ಕವನ : 'ಚಿರದುಃಖಿನಿ' ಬರೆದವರು ಗೌರಮ್ಮ

ಇವರ ಎಲ್ಲಾ ಕವನಗಳು ಛಂದಸ್ಸಿಗೆ ಒಳಪಟ್ಟಿರುವುದರಿಂದ, ಇವುಗಳೆಲ್ಲವನ್ನೂ ಹಾಡಬಹುದಾಗಿದೆ. ಇವರ ಅನೇಕ ಕವನಗಳು ಪ್ರಬುದ್ಧ ಕರ್ನಾಟಕ ಮತ್ತು ಕನ್ನಡ ನುಡಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಪ್ರಸ್ತುತ ಕವನ ಚಿರದುಃಖಿನಿ 10ನೇ ತರಗತಿ ಪಠ್ಯಪುಸ್ತಕದಲ್ಲಿ (1948) ಸೇರ್ಪಡೆಯಾಗಿತ್ತು; ತದನಂತರ, ಈ ಕವನ 'ಹೂ ಗೊಂಚಲು' ಸಂಕಲನದಲ್ಲಿ ಸೇರಿಕೊಂಡಿತ್ತು*. ಕವನವನ್ನು ಹಾಡಿಕೊಳ್ಳುವಂತೆ ಓದಿ. ನಂತರ ಅದರ ವಿಮರ್ಶೆ ಓದಲು ತೊಡಗಿರಿ. ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಿರಿ. [ಕವನದ ವಿಶ್ಲೇಷಣೆ ಮತ್ತು ವಿಮರ್ಶೆ ಓದಿರಿ]
ಭಾರತದ ಸತ್ಕಥೆಯನಿದುವರೆಗೆ ಅರಿಯದಿಹ |
ಭಾರತೀಯರೊಳಾವ ನೋರ್ವನಿಲ್ಲ ||
ಭಾರತವನೋದಿರ್ಪೊಡಾತನಿಗೆ ನಾರಿಮಣಿ |
ಗಾಂಧಾರಿ ಎಂಬುವಳ ಹೆಸರು ಹೊಸದಲ್ಲ ||1||
ಆದರಾಕೆಯ ಅಂತರಂಗದೊಳು ಸಂತತವು |
ಕುದಿವಳಲ ಪರಿಯ ಗಮನಿಸುವರಿಲ್ಲ ||
ಕುಂತಿದೇವಿಗೆ ಮರುಗುವಂದದಲಿ ಗಾಂಧಾರಿ |
ಗಿನಿತು ಮನಕರಗುವರು ಬಹಳ ಜನರಿಲ್ಲ ||2||
ವಿಶ್ವದೊಳಗಿನ ಅಳಲ ರಾಶಿ ರಾಶಿಯು ಸೇರಿ |
ಮೂರ್ತಿಯೇ ಇವಳೆಂಬವೊಲು ಜಗಕೆ ತೋರಿ ||
ಸಂತೋಷಲೇಶವನು ಕಡೆತನಕ ಕಾಣದೆಯೆ |
ಜೀವನದಿ ತೊಳಲಿದಳು ನಾರಿ ಗಾಂಧಾರಿ ||3||
ಬುದ್ಧಿಯರಿಯುವ ಮುನ್ನ ತಾಯನಗಲಿದ ಅಳಲು |
ಸೋದರನ ಮಾತಿನಲಿ ನಂಬುಗೆಯನಿಟ್ಟು ||
ಭಾವಚಿತ್ರವ ಮೆಚ್ಚಿ ನಿಜವನರಿಯದ ಅಳಲು |
ಅಂಧನನು ಕೈವಿಡಿಯೆ ವಿಧಿಗೈದ ಗುಟ್ಟು ||4||
ಅಂದೆ ಕಡೆಯಾದುದವಳಾಸೆ ಸುಖ ಸಂತೋಷ |
ಅಂದೆ ಹುಡಿಯಾಯ್ತವಳು ಕಲ್ಪಿಸಿದ ಕನಸು ||
ಅಂದಿನಿಂದಾಕೆಗೈಶ್ವರ್ಯ ಸಾಮ್ರಾಜ್ಯ ಸುಖ |
ವೆಂಬುಗಳಾಯ್ತು ಬರಿ ಹಗಲುಗನಸು ||5||
ತುಟಿಯಲ್ಲೆ ಅಡಗಿದುದು ಸಹಜತರದೆಳೆನಗೆಯು |
ಸುಮ್ಮನೇ ಮಿಡುಕುತಿಹುದವಳ ಜೀವ ||
ಏರು ಜೌವನದಾಸೆ ತನುವನೇ ಸುಡುತಿರಲು |
ಹೇಳಳಾರಿಗು ತನ್ನ ಮನದ ನೋವ ||6||
ಲೇಶ ಸುಖವರಿಯದಿಹ ತನ್ನ ಬಾಳನೆ ಜರಿದು |
ಮರಣವನು ನಿಶ್ಚೈಸಿ ಯಮುನೆಗೈತಹಳು ||
ಮರುಗಳಿಗಯಲಿ ಪತಿಗೆ ಮೋಸಮಾಳ್ಪುದೆ ಎನುತ |
ಚಿಂತಿಸುತ ಹಿಂಜರಿದು ಹಿಂತಿರುಗಿ ಬಹಳು ||7||
ಆರೊಡನೆ ನುಡಿಯಳುಲ್ಲಾಸದಲಿ ಸಿಂಗರಿಸಿ |
ಹಬ್ಬ ಉತ್ಸವವೆಂದು ನಲಿಯದಿಹಳು ||
ಆವ ದೈವವ ಬೇಡಳಾವ ಕೋರಿಕೆಗಳನು |
ಆವುದನು ನಿಟ್ಟಿಸದೆ ಕುರುಡಿಯಂತಿಹಳು ||8||
ಕುರುಕುಲದ ವೈಭವಕೆ ಹಿಗ್ಗದಾಕೆಯ ಮನವು |
ತಾಯ್ತನದ ಹೆಚ್ಚಳಕೆ ನಲಿಯದಿಹುದು ||
ಎಳೆಯತನದಲಿ ತನ್ನ ಕೆಳದಿಯರ ಕೂಡೊಂದು |
ದಿನ ನಡೆದ ದೃಶ್ಯವನು ನೆನೆಯುತಿಹುದು ||9||
ಚಿತ್ರಶಾಲೆಯೊಳಂದು ಪಂಥವೊಂದಿಹುದೆಂದು |
ಕೆಳದಿಯರು ಅಧಿಕ ಉತ್ಸಾಹದಲಿ ಕೂಡಿ ||
ಬಾ ನಿನ್ನ ಕೈಚಳಕವನು ತೋರಿಸೆಂದೆನುತ |
ಕರೆಯೆ ತಾನೈತಂದಳವರ ಜೊತೆಗೂಡಿ ||10||
ತನ್ನವೊಲು ಚಿತ್ರವನು ಬರೆವರಾರೆಂದೆನುತ |
ಹೆಮ್ಮೆಯಲಿ ಬೀಗಿ ಪಂಥವನು ಸೇರಿ ||
ಕೆಲ ಬಲವ ದಿಟ್ಟಿಸದೆ ಬರೆಯುತಿರ್ದಳು ಕೈಯ |
ಚಳಕದಲಿ ಚಿತ್ರವನು ಚದುರೆ ಗಾಂಧಾರಿ ||11||
ಚಿತ್ರವನು ಚಿತ್ರಿಸುವ ಪಂಥವನು ಗೆಲಲೆಂಬ |
ಆತುರದಿ ಕಂಗಳನು ಬರೆಯೆ ಮರೆದಿರಲು ||
ಕೆಳದಿಯರು ಕೈಹೊಯ್ದು ನಿನ್ನ ಚಿತ್ರದ ಬೊಂಬೆ |
ಹುಟ್ಟಂಧ ನೋಡೆಂದು ಗಹಗಹಿಸುತಿರಲು ||12||
ಅಂದಿನಾ ಹುಡುಗಾಟ ಇಂದು ಬಾಳುವೆಯೂಟ |
ಸಂದುದೆಷ್ಟೋ ವರ್ಷ ಆ ಕೃತ್ಯ ನಡೆದು ||
ಎಂದೆಂದಿಗದು ಚಿತ್ತದಿಂದ ಮಾಸದೆ ಇಹುದು |
ಬೇರೊಂದ ನೆನೆವುದಕೆ ಅವಕಾಶ ಕೊಡದು ||13||
ನೂರು ಮಕ್ಕಳ ಹಡೆದರೇನಾಯ್ತು ಜಗಕವರು |
ಕ್ರೂರಾತ್ಮರೆಂದೆನಿಸಿ ಕಣ್ಣಿದಿರಿನಲ್ಲಿ ||
ಹರಣವನು ತಾವ್ ತೊರೆಯೆ ಅವರ ಸತಿಯರ ಭಾಗ್ಯ |
ಹರಿಯೆ ಸಹಿಸುವಳೆಂತು ತನ್ನ ಮನದಲ್ಲಿ ||14||
ಅಂಧಪತಿ ಜೋಡಾಗಿ ಅಳಲುಗಳ ನಾಡಾಗಿ |
ಕಣ್ಣಿದ್ದು ಕುರುಡಾಗಿ ಸುಯ್ವದಡಿಗಡಿಗೆ ||
ಕ್ಲೇಶಗಳ ಬೀಡಾಗಿ ಸುತನಷ್ಟಕೀಡಾಗಿ |
ತನುವಿಂದ ಮರೆಯಾದುದವಳಾತ್ಮ ಕಡೆಗೆ ||15||
* ಗ್ರಂಥಋಣ : ಹೂ ಗೊಂಚಲು, ಎಂ.ಬಿ. ಗೌರಮ್ಮ, ಮಾತಾ ಮುದ್ರಣ, ತುಮಕೂರು, 1990.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications