ಕವನ : 'ಚಿರದುಃಖಿನಿ' ಬರೆದವರು ಗೌರಮ್ಮ
ಇವರ ಎಲ್ಲಾ ಕವನಗಳು ಛಂದಸ್ಸಿಗೆ ಒಳಪಟ್ಟಿರುವುದರಿಂದ, ಇವುಗಳೆಲ್ಲವನ್ನೂ ಹಾಡಬಹುದಾಗಿದೆ. ಇವರ ಅನೇಕ ಕವನಗಳು ಪ್ರಬುದ್ಧ ಕರ್ನಾಟಕ ಮತ್ತು ಕನ್ನಡ ನುಡಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಪ್ರಸ್ತುತ ಕವನ ಚಿರದುಃಖಿನಿ 10ನೇ ತರಗತಿ ಪಠ್ಯಪುಸ್ತಕದಲ್ಲಿ (1948) ಸೇರ್ಪಡೆಯಾಗಿತ್ತು; ತದನಂತರ, ಈ ಕವನ 'ಹೂ ಗೊಂಚಲು' ಸಂಕಲನದಲ್ಲಿ ಸೇರಿಕೊಂಡಿತ್ತು*. ಕವನವನ್ನು ಹಾಡಿಕೊಳ್ಳುವಂತೆ ಓದಿ. ನಂತರ ಅದರ ವಿಮರ್ಶೆ ಓದಲು ತೊಡಗಿರಿ. ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಿರಿ. [ಕವನದ ವಿಶ್ಲೇಷಣೆ ಮತ್ತು ವಿಮರ್ಶೆ ಓದಿರಿ]
ಭಾರತದ
ಸತ್ಕಥೆಯನಿದುವರೆಗೆ
ಅರಿಯದಿಹ
|
ಭಾರತೀಯರೊಳಾವ
ನೋರ್ವನಿಲ್ಲ
||
ಭಾರತವನೋದಿರ್ಪೊಡಾತನಿಗೆ
ನಾರಿಮಣಿ
|
ಗಾಂಧಾರಿ
ಎಂಬುವಳ
ಹೆಸರು
ಹೊಸದಲ್ಲ
||1||
ಆದರಾಕೆಯ
ಅಂತರಂಗದೊಳು
ಸಂತತವು
|
ಕುದಿವಳಲ
ಪರಿಯ
ಗಮನಿಸುವರಿಲ್ಲ
||
ಕುಂತಿದೇವಿಗೆ
ಮರುಗುವಂದದಲಿ
ಗಾಂಧಾರಿ
|
ಗಿನಿತು
ಮನಕರಗುವರು
ಬಹಳ
ಜನರಿಲ್ಲ
||2||
ವಿಶ್ವದೊಳಗಿನ
ಅಳಲ
ರಾಶಿ
ರಾಶಿಯು
ಸೇರಿ
|
ಮೂರ್ತಿಯೇ
ಇವಳೆಂಬವೊಲು
ಜಗಕೆ
ತೋರಿ
||
ಸಂತೋಷಲೇಶವನು
ಕಡೆತನಕ
ಕಾಣದೆಯೆ
|
ಜೀವನದಿ
ತೊಳಲಿದಳು
ನಾರಿ
ಗಾಂಧಾರಿ
||3||
ಬುದ್ಧಿಯರಿಯುವ
ಮುನ್ನ
ತಾಯನಗಲಿದ
ಅಳಲು
|
ಸೋದರನ
ಮಾತಿನಲಿ
ನಂಬುಗೆಯನಿಟ್ಟು
||
ಭಾವಚಿತ್ರವ
ಮೆಚ್ಚಿ
ನಿಜವನರಿಯದ
ಅಳಲು
|
ಅಂಧನನು
ಕೈವಿಡಿಯೆ
ವಿಧಿಗೈದ
ಗುಟ್ಟು
||4||
ಅಂದೆ
ಕಡೆಯಾದುದವಳಾಸೆ
ಸುಖ
ಸಂತೋಷ
|
ಅಂದೆ
ಹುಡಿಯಾಯ್ತವಳು
ಕಲ್ಪಿಸಿದ
ಕನಸು
||
ಅಂದಿನಿಂದಾಕೆಗೈಶ್ವರ್ಯ
ಸಾಮ್ರಾಜ್ಯ
ಸುಖ
|
ವೆಂಬುಗಳಾಯ್ತು
ಬರಿ
ಹಗಲುಗನಸು
||5||
ತುಟಿಯಲ್ಲೆ
ಅಡಗಿದುದು
ಸಹಜತರದೆಳೆನಗೆಯು
|
ಸುಮ್ಮನೇ
ಮಿಡುಕುತಿಹುದವಳ
ಜೀವ
||
ಏರು
ಜೌವನದಾಸೆ
ತನುವನೇ
ಸುಡುತಿರಲು
|
ಹೇಳಳಾರಿಗು
ತನ್ನ
ಮನದ
ನೋವ
||6||
ಲೇಶ
ಸುಖವರಿಯದಿಹ
ತನ್ನ
ಬಾಳನೆ
ಜರಿದು
|
ಮರಣವನು
ನಿಶ್ಚೈಸಿ
ಯಮುನೆಗೈತಹಳು
||
ಮರುಗಳಿಗಯಲಿ
ಪತಿಗೆ
ಮೋಸಮಾಳ್ಪುದೆ
ಎನುತ
|
ಚಿಂತಿಸುತ
ಹಿಂಜರಿದು
ಹಿಂತಿರುಗಿ
ಬಹಳು
||7||
ಆರೊಡನೆ
ನುಡಿಯಳುಲ್ಲಾಸದಲಿ
ಸಿಂಗರಿಸಿ
|
ಹಬ್ಬ
ಉತ್ಸವವೆಂದು
ನಲಿಯದಿಹಳು
||
ಆವ
ದೈವವ
ಬೇಡಳಾವ
ಕೋರಿಕೆಗಳನು
|
ಆವುದನು
ನಿಟ್ಟಿಸದೆ
ಕುರುಡಿಯಂತಿಹಳು
||8||
ಕುರುಕುಲದ
ವೈಭವಕೆ
ಹಿಗ್ಗದಾಕೆಯ
ಮನವು
|
ತಾಯ್ತನದ
ಹೆಚ್ಚಳಕೆ
ನಲಿಯದಿಹುದು
||
ಎಳೆಯತನದಲಿ
ತನ್ನ
ಕೆಳದಿಯರ
ಕೂಡೊಂದು
|
ದಿನ
ನಡೆದ
ದೃಶ್ಯವನು
ನೆನೆಯುತಿಹುದು
||9||
ಚಿತ್ರಶಾಲೆಯೊಳಂದು
ಪಂಥವೊಂದಿಹುದೆಂದು
|
ಕೆಳದಿಯರು
ಅಧಿಕ
ಉತ್ಸಾಹದಲಿ
ಕೂಡಿ
||
ಬಾ
ನಿನ್ನ
ಕೈಚಳಕವನು
ತೋರಿಸೆಂದೆನುತ
|
ಕರೆಯೆ
ತಾನೈತಂದಳವರ
ಜೊತೆಗೂಡಿ
||10||
ತನ್ನವೊಲು
ಚಿತ್ರವನು
ಬರೆವರಾರೆಂದೆನುತ
|
ಹೆಮ್ಮೆಯಲಿ
ಬೀಗಿ
ಪಂಥವನು
ಸೇರಿ
||
ಕೆಲ
ಬಲವ
ದಿಟ್ಟಿಸದೆ
ಬರೆಯುತಿರ್ದಳು
ಕೈಯ
|
ಚಳಕದಲಿ
ಚಿತ್ರವನು
ಚದುರೆ
ಗಾಂಧಾರಿ
||11||
ಚಿತ್ರವನು
ಚಿತ್ರಿಸುವ
ಪಂಥವನು
ಗೆಲಲೆಂಬ
|
ಆತುರದಿ
ಕಂಗಳನು
ಬರೆಯೆ
ಮರೆದಿರಲು
||
ಕೆಳದಿಯರು
ಕೈಹೊಯ್ದು
ನಿನ್ನ
ಚಿತ್ರದ
ಬೊಂಬೆ
|
ಹುಟ್ಟಂಧ
ನೋಡೆಂದು
ಗಹಗಹಿಸುತಿರಲು
||12||
ಅಂದಿನಾ
ಹುಡುಗಾಟ
ಇಂದು
ಬಾಳುವೆಯೂಟ
|
ಸಂದುದೆಷ್ಟೋ
ವರ್ಷ
ಆ
ಕೃತ್ಯ
ನಡೆದು
||
ಎಂದೆಂದಿಗದು
ಚಿತ್ತದಿಂದ
ಮಾಸದೆ
ಇಹುದು
|
ಬೇರೊಂದ
ನೆನೆವುದಕೆ
ಅವಕಾಶ
ಕೊಡದು
||13||
ನೂರು
ಮಕ್ಕಳ
ಹಡೆದರೇನಾಯ್ತು
ಜಗಕವರು
|
ಕ್ರೂರಾತ್ಮರೆಂದೆನಿಸಿ
ಕಣ್ಣಿದಿರಿನಲ್ಲಿ
||
ಹರಣವನು
ತಾವ್
ತೊರೆಯೆ
ಅವರ
ಸತಿಯರ
ಭಾಗ್ಯ
|
ಹರಿಯೆ
ಸಹಿಸುವಳೆಂತು
ತನ್ನ
ಮನದಲ್ಲಿ
||14||
ಅಂಧಪತಿ
ಜೋಡಾಗಿ
ಅಳಲುಗಳ
ನಾಡಾಗಿ
|
ಕಣ್ಣಿದ್ದು
ಕುರುಡಾಗಿ
ಸುಯ್ವದಡಿಗಡಿಗೆ
||
ಕ್ಲೇಶಗಳ
ಬೀಡಾಗಿ
ಸುತನಷ್ಟಕೀಡಾಗಿ
|
ತನುವಿಂದ
ಮರೆಯಾದುದವಳಾತ್ಮ
ಕಡೆಗೆ
||15||
* ಗ್ರಂಥಋಣ : ಹೂ ಗೊಂಚಲು, ಎಂ.ಬಿ. ಗೌರಮ್ಮ, ಮಾತಾ ಮುದ್ರಣ, ತುಮಕೂರು, 1990.