ನಂತೆಯೇ ಲಕ್ಷ್ಮಣರೇಖೆ ಹಾಕಿದ್ದಾರೆ. ನಿಗದಿತ ಗಡುವಿನಲ್ಲಿ ಕೆಲಸ ಮುಗಿಯುವುದೋ ಅಥವಾ ಮತ್ತೊಮ್ಮೆ ಯೋಜನಾ ಗಾತ್ರದ ವೆಚ್ಚ ಪರಿಷ್ಕೃವಾಗುವುದೋ ಕಾದು ನೋಡಬೇಕು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications