ಅವಳಿ ನಗರ ಕಾಡುತ್ತಿರುವ ಕರಳುಬೇನೆ
ಹುಬ್ಬಳ್ಳಿ : ಕರ್ನಾಟಕದ ' ಎರಡನೇ ರಾಜಧಾನಿ" ಎಂದೇ ಹೇಳಲಾದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕರುಳು ಬೇನೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ದಿನೇ-ದಿ-ನೇ ಏರುತ್ತಲೇ ಇದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 95 ಮಂದಿ ಅತಿಸಾರದಿಂದ ವಿವಿಧ ಆಸ್ಪತ್ರೆಗಳಿಗೆ ಸೇರಿದ್ದಾರೆ. ಧಾರವಾಡ ಜಿಲ್ಲಾ ಆಸ್ಪತ್ರೆಗೆ 22 ಮಂದಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 18 ಮಂದಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30, ಹುಬ್ಬಳ್ಳಿ-ಧಾರವಾಡ ದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ 25 ಮಂದಿ ಕಳೆದ 24 ತಾಸುಗಳ ಅವಧಿಯಲ್ಲಿ ದಾಖಲಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶಿರ-ಸಿ-ಯ-ಲ್ಲಿ ಸಂಸ್ಕೃತ ಸಮ್ಮೇಳನ : ಸಂಸ್ಕೃತ ವರ್ಷಾಚರಣೆಯ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನವು ಮೇ 10ರಂದ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲಾ ಸಂಸ್ಕೃತ ವರ್ಷ ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ(ಅಶೀಸರ) ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹಿರಿಯ ಪತ್ರಕರ್ತ ಕೆ. ಶ್ಯಾಮರಾವ್ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸುವರು.
ನೇಮಕ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಬಿ.ಜೆ.ಪಿ.ಯ ಬಿ.ಎಸ್ ಪಾಟೀಲ್ ನೇಮಕವಾಗಿದ್ದಾರೆಂದು ಆ ಪಕ್ಷದ ಹುಬ್ಬಳ್ಳಿ-ಧಾರವಾಡ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪಾಲಿಕೆಯಲ್ಲಿ
ಬಿ.ಜೆ.ಪಿ.
ವಿರೋಧ
ಪಕ್ಷವಾಗಿದೆ.
ಧಾರವಾಡದ
9ನೇ
ವಾರ್ಡನ್ನು
ಪಾಲಿಕೆಯಲ್ಲಿ
ಪ್ರತಿನಿಧಿಸುವ
ಬಿ.ಎಸ್
ಪಾಟೀಲರು
ಬಿ.ಎ.
ಪದವೀಧರರು.
ವೃತ್ತಿಯಲ್ಲಿ
ಕೃಷಿಕರು.