ವ್ಯಕ್ತಿಚಿತ್ರಣ ಕಟ್ಟಿಕೊಡುವಲ್ಲಿ ನಿಸಾರ್ ಸಾಧಿಸಿದ ಕೌಶಲ್ಯ

ಕೇವಲ ದಿನದ ದಿನಚರಿಗೆ ಮಾತ್ರ ಸೀಮಿತಗೊಳ್ಳದೆ ಮಾಸ್ತಿಯವರ ಸಂಪೂರ್ಣ ಬದುಕು, ಸ್ವಭಾವ, ವ್ಯಕ್ತಿತ್ವ, ನಡೆನುಡಿಗಳ ರೂಪ ಸ್ವರೂಪವನ್ನು ವಿವಿಧ ಕೋನಗಳಿಂದ ಅಳೆದು ಕವಿ ನಿಸಾರ್ ಕೊಡುತ್ತಾರೆ. ಈ ಕವಿತೆಯ ನಿರೂಪಕನಿಗೆ ಮಾಸ್ತಿ ಗಾಂಧಿಬಜಾರಿನಲ್ಲಿ ಎದುರಾಗುವ ಪ್ರಕ್ರಿಯೆಯು ಸೋಜಿಗದಂತಿದೆ. ಅವರ ಸಮಯ ಪರಿಪಾಲನೆಯಲ್ಲಿ ತೋರಿಸಿಕೊಡುತ್ತದೆ. ಮಾಸ್ತಿ ಎದುರಾಗಿ ಹಾದು ಹೋದಾಗಲೆಲ್ಲ ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆ ನಗರಕ್ಕೆ ಸಂದಂತೆ ಭಾಸವಾಗುವುದನ್ನು ಸೂಚಿಸುತ್ತಾರೆ.
ಮಾಸ್ತಿ ವಾಸವಾಗಿದ್ದ ಬೆಂಗಳೂರಿನ ಗವಿಪುರಂ ಹಾಗೂ ಸಂಜೆ ಅವರ ತಮ್ಮ ಗೆಳೆಯರ ಸಂಸರ್ಗಕ್ಕಾಗಿ ನಡೆದು ಬರುತ್ತಿದ್ದ ಗಾಂಧಿಬಜಾರಿನ ಕ್ಲಬ್ಬನ್ನು ಈ ಕಾಲದ ಓದುಗನ ಕಣ್ಣಿಗೆ ಕಟ್ಟುವಂತೆ ಕವಿ ಚಿತ್ರಿಸುತ್ತಾರೆ. ಮಾಸ್ತಿಯವರನ್ನು ನೋಡುವುದೆಂದರೆ ಕಳೆದುಹೋದ ಜೀವನದೊಂದು ರೀತಿಯನ್ನು ಹಾಗೂ ಸರಳ ಸದಭಿರುಚಿಯ ಖ್ಯಾತಿಯನ್ನು ಸ್ಪರ್ಶಿಸಿದಂತೆ ಎಂದು ಹೇಳುವ ಮೂಲಕ ಅವರ ಬಗೆಗಿನ ಗೌರವ ಇಮ್ಮಡಿಗೊಳ್ಳುವಂತೆ ನಿಸಾರ್ ಈ ಕವಿತೆಯನ್ನು ಬರೆದಿದ್ದಾರೆ.












Click it and Unblock the Notifications